<p>ಬೆಳಗಾವಿ: ಕೊಲ್ಹಾಪುರದಲ್ಲಿ ಶುಕ್ರವಾರ (ನ.4) ನಡೆಯಲಿರುವ ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳ ರಾಜ್ಯಪಾಲರ ಸಭೆ ಗಡಿ ಭಾಗದ ಜನರಲ್ಲಿ ಹಲವು ನಿರೀಕ್ಷೆಗಳನ್ನು ಹುಟ್ಟಿಸಿದೆ. ಗಡಿ ವಿವಾದದ ಕಾರಣ ಕಳೆದ ಐದು ದಶಕಗಳಿಂದ ತತ್ತರಿಸಿದ ಎರಡೂ ರಾಜ್ಯಗಳ ಹಳ್ಳಿಗಳ ಜನ ಕುತೂಹಲದಿಂದ ಕಾಯುವಂತಾಗಿದೆ.</p>.<p>ವಿಶೇಷವಾಗಿ ಕುಡಿಯುವ ನೀರು, ರಸ್ತೆ, ಶೈಕ್ಷಣಿಕ ಸಮಸ್ಯೆ ಹಾಗೂ<br />ಅಪರಾಧ ಕೃತ್ಯಗಳ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ರಾಜ್ಯಪಾಲರು– ಅಧಿಕಾರಿಗಳು ಚರ್ಚೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.</p>.<p class="Subhead"><strong>ರಾಜ್ಯದ ಸಮಸ್ಯೆಗಳೇನು?:</strong></p>.<p>1) ನಮ್ಮ 855 ಹಳ್ಳಿಗಳು ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿವೆ. ಮಹಾರಾಷ್ಟ್ರ ಸರಹದ್ದು ದಾಟಿ ಕನ್ನಡದ ಹಳ್ಳಿಗಳು, ಕರ್ನಾಟಕದ ಸೀಮೆ ದಾಟಿ ಮಹಾರಾಷ್ಟ್ರದ ಹಳ್ಳಿಗಳಿಗೆ ಹೋಗುವ ಸ್ಥಿತಿ ಇದೆ. ಅಲ್ಲಿ ನೀರು, ಸಾರಿಗೆ, ಬಸ್ಪಾಸ್ಗೆ ಹಲವು ಸಮಸ್ಯೆಗಳಿವೆ.</p>.<p>2) ಹಳ್ಳಿ ಕರ್ನಾಟಕದಲ್ಲಿದ್ದರೂ ಹೊಲಗಳು ಮಹಾರಾಷ್ಟ್ರದಲ್ಲಿವೆ. ಆ ರೈತರ ನೀರಾವರಿಗೆ ತಾಂತ್ರಿಕ ಸಮಸ್ಯೆಗಳು ನೂರಾರು. ಕೊಳವೆಬಾವಿ, ಬಾವಿ ಕೊರೆಯಿಸುವುದಕ್ಕೂ ದಾಖಲೆಗಳು ಅಡ್ಡಿಯಾಗುತ್ತವೆ.</p>.<p>3) ರೈತರು ಕಬ್ಬನ್ನು ಮಹಾರಾಷ್ಟ್ರದ ಕಾರ್ಖಾನೆಗಳಿಗೆ ಸಾಗಿಸುತ್ತಾರೆ. ಬಿಲ್ ಸಿಗದೇ ಇದ್ದಾಗ ಆ ಕಾರ್ಖಾನೆಗಳ<br />ಮೇಲೆ ಕ್ರಮ ವಹಿಸಬೇಕಾದವರು ಯಾರು ಎಂಬ ಚಿಂತೆ ಪ್ರತಿ ವರ್ಷ ಕಾಡುತ್ತದೆ.</p>.<p>4) ರಾಜ್ಯದ ಗಡಿ ಪ್ರದೇಶದಲ್ಲಿ ಕನ್ನಡ ಶಾಲೆಗಳು ಇಲ್ಲದ ಕಾರಣ ಕನ್ನಡ ಮಕ್ಕಳು ಕೂಡ ಮರಾಠಿ ಮಾಧ್ಯಮದಲ್ಲೇ ಕಲಿಯುವ ಅನಿವಾರ್ಯ. ಮಹಾರಾಷ್ಟ್ರದ ಕನ್ನಡಿಗರು ಶಿಕ್ಷಣಕ್ಕಾಗಿ ಪರದಾಡುವುದು ನಿಂತಿಲ್ಲ. ಕೊಲ್ಹಾಪುರ, ಜತ್ತ, ಸಾಂಗ್ಲಿ ಕಡೆಯ ವಿದ್ಯಾರ್ಥಿಗಳು ರಾಜ್ಯಕ್ಕೆ ವಲಸೆ ಬರುವಂತಾಗಿದೆ.</p>.<p>5) ಮಹಾರಾಷ್ಟ್ರದಲ್ಲಿ ಕನ್ನಡಿಗರು ಯಾವುದೇ ಪದವಿ ಪಡೆದರೂ ‘ಮರಾಠಿ ಭಾಷಾ ಪರೀಕ್ಷೆ’ಯಲ್ಲಿ ತೇರ್ಗಡೆ ಹೊಂದಬೇಕು. ಇಲ್ಲದಿದ್ದರೆ ಅಲ್ಲಿನ ಸರ್ಕಾರಿ ನೌಕರಿಗೆ ಅನರ್ಹ. ಆದರೆ, ಕರ್ನಾಟಕದಲ್ಲಿ ಇಂಥ ಕಟ್ಟಳೆ ಇಲ್ಲ. ಈ ಔದಾರ್ಯವನ್ನು ಮಹಾರಾಷ್ಟ್ರ ಇನ್ನೂ ತೋರಿಲ್ಲ.</p>.<p>6) ಕರ್ನಾಟಕ– ಮಹಾರಾಷ್ಟ್ರ ಎರಡೂ ಕಡೆ ಕನ್ನಡ ಶಿಕ್ಷಕರ ಕೊರತೆ ದೊಡ್ಡ ಪ್ರಮಾಣದಲ್ಲಿದೆ. 6,000 ಕನ್ನಡ ಶಿಕ್ಷಕರ ಕೊರತೆ ಗಡಿ ಗ್ರಾಮಗಳಲ್ಲಿದೆ.</p>.<p>7) ಸ್ಥಳೀಯ ಸಂಸ್ಥೆಗಳ ಎಲ್ಲ ದಾಖಲೆ<br />ಗಳನ್ನೂ ಮರಾಠಿಯಲ್ಲಿ ನೀಡಬೇಕು ಎಂದು ಮರಾಠಿಗರು ಹೋರಾಡುತ್ತಾರೆ. ಆದರೆ, ಮಹಾರಾಷ್ಟ್ರದಲ್ಲಿ ಖಾಲಿ ಕಾಗದದ ಮೇಲೂ ಕನ್ನಡ ಅಕ್ಷರಗಳು ಕಾಣದಂತೆ ಎಚ್ಚರಿಕೆ ವಹಿಸುತ್ತಾರೆ. ಮನೆ– ಅಂಗಡಿಗಳ ಮೇಲೆ ಕನ್ನಡ ಬರೆಯುವಂತಿಲ್ಲ. ಬಸ್ಗಳಿಗೂ ಫಲಕ ಹಾಕುವಂತಿಲ್ಲ.</p>.<p>8) ಮಹಾರಾಷ್ಟ್ರದ ಬಹುಪಾಲು ಜಲಾಶಯಗಳಿಂದ ರಾಜ್ಯಕ್ಕೆ ನೀರು ಹರಿಸಿ, ನೆರೆ ಸೃಷ್ಟಿಯಾಗುತ್ತದೆ. 2019ರಲ್ಲಿ 8 ಲಕ್ಷ ಕ್ಯುಸೆಕ್ ನೀರನ್ನು ಕೊಯ್ನಾದಿಂದ ಮುನ್ಸೂಚನೆ ಇಲ್ಲದೆ ಬಿಡಲಾಯಿತು. ಆ ಪ್ರವಾಹಕ್ಕೆ ಜಿಲ್ಲೆಯಲ್ಲೇ ₹ 35 ಸಾವಿರ ಕೋಟಿಯ ಬೆಳೆ ನಾಶವಾಯಿತು. ಈ ನಷ್ಟ ಭರಿಸುವುದು ಯಾರು? ಜಿಲ್ಲೆಯ ಜನ ಇದನ್ನು ‘ಹುಚ್ಚಾಟ’ ಎಂದೂ ಖಂಡಿಸಿದರು. ಇಂಥ ಸಂದಿಗ್ಧ ಸಂದರ್ಭ ಮತ್ತೆ ಬರದಂತೆ ಎರಡೂ ರಾಜ್ಯಗಳ ಅಧಿಕಾರಿಗಳ ಮಧ್ಯೆ ಸಂವಹನ ಸೇತುವೆ ಕಟ್ಟಬೇಕಿದೆ.</p>.<p>9) ಕೊಲೆ, ಕಳವು, ಗರ್ಭಪಾತದಂಥ ಕೃತ್ಯಗಳಲ್ಲಿ ತೊಡಗಿದವರು ನೆರೆ ರಾಜ್ಯದಲ್ಲಿ ತಲೆಮರೆಸಿಕೊಳ್ಳುತ್ತಾರೆ. ಇಂಥ ಅಪರಾಧಗಳ ನಿಯಂತ್ರಣಕ್ಕೆ ಪೊಲೀಸರ ಮಧ್ಯೆ ಸಹಕಾರ ಏರ್ಪಡಬೇಕಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಳಗಾವಿ: ಕೊಲ್ಹಾಪುರದಲ್ಲಿ ಶುಕ್ರವಾರ (ನ.4) ನಡೆಯಲಿರುವ ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳ ರಾಜ್ಯಪಾಲರ ಸಭೆ ಗಡಿ ಭಾಗದ ಜನರಲ್ಲಿ ಹಲವು ನಿರೀಕ್ಷೆಗಳನ್ನು ಹುಟ್ಟಿಸಿದೆ. ಗಡಿ ವಿವಾದದ ಕಾರಣ ಕಳೆದ ಐದು ದಶಕಗಳಿಂದ ತತ್ತರಿಸಿದ ಎರಡೂ ರಾಜ್ಯಗಳ ಹಳ್ಳಿಗಳ ಜನ ಕುತೂಹಲದಿಂದ ಕಾಯುವಂತಾಗಿದೆ.</p>.<p>ವಿಶೇಷವಾಗಿ ಕುಡಿಯುವ ನೀರು, ರಸ್ತೆ, ಶೈಕ್ಷಣಿಕ ಸಮಸ್ಯೆ ಹಾಗೂ<br />ಅಪರಾಧ ಕೃತ್ಯಗಳ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ರಾಜ್ಯಪಾಲರು– ಅಧಿಕಾರಿಗಳು ಚರ್ಚೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.</p>.<p class="Subhead"><strong>ರಾಜ್ಯದ ಸಮಸ್ಯೆಗಳೇನು?:</strong></p>.<p>1) ನಮ್ಮ 855 ಹಳ್ಳಿಗಳು ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿವೆ. ಮಹಾರಾಷ್ಟ್ರ ಸರಹದ್ದು ದಾಟಿ ಕನ್ನಡದ ಹಳ್ಳಿಗಳು, ಕರ್ನಾಟಕದ ಸೀಮೆ ದಾಟಿ ಮಹಾರಾಷ್ಟ್ರದ ಹಳ್ಳಿಗಳಿಗೆ ಹೋಗುವ ಸ್ಥಿತಿ ಇದೆ. ಅಲ್ಲಿ ನೀರು, ಸಾರಿಗೆ, ಬಸ್ಪಾಸ್ಗೆ ಹಲವು ಸಮಸ್ಯೆಗಳಿವೆ.</p>.<p>2) ಹಳ್ಳಿ ಕರ್ನಾಟಕದಲ್ಲಿದ್ದರೂ ಹೊಲಗಳು ಮಹಾರಾಷ್ಟ್ರದಲ್ಲಿವೆ. ಆ ರೈತರ ನೀರಾವರಿಗೆ ತಾಂತ್ರಿಕ ಸಮಸ್ಯೆಗಳು ನೂರಾರು. ಕೊಳವೆಬಾವಿ, ಬಾವಿ ಕೊರೆಯಿಸುವುದಕ್ಕೂ ದಾಖಲೆಗಳು ಅಡ್ಡಿಯಾಗುತ್ತವೆ.</p>.<p>3) ರೈತರು ಕಬ್ಬನ್ನು ಮಹಾರಾಷ್ಟ್ರದ ಕಾರ್ಖಾನೆಗಳಿಗೆ ಸಾಗಿಸುತ್ತಾರೆ. ಬಿಲ್ ಸಿಗದೇ ಇದ್ದಾಗ ಆ ಕಾರ್ಖಾನೆಗಳ<br />ಮೇಲೆ ಕ್ರಮ ವಹಿಸಬೇಕಾದವರು ಯಾರು ಎಂಬ ಚಿಂತೆ ಪ್ರತಿ ವರ್ಷ ಕಾಡುತ್ತದೆ.</p>.<p>4) ರಾಜ್ಯದ ಗಡಿ ಪ್ರದೇಶದಲ್ಲಿ ಕನ್ನಡ ಶಾಲೆಗಳು ಇಲ್ಲದ ಕಾರಣ ಕನ್ನಡ ಮಕ್ಕಳು ಕೂಡ ಮರಾಠಿ ಮಾಧ್ಯಮದಲ್ಲೇ ಕಲಿಯುವ ಅನಿವಾರ್ಯ. ಮಹಾರಾಷ್ಟ್ರದ ಕನ್ನಡಿಗರು ಶಿಕ್ಷಣಕ್ಕಾಗಿ ಪರದಾಡುವುದು ನಿಂತಿಲ್ಲ. ಕೊಲ್ಹಾಪುರ, ಜತ್ತ, ಸಾಂಗ್ಲಿ ಕಡೆಯ ವಿದ್ಯಾರ್ಥಿಗಳು ರಾಜ್ಯಕ್ಕೆ ವಲಸೆ ಬರುವಂತಾಗಿದೆ.</p>.<p>5) ಮಹಾರಾಷ್ಟ್ರದಲ್ಲಿ ಕನ್ನಡಿಗರು ಯಾವುದೇ ಪದವಿ ಪಡೆದರೂ ‘ಮರಾಠಿ ಭಾಷಾ ಪರೀಕ್ಷೆ’ಯಲ್ಲಿ ತೇರ್ಗಡೆ ಹೊಂದಬೇಕು. ಇಲ್ಲದಿದ್ದರೆ ಅಲ್ಲಿನ ಸರ್ಕಾರಿ ನೌಕರಿಗೆ ಅನರ್ಹ. ಆದರೆ, ಕರ್ನಾಟಕದಲ್ಲಿ ಇಂಥ ಕಟ್ಟಳೆ ಇಲ್ಲ. ಈ ಔದಾರ್ಯವನ್ನು ಮಹಾರಾಷ್ಟ್ರ ಇನ್ನೂ ತೋರಿಲ್ಲ.</p>.<p>6) ಕರ್ನಾಟಕ– ಮಹಾರಾಷ್ಟ್ರ ಎರಡೂ ಕಡೆ ಕನ್ನಡ ಶಿಕ್ಷಕರ ಕೊರತೆ ದೊಡ್ಡ ಪ್ರಮಾಣದಲ್ಲಿದೆ. 6,000 ಕನ್ನಡ ಶಿಕ್ಷಕರ ಕೊರತೆ ಗಡಿ ಗ್ರಾಮಗಳಲ್ಲಿದೆ.</p>.<p>7) ಸ್ಥಳೀಯ ಸಂಸ್ಥೆಗಳ ಎಲ್ಲ ದಾಖಲೆ<br />ಗಳನ್ನೂ ಮರಾಠಿಯಲ್ಲಿ ನೀಡಬೇಕು ಎಂದು ಮರಾಠಿಗರು ಹೋರಾಡುತ್ತಾರೆ. ಆದರೆ, ಮಹಾರಾಷ್ಟ್ರದಲ್ಲಿ ಖಾಲಿ ಕಾಗದದ ಮೇಲೂ ಕನ್ನಡ ಅಕ್ಷರಗಳು ಕಾಣದಂತೆ ಎಚ್ಚರಿಕೆ ವಹಿಸುತ್ತಾರೆ. ಮನೆ– ಅಂಗಡಿಗಳ ಮೇಲೆ ಕನ್ನಡ ಬರೆಯುವಂತಿಲ್ಲ. ಬಸ್ಗಳಿಗೂ ಫಲಕ ಹಾಕುವಂತಿಲ್ಲ.</p>.<p>8) ಮಹಾರಾಷ್ಟ್ರದ ಬಹುಪಾಲು ಜಲಾಶಯಗಳಿಂದ ರಾಜ್ಯಕ್ಕೆ ನೀರು ಹರಿಸಿ, ನೆರೆ ಸೃಷ್ಟಿಯಾಗುತ್ತದೆ. 2019ರಲ್ಲಿ 8 ಲಕ್ಷ ಕ್ಯುಸೆಕ್ ನೀರನ್ನು ಕೊಯ್ನಾದಿಂದ ಮುನ್ಸೂಚನೆ ಇಲ್ಲದೆ ಬಿಡಲಾಯಿತು. ಆ ಪ್ರವಾಹಕ್ಕೆ ಜಿಲ್ಲೆಯಲ್ಲೇ ₹ 35 ಸಾವಿರ ಕೋಟಿಯ ಬೆಳೆ ನಾಶವಾಯಿತು. ಈ ನಷ್ಟ ಭರಿಸುವುದು ಯಾರು? ಜಿಲ್ಲೆಯ ಜನ ಇದನ್ನು ‘ಹುಚ್ಚಾಟ’ ಎಂದೂ ಖಂಡಿಸಿದರು. ಇಂಥ ಸಂದಿಗ್ಧ ಸಂದರ್ಭ ಮತ್ತೆ ಬರದಂತೆ ಎರಡೂ ರಾಜ್ಯಗಳ ಅಧಿಕಾರಿಗಳ ಮಧ್ಯೆ ಸಂವಹನ ಸೇತುವೆ ಕಟ್ಟಬೇಕಿದೆ.</p>.<p>9) ಕೊಲೆ, ಕಳವು, ಗರ್ಭಪಾತದಂಥ ಕೃತ್ಯಗಳಲ್ಲಿ ತೊಡಗಿದವರು ನೆರೆ ರಾಜ್ಯದಲ್ಲಿ ತಲೆಮರೆಸಿಕೊಳ್ಳುತ್ತಾರೆ. ಇಂಥ ಅಪರಾಧಗಳ ನಿಯಂತ್ರಣಕ್ಕೆ ಪೊಲೀಸರ ಮಧ್ಯೆ ಸಹಕಾರ ಏರ್ಪಡಬೇಕಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>