‘ನನ್ನ ಪತಿ ರಾಮಚಂದ್ರ ಸ್ಥಳೀಯ ಕೃಷಿಪತ್ತಿನ ಸಹಕಾರ ಬ್ಯಾಂಕ್ನಲ್ಲಿ ₹60 ಸಾವಿರ, ಕೆವಿಜಿ ಬ್ಯಾಂಕಿನ ಬೆಂಢವಾಡ ಶಾಖೆಯಲ್ಲಿ ₹1 ಲಕ್ಷ ಸಾಲ ಮತ್ತು ಬೇರೆಯವರ ಬಳಿ ₹4.32 ಲಕ್ಷ ಕೈಗಡ ಪಡೆದಿದ್ದರು. ಮಳೆ ಕೊರತೆಯಿಂದಾಗಿ ಫಸಲು ಬಾರದ್ದರಿಂದ ಖಿನ್ನತೆಗೆ ಒಳಗಾಗಿದ್ದರು’ ಎಂದು ಪತ್ನಿ ಮಹಾದೇವಿ ದೂರಿನಲ್ಲಿ ತಿಳಿಸಿದ್ದಾರೆ. ರಾಯಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.