ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನುವಾರು ಹುಲ್ಲುಗಾವಲಿಗೆ ಜಾಗ: ಹಲಗಾ ಗ್ರಾಮಸ್ಥರ ಆಗ್ರಹ

Last Updated 22 ಸೆಪ್ಟೆಂಬರ್ 2020, 7:40 IST
ಅಕ್ಷರ ಗಾತ್ರ

ಬೆಳಗಾವಿ: ‘ತಾಲ್ಲೂಕಿನ ಸುವರ್ಣ ವಿಧಾನಸೌಧದ ಸಮೀಪದಲ್ಲಿರುವ ಹಲಗಾ ಗ್ರಾಮದಲ್ಲಿ ಜಾನುವಾರುಗೆ ಹುಲ್ಲುಗಾವಲುಗಾಗಿ ಏಳು ಏಕರೆ ಜಾಗ ನೀಡಬೇಕು ಮತ್ತು ಪಶು ಆಸ್ಪತ್ರೆ ಮಂಜೂರು ಮಾಡಬೇಕು’ ಎಂದು ಆಗ್ರಹಿಸಿ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.

‘ಹೈನುಗಾರಿಕೆ ಮತ್ತು ಕೃಷಿಯನ್ನು ಅವಲಂಬಿಸಿ ನಾವು ಜೀವನ ನಡೆಸುತ್ತಿದ್ದೇವೆ. ಸದ್ಯ ದನ, ಎಮ್ಮೆ, ಕರುಗಳನ್ನು ಮೇಯಿಸುವುದಕ್ಕೆ ನಿರ್ದಿಷ್ಟ ಜಾಗವಿಲ್ಲದೆ ತೊಂದರೆಯಾಗುತ್ತಿದೆ. ಇದನ್ನು ತಪ್ಪಿಸುವ ಉದ್ದೇಶದಿಂದ ಜಾಗ ನೀಡಿ ಅಲ್ಲಿ ಹುಲ್ಲುಗಾವಲು ಮಾಡಲು ಅವಕಾಶ ಕಲ್ಪಿಸಬೇಕು’ ಎಂದು ಕೋರಿದರು.

‘ಗ್ರಾಮದ ಸರ್ವೇ ‘ನಂ.262/ಎ’ಯಲ್ಲಿ ಗಾಯರಾಣ ಜಮೀನನ್ನು ಕೆಲವು ಸಂಘ ಸಂಸ್ಥೆಗಳಿಗೆ ನೀಡಲಾಗಿದೆ. ಅಷ್ಟೇ ಅಲ್ಲದೇ ಸುವರ್ಣಸೌಧದ ಸಮೀಪದಲ್ಲಿರುವ ಈ ಭೂಮಿಯನ್ನು ಕಬಳಿಸಲು ಕೆಲವರು ಹೊಂಚು ಹಾಕುತ್ತಿದ್ದಾರೆ. ಇದಕ್ಕೆ ಅವಕಾಶ ಕೊಡಬಾರದು. ಗ್ರಾಮಸ್ಥರ ಅನುಕೂಲಕ್ಕಾಗಿ ಜಮೀನು ನೀಡಬೇಕು’ ಎಂದು ಒತ್ತಾಯಿಸಿದರು.

ವಕೀಲ ಅಣ್ಣಾಸಾಹೇಬ ಘೋರ್ಪಡೆ, ವೈ.ಕೆ. ದಿವಟೆ, ಬಸಯ್ಯ ಹಿರೇಮಠ, ಮಹಾವೀರ ಬೆಲ್ಲದ, ಕೆ.ಕೆ. ಸಂತಾಜಿ, ಚಂದ್ರು ಕಾಮೋಜಿ, ಪ್ರಕಾಶ ಲೋಹಾರ, ಕಿರಣ ಹನುಮಂತಾಚೆ, ಮಹಾವೀರ ಪಾಟೀಲ, ದೀಪಕ ಕಾಮನಾಚೆ, ಪ್ರಫುಲ್ಲ ಮಾಸ್ತಮರ್ಡಿ, ಶಿವಕುಮಾರ ಹುಡೇದ, ಬಾಬು ಧಾಮಣೆಕರ, ಪರಶುರಾಮ ಬಸ್ತವಾಡಕರ, ಕಾಚು ಸಾವಂತ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT