ಸಮಾರೋಪ ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿದ್ದ ಎಸ್.ಕೆ.ಇ. ಸಂಸ್ಥೆಯ ಆಡಳಿತ ಮಂಡಳಿ ಸದಸ್ಯೆ ಲತಾ ಕಿತ್ತೂರ, ‘ಮನುಷ್ಯ ಎಷ್ಟೇ ಮೇಲಕ್ಕೇರಿದರೂ ತನ್ನ ನೈಜ ನೆಲೆಯನ್ನು ಎಂದಿಗೂ ಮೆರೆಯಬಾರದು. ನಮ್ಮ ಪೂರ್ವಿಕರು ನೀಡಿದಂತಹ ಆಚಾರ–ವಿಚಾರಗಳು ಇಂದಿಗೂ ಪ್ರಸ್ತುತವಾಗಿವೆ. ನಾವು ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ಭಾರತದ ಸಂಸ್ಕೃತಿಯನ್ನು ಪ್ರತಿನಿಧಿಸುತ್ತೇವೆ. ಭಾರತದ ಸಂಸ್ಕೃತಿಯು ಜನರನ್ನು ಒಗ್ಗೂಡಿಸುವ ಸಂಸ್ಕೃತಿಯಾಗಿದೆ. ಯುವಜನರು ನಮ್ಮ ಸಂಸ್ಕೃತಿಯನ್ನು ಅರಿತುಕೊಂಡರೆ ಮಾತ್ರ ಪ್ರಗತಿಯನ್ನು ಸಾಧಿಸಲು ಸಾಧ್ಯ’ ಎಂದು ಹೇಳಿದರು.