ಬೆಳಗಾವಿ: ಕೇಂದ್ರ ಕೃಷಿ ಮತ್ತು ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಜಿತ್ ಕುಮಾರ ಸಾಹು ನೇತೃತ್ವದ ತಂಡ ಕೇಂದ್ರ ಅಧ್ಯಯನ ತಂಡ ಬೈಲಹೊಂಗಲ ತಾಲ್ಲೂಕಿನ ಕಲಕುಪ್ಪಿ, ನೇಸರಗಿಯಲ್ಲಿ ಬರ ಪರಿಶೀಲಿಸಿತು.
'ನಮ್ಮದು 4 ಎಕರೆ, 30 ಗುಂಟೆ ಜಮೀನಿದೆ. ಮಳೆ ಕೈಕೊಟ್ಟಿದ್ದಕ್ಕೆ ಸೋಯಾಬೀನ್ ಬೆಳೆಯೇ ಬಂದಿಲ್ಲ. ಕೃಷಿಗೆ ವ್ಯಯಿಸಿದ ವೆಚ್ಚ ಬರುವುದು ಕಷ್ಟವಾಗಿದೆ' ಎಂದು ರೈತ ಮಹಿಳೆ ಕಮಲವ್ವ ನಡಟ್ಟಿ ಅಳಲು ತೋಡಿಕೊಂಡರು.