<p><strong>ಬೆಳಗಾವಿ:</strong> ಇಲ್ಲಿನ ಕೇಂದ್ರ ಬಸ್ ನಿಲ್ದಾಣದಲ್ಲಿ ಮುಸ್ಲಿಂ ಯುವತಿಯರಿಬ್ಬರೊಂದಿಗೆ ಮಾತನಾಡುತ್ತಾ ನಿಂತಿದ್ದ ಹಿಂದು ಯುವಕನ ಮೇಲೆ ಆಟೊರಿಕ್ಷಾ ಚಾಲಕರು ಸೇರಿದಂತೆ ಕೆಲವರು ಹಲ್ಲೆ ನಡೆಸಿ ಅನೈತಿಕ ಪೊಲೀಸ್ಗಿರಿ ಪ್ರದರ್ಶಿಸಿದ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಮಂಗಳವಾರ ವೈರಲ್ ಆಗಿದೆ.</p>.<p>ಜಿಲ್ಲೆಯ ಖಾನಾಪುರ ಲೋಂಡಾದವರು ಎನ್ನಲಾದ ಆ ಯುವತಿಯರಿಗೆ ಕಿಡಿಗೇಡಿಗಳು ಬೆದರಿಕೆ ಒಡ್ಡಿದ್ದಾರೆ. ‘ಹಿಂದು ಯುವಕನಾಗಿ ಮುಸ್ಲಿಂ ಯುವತಿಯರ ಜೊತೆ ಏನು ವ್ಯವಹಾರ?’ ಎಂದು ಆಕ್ಷೇಪ ವ್ಯಕ್ತಪಡಿಸಿ ಪ್ರಶ್ನಿಸಿದ್ದಾರೆ. ‘ಎಲ್ಲಿಂದ ಕರೆದುಕೊಂಡು ಬಂದೆ, ಏಕೆ ಬಂದಿದ್ದೀರಿ ಎಂದೆಲ್ಲಾ ಕೇಳಿದ್ದಾರೆ. ‘ನಾನು ಕರೆತಂದಿಲ್ಲ. ಸ್ನೇಹಿತೆ ಎಂದು ಮಾತನಾಡಿಸುತ್ತಿದ್ದೆ’ ಎಂದು ಯುವಕ ಹೇಳಿದ್ದಾನೆ. ಈ ವೇಳೆ ಆತನ ಮೇಲೆ ಯುವಕನೊಬ್ಬ ಥಳಿಸಿದ್ದಾನೆ. ಈ ದೃಶ್ಯಗಳು ವಿಡಿಯೊದಲ್ಲಿವೆ.</p>.<p>ಅಲ್ಲಿದ್ದ ಮುಸ್ಲಿಂ ಯುವತಿಯರಿಂದ ಬಲವಂತವಾಗಿ ಬುರ್ಕಾ ತೆಗೆಸಿ, ವಿಡಿಯೊ ಮಾಡಿದ್ದಾರೆ. ‘ನಿಮ್ಮ ಅಪ್ಪ–ಅಮ್ಮನ ಹೆಸರೇನು? ಅವರ ನಂಬರ್ ಕೊಡಿ, ಇಲ್ಲಿಗೇಕೆ ಬಂದಿದ್ದಿರಿ?’ ಎಂದೆಲ್ಲಾ ಹಿಂದಿಯಲ್ಲಿ ಪ್ರಶ್ನಿಸಿ ಬೆದರಿಕೆ ಒಡ್ಡಿದ್ದಾರೆ.</p>.<p>‘ಫೋಟೊ ತೆಗೆಯಬೇಡಿ ಹಾಗೂ ವಿಡಿಯೊಗಳನ್ನು ಮಾಡಬೇಡಿ’ ಎಂದು ಯುವತಿಯರು ಕೋರಿದರೂ ಮುತ್ತಿಗೆ ಹಾಕಿ ಭಯದ ವಾತಾವರಣ ಸೃಷ್ಟಿಸಿರುವುದು ಮತ್ತು ಅಪಮಾನಿಸಿರುವ ದೃಶ್ಯಗಳು ವಿಡಿಯೊದಲ್ಲಿವೆ. ಆ ಗುಂಪಿನಲ್ಲಿ ಹಿಂದು ಹಾಗೂ ಮುಸ್ಲಿಂ ಧರ್ಮಕ್ಕೆ ಸೇರಿದವರಿದ್ದಾರೆ. ಕೆಲವು ಮಹಿಳೆಯರು ಕೂಡ ಇರುವುದು ವಿಡಿಯೊದಲ್ಲಿದೆ.</p>.<p>ಈ ಬಗ್ಗೆ ವ್ಯಾಪ್ತಿಯ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ. ದೂರು ನೀಡಲು ಯುವಕ ಹಾಗೂ ಯುವತಿಯರು ಮುಂದಾಗಿಲ್ಲ ಎನ್ನಲಾಗುತ್ತಿದೆ.</p>.<p><strong>ಮುಸ್ಲಿಂ ವ್ಯಕ್ತಿಯ ಅಂಗಡಿ ಮೇಲೆ ದಾಳಿ</strong></p>.<p>ಬೆಳಗಾವಿ ಹೊರವಲಯದ ಯಮನಾಪುರ ಗ್ರಾಮದಲ್ಲಿ ಮುಸ್ಲಿಂ ವ್ಯಕ್ತಿಗೆ ಸೇರಿದ ಕೋಳಿಮಾಂಸದ ಅಂಗಡಿ ಮೇಲೆ ಹಿಂದೂ ಯುವಕರ ಗುಂಪೊಂದು ದಾಳಿ ಮಾಡಿ, ಮಾಲೀಕರ ಮೇಲೆ ಹಲ್ಲೆ ನಡೆಸಿದೆ.</p>.<p>‘ಅಲ್ಲಿನ ಭರಮದೇವರ ದೇವಸ್ಥಾನದಲ್ಲಿ ನವರಾತ್ರಿ ಅಂಗವಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ, ಸಮೀಪದಲ್ಲಿ ಕೋಳಿಮಾಂಸದ ಅಂಗಡಿ ತೆರೆದಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೆಲವರು ಗಲಾಟೆ ಶುರು ಮಾಡಿ ಮತೀಯ ಗೂಂಡಾಗಿರಿ ಪ್ರದರ್ಶಿಸಿದರು’ ಎಂದು ಆರೋಪಿಸಲಾಗಿದೆ.</p>.<p>‘ಅದೇ ಸಮಯದಲ್ಲಿ ಮರಾಠರಿಗೆ ಸೇರಿದ ಮೂರು ಮಾಂಸದ ಅಂಗಡಿಗಳು ತೆರೆದಿದ್ದವು. ಆದರೆ, ದುಷ್ಕರ್ಮಿಗಳು ಮುಸ್ಲಿಂ ವ್ಯಕ್ತಿಯ ಅಂಗಡಿಯನ್ನಷ್ಟೆ ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ. ಮಾಳಮಾರುತಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳದೆ ಹಲ್ಲೆ ನಡೆಸಿದ ಯುವಕರನ್ನು ಕರೆಸಿ ರಾಜಿ ಮಾಡಿಸಿದ್ದಾರೆ’ ಎಂದು ದೂರಲಾಗಿದೆ.</p>.<p><a href="https://www.prajavani.net/karnataka-news/karnataka-congress-deletes-controversial-tweet-against-pm-modi-876709.html" itemprop="url">ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಟ್ವೀಟ್: ಅಳಿಸಿ ಹಾಕಲು ಡಿಕೆಶಿ ಸೂಚನೆ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ:</strong> ಇಲ್ಲಿನ ಕೇಂದ್ರ ಬಸ್ ನಿಲ್ದಾಣದಲ್ಲಿ ಮುಸ್ಲಿಂ ಯುವತಿಯರಿಬ್ಬರೊಂದಿಗೆ ಮಾತನಾಡುತ್ತಾ ನಿಂತಿದ್ದ ಹಿಂದು ಯುವಕನ ಮೇಲೆ ಆಟೊರಿಕ್ಷಾ ಚಾಲಕರು ಸೇರಿದಂತೆ ಕೆಲವರು ಹಲ್ಲೆ ನಡೆಸಿ ಅನೈತಿಕ ಪೊಲೀಸ್ಗಿರಿ ಪ್ರದರ್ಶಿಸಿದ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಮಂಗಳವಾರ ವೈರಲ್ ಆಗಿದೆ.</p>.<p>ಜಿಲ್ಲೆಯ ಖಾನಾಪುರ ಲೋಂಡಾದವರು ಎನ್ನಲಾದ ಆ ಯುವತಿಯರಿಗೆ ಕಿಡಿಗೇಡಿಗಳು ಬೆದರಿಕೆ ಒಡ್ಡಿದ್ದಾರೆ. ‘ಹಿಂದು ಯುವಕನಾಗಿ ಮುಸ್ಲಿಂ ಯುವತಿಯರ ಜೊತೆ ಏನು ವ್ಯವಹಾರ?’ ಎಂದು ಆಕ್ಷೇಪ ವ್ಯಕ್ತಪಡಿಸಿ ಪ್ರಶ್ನಿಸಿದ್ದಾರೆ. ‘ಎಲ್ಲಿಂದ ಕರೆದುಕೊಂಡು ಬಂದೆ, ಏಕೆ ಬಂದಿದ್ದೀರಿ ಎಂದೆಲ್ಲಾ ಕೇಳಿದ್ದಾರೆ. ‘ನಾನು ಕರೆತಂದಿಲ್ಲ. ಸ್ನೇಹಿತೆ ಎಂದು ಮಾತನಾಡಿಸುತ್ತಿದ್ದೆ’ ಎಂದು ಯುವಕ ಹೇಳಿದ್ದಾನೆ. ಈ ವೇಳೆ ಆತನ ಮೇಲೆ ಯುವಕನೊಬ್ಬ ಥಳಿಸಿದ್ದಾನೆ. ಈ ದೃಶ್ಯಗಳು ವಿಡಿಯೊದಲ್ಲಿವೆ.</p>.<p>ಅಲ್ಲಿದ್ದ ಮುಸ್ಲಿಂ ಯುವತಿಯರಿಂದ ಬಲವಂತವಾಗಿ ಬುರ್ಕಾ ತೆಗೆಸಿ, ವಿಡಿಯೊ ಮಾಡಿದ್ದಾರೆ. ‘ನಿಮ್ಮ ಅಪ್ಪ–ಅಮ್ಮನ ಹೆಸರೇನು? ಅವರ ನಂಬರ್ ಕೊಡಿ, ಇಲ್ಲಿಗೇಕೆ ಬಂದಿದ್ದಿರಿ?’ ಎಂದೆಲ್ಲಾ ಹಿಂದಿಯಲ್ಲಿ ಪ್ರಶ್ನಿಸಿ ಬೆದರಿಕೆ ಒಡ್ಡಿದ್ದಾರೆ.</p>.<p>‘ಫೋಟೊ ತೆಗೆಯಬೇಡಿ ಹಾಗೂ ವಿಡಿಯೊಗಳನ್ನು ಮಾಡಬೇಡಿ’ ಎಂದು ಯುವತಿಯರು ಕೋರಿದರೂ ಮುತ್ತಿಗೆ ಹಾಕಿ ಭಯದ ವಾತಾವರಣ ಸೃಷ್ಟಿಸಿರುವುದು ಮತ್ತು ಅಪಮಾನಿಸಿರುವ ದೃಶ್ಯಗಳು ವಿಡಿಯೊದಲ್ಲಿವೆ. ಆ ಗುಂಪಿನಲ್ಲಿ ಹಿಂದು ಹಾಗೂ ಮುಸ್ಲಿಂ ಧರ್ಮಕ್ಕೆ ಸೇರಿದವರಿದ್ದಾರೆ. ಕೆಲವು ಮಹಿಳೆಯರು ಕೂಡ ಇರುವುದು ವಿಡಿಯೊದಲ್ಲಿದೆ.</p>.<p>ಈ ಬಗ್ಗೆ ವ್ಯಾಪ್ತಿಯ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ. ದೂರು ನೀಡಲು ಯುವಕ ಹಾಗೂ ಯುವತಿಯರು ಮುಂದಾಗಿಲ್ಲ ಎನ್ನಲಾಗುತ್ತಿದೆ.</p>.<p><strong>ಮುಸ್ಲಿಂ ವ್ಯಕ್ತಿಯ ಅಂಗಡಿ ಮೇಲೆ ದಾಳಿ</strong></p>.<p>ಬೆಳಗಾವಿ ಹೊರವಲಯದ ಯಮನಾಪುರ ಗ್ರಾಮದಲ್ಲಿ ಮುಸ್ಲಿಂ ವ್ಯಕ್ತಿಗೆ ಸೇರಿದ ಕೋಳಿಮಾಂಸದ ಅಂಗಡಿ ಮೇಲೆ ಹಿಂದೂ ಯುವಕರ ಗುಂಪೊಂದು ದಾಳಿ ಮಾಡಿ, ಮಾಲೀಕರ ಮೇಲೆ ಹಲ್ಲೆ ನಡೆಸಿದೆ.</p>.<p>‘ಅಲ್ಲಿನ ಭರಮದೇವರ ದೇವಸ್ಥಾನದಲ್ಲಿ ನವರಾತ್ರಿ ಅಂಗವಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ, ಸಮೀಪದಲ್ಲಿ ಕೋಳಿಮಾಂಸದ ಅಂಗಡಿ ತೆರೆದಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೆಲವರು ಗಲಾಟೆ ಶುರು ಮಾಡಿ ಮತೀಯ ಗೂಂಡಾಗಿರಿ ಪ್ರದರ್ಶಿಸಿದರು’ ಎಂದು ಆರೋಪಿಸಲಾಗಿದೆ.</p>.<p>‘ಅದೇ ಸಮಯದಲ್ಲಿ ಮರಾಠರಿಗೆ ಸೇರಿದ ಮೂರು ಮಾಂಸದ ಅಂಗಡಿಗಳು ತೆರೆದಿದ್ದವು. ಆದರೆ, ದುಷ್ಕರ್ಮಿಗಳು ಮುಸ್ಲಿಂ ವ್ಯಕ್ತಿಯ ಅಂಗಡಿಯನ್ನಷ್ಟೆ ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ. ಮಾಳಮಾರುತಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳದೆ ಹಲ್ಲೆ ನಡೆಸಿದ ಯುವಕರನ್ನು ಕರೆಸಿ ರಾಜಿ ಮಾಡಿಸಿದ್ದಾರೆ’ ಎಂದು ದೂರಲಾಗಿದೆ.</p>.<p><a href="https://www.prajavani.net/karnataka-news/karnataka-congress-deletes-controversial-tweet-against-pm-modi-876709.html" itemprop="url">ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಟ್ವೀಟ್: ಅಳಿಸಿ ಹಾಕಲು ಡಿಕೆಶಿ ಸೂಚನೆ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>