ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಸುರೇಶ ಅಂಗಡಿ, ಜಗದೀಶ ಶೆಟ್ಟರ್ ಹಾಗೂ ನಾನು ಒಂದು ಶಕ್ತಿಯಾಗಿದ್ದೆವು. ಅಂಗಡಿ ಅವರ ಪತ್ನಿ ಮಂಗಳಾ ಗೋಕಾಕದ ನಮ್ಮ ಮನೆಯಲ್ಲಿ ಬೆಳೆದವರು. ನನಗೆ ಸಹೋದರಿಗಿಂತಲೂ ಜಾಸ್ತಿ ಇದ್ದಾರೆ. ಅವರಿಗೆ ಧೈರ್ಯ ತುಂಬಿದ್ದೇನೆ. ಅವರಿಗೆ ಮುಂದಿನ ದಿನಗಳಲ್ಲಿ ಎಲ್ಲ ರೀತಿಯಲ್ಲೂ ನೆರವಾಗುತ್ತೇನೆ’ ಎಂದು ತಿಳಿಸಿದರು.