<p><strong>ಅಥಣಿ:</strong> ಯುವಕರು ಹೊಸ ಉದ್ಯಮದತ್ತ ಮುಖಮಾಡಿದರೆ ನಿರುದ್ಯೋಗ ಸಮಸ್ಯೆ ತಾನಾಗೆ ಪರಿಹಾರ ಆಗುತ್ತದೆ ಎಂದು ಶಾಸಕ ರಮೇಶ ಜಾರಕಿಹೋಳಿ ಹೇಳಿದರು .</p>.<p>ಪಟ್ಟಣದಲ್ಲಿ ಮಂಗಳವಾರ ಆರ್.ಎಸ್.ಪಿ ಲ್ಯಾಂಡ್ ಡೆವಲಪರ್ಸ್ ಕಚೇರಿ ಉದ್ಘಾಟಿಸಿ ಮಾತನಾಡಿದರು.</p>.<p>ಈಗಿನ ಯುವಕರು ಸರಕಾರಿ ನೌಕರಿಗಾಗಿ ಕಾದು ತಮ್ಮ ಅರ್ಧ ವಯಸ್ಸು ಕಳೆದುಕೊಳ್ಳತ್ತಾರೆ. ನಂತರ ನಿರುದ್ಯೋಗಕ್ಕೆ ಒಳಗಾಗುತ್ತಾರೆ. ಸರ್ಕಾರಿ ನೌಕರಿಗಾಗಿ ಪ್ರಯತ್ನಿಸುವದೊಂದೆ ನಮ್ಮ ಉದ್ದೇಶವಾಗಬಾರದು. ನಾವೇ ಉದ್ಯೋಗ ಸೃಷ್ಟಿ ಮಾಡುವತ್ತ ಮನಸ್ಸು ಮಾಡಬೇಕು. ಯುವಕರು ನಿರುದ್ಯೋಗದಿಂದ ಹೊರ ಬರಬೇಕು ಎಂದು ಹೇಳಿದರು.</p>.<p>ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆರ್.ಎಸ್.ಪಿ ಸಮುಹ ಸಂಸ್ಥೆ ಮುಖ್ಯಸ್ಥ ರವಿ ಪೂಜಾರಿ ಮಾತನಾಡಿ, ‘ಜೀವನದಲ್ಲಿ ನಾವಷ್ಟೆ ಬೆಳೆಯಬೇಕು ಎಂಬ ಆಸೆ ಇಟ್ಟುಕೊಂಡರೆ ನಮ್ಮ ಬೇಳವಣಿಗೆಯಲ್ಲಿ ಹಿನ್ನಡೆ ಆಗುತ್ತದೆ. ನಾವು ಹಿರಿಯರನ್ನು ಗೌರವಿಸಿಕೊಂಡು, ಕಿರಿಯರನ್ನು ಮುನ್ನೆಡೆಸಿಕೊಂಡು ಜೀವನ ಸಾಗಿಸಬೇಕು ಎಂದು ಹೇಳಿದರು.</p>.<p>ಮಾಜಿ ಸಚಿವ ಶ್ರೀಮಂತ ಪಾಟೀಲ,ಮಾಜಿ ಶಾಸಕ ಮಹೇಶ ಕುಮಠಳ್ಳಿ, ಮುಖಂಡರಾದ ಧರೇಪ್ಪಾ ಠಕ್ಕಣ್ಣವರ, ನಾನಾಸಾಬ ಅವತಾಡೆ, ರಾವಸಾಬ ಪಾಟೀಲ, ಸಂತೋಷ ಕಕಮರಿ, ರಾಜೇಂದ್ರ ಐಹೋಳೆ, ಅಶೋಕ ಯಲ್ಲಡಗಿ, ಸತ್ಯಪ್ಪಾ ಬಾಗೆನ್ನವರ, ಮಲ್ಲಿಕಾರ್ಜುನ ಅಂದಾನಿ, ಚಿದಾನಂದ ಶೇಗುಣಸಿ, ಸಂಗಮೇಶ ಇಂಗಳಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಥಣಿ:</strong> ಯುವಕರು ಹೊಸ ಉದ್ಯಮದತ್ತ ಮುಖಮಾಡಿದರೆ ನಿರುದ್ಯೋಗ ಸಮಸ್ಯೆ ತಾನಾಗೆ ಪರಿಹಾರ ಆಗುತ್ತದೆ ಎಂದು ಶಾಸಕ ರಮೇಶ ಜಾರಕಿಹೋಳಿ ಹೇಳಿದರು .</p>.<p>ಪಟ್ಟಣದಲ್ಲಿ ಮಂಗಳವಾರ ಆರ್.ಎಸ್.ಪಿ ಲ್ಯಾಂಡ್ ಡೆವಲಪರ್ಸ್ ಕಚೇರಿ ಉದ್ಘಾಟಿಸಿ ಮಾತನಾಡಿದರು.</p>.<p>ಈಗಿನ ಯುವಕರು ಸರಕಾರಿ ನೌಕರಿಗಾಗಿ ಕಾದು ತಮ್ಮ ಅರ್ಧ ವಯಸ್ಸು ಕಳೆದುಕೊಳ್ಳತ್ತಾರೆ. ನಂತರ ನಿರುದ್ಯೋಗಕ್ಕೆ ಒಳಗಾಗುತ್ತಾರೆ. ಸರ್ಕಾರಿ ನೌಕರಿಗಾಗಿ ಪ್ರಯತ್ನಿಸುವದೊಂದೆ ನಮ್ಮ ಉದ್ದೇಶವಾಗಬಾರದು. ನಾವೇ ಉದ್ಯೋಗ ಸೃಷ್ಟಿ ಮಾಡುವತ್ತ ಮನಸ್ಸು ಮಾಡಬೇಕು. ಯುವಕರು ನಿರುದ್ಯೋಗದಿಂದ ಹೊರ ಬರಬೇಕು ಎಂದು ಹೇಳಿದರು.</p>.<p>ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆರ್.ಎಸ್.ಪಿ ಸಮುಹ ಸಂಸ್ಥೆ ಮುಖ್ಯಸ್ಥ ರವಿ ಪೂಜಾರಿ ಮಾತನಾಡಿ, ‘ಜೀವನದಲ್ಲಿ ನಾವಷ್ಟೆ ಬೆಳೆಯಬೇಕು ಎಂಬ ಆಸೆ ಇಟ್ಟುಕೊಂಡರೆ ನಮ್ಮ ಬೇಳವಣಿಗೆಯಲ್ಲಿ ಹಿನ್ನಡೆ ಆಗುತ್ತದೆ. ನಾವು ಹಿರಿಯರನ್ನು ಗೌರವಿಸಿಕೊಂಡು, ಕಿರಿಯರನ್ನು ಮುನ್ನೆಡೆಸಿಕೊಂಡು ಜೀವನ ಸಾಗಿಸಬೇಕು ಎಂದು ಹೇಳಿದರು.</p>.<p>ಮಾಜಿ ಸಚಿವ ಶ್ರೀಮಂತ ಪಾಟೀಲ,ಮಾಜಿ ಶಾಸಕ ಮಹೇಶ ಕುಮಠಳ್ಳಿ, ಮುಖಂಡರಾದ ಧರೇಪ್ಪಾ ಠಕ್ಕಣ್ಣವರ, ನಾನಾಸಾಬ ಅವತಾಡೆ, ರಾವಸಾಬ ಪಾಟೀಲ, ಸಂತೋಷ ಕಕಮರಿ, ರಾಜೇಂದ್ರ ಐಹೋಳೆ, ಅಶೋಕ ಯಲ್ಲಡಗಿ, ಸತ್ಯಪ್ಪಾ ಬಾಗೆನ್ನವರ, ಮಲ್ಲಿಕಾರ್ಜುನ ಅಂದಾನಿ, ಚಿದಾನಂದ ಶೇಗುಣಸಿ, ಸಂಗಮೇಶ ಇಂಗಳಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>