ಇಲ್ಲಿ ಪತ್ರಕರ್ತರೊಂದಿಗೆ ಗುರುವಾರ ಮಾತನಾಡಿದ ಅವರು, ‘ಕರ್ನಾಟಕದಲ್ಲಿ ಕನ್ನಡ ಮಾತೃ ಭಾಷೆ. ಅದು ತಾಯಿಗೆ ಸಮಾನವಾದುದು. ಸೂರ್ಯ–ಚಂದ್ರ ಇರುವವರೆಗೆ ಹಾಗೂ ಭೂಮಿ ಮೇಲೆ ಜನರು ವಾಸಿಸುವವರೆಗೂ ಕನ್ನಡ ಭಾಷೆ ಇರುತ್ತದೆ. ಪರಕೀಯರು ಆಳಿದಾಗಲೂ ಕನ್ನಡ ಭಾಷೆ ನಶಿಸಿ ಹೋಗಿಲ್ಲ. ಮುಂದೆಯೂ ತೊಂದರೆ ಆಗುವುದಿಲ್ಲ. ಭಾಷೆಯ ವಿಚಾರದಲ್ಲಿ ಯಾರೂ ಜಟಾಪಟಿ ನಡೆಸುವ ಅಗತ್ಯವಿಲ್ಲ’ ಎಂದರು.