<p><strong>ಚಿಕ್ಕೋಡಿ</strong>: ತಾಲ್ಲೂಕಿನ ಸದಲಗಾ ಪಟ್ಟಣದ ಹೊರ ವಲಯದಲ್ಲಿ ರೈತ ಅಪ್ಪಾಸಾಹೇಬ ಕುರಬೆಟ್ಟೆ 3 ಎಕರೆಯಲ್ಲಿ ವಿಭಿನ್ನ ಪ್ರಯೋಗ ಮಾಡಿ ವಾರ್ಷಿಕ ₹12 ಲಕ್ಷ ಆದಾಯ ಪಡೆದುಕೊಂಡಿದ್ದಾರೆ. ಈ ಭಾಗದಲ್ಲಿ ಮಾದರಿ ರೈತ ಎಣಿಸಿಕೊಂಡಿದ್ದಾರೆ.</p>.<p>ಕೇವಲ 6ನೇ ತರಗತಿವರೆಗೆ ಓದಿರುವ ಅಪ್ಪಾಸಾಹೇಬ ಅವರು ಕಬ್ಬು, ಕಲ್ಲಂಗಡಿ, ಮೆಣಸಿನಕಾಯಿ ಸೇರಿದಂತೆ ವಿವಿಧ ಬೆಳೆ ಬೆಳೆಯುವ ಅವರ ಪ್ರಯೋಗ ಬರಗಾಲದಲ್ಲಿಯೂ ಕೈ ಹಿಡಿದಿದೆ.</p>.<p>ಭೀಕರ ಬರಗಾಲದ ಹಿನ್ನೆಲೆಯಲ್ಲಿ ನೀರಿನ ಕೊರತೆಯ ನಡುವೆ 3 ಎಕರೆ ಪ್ರದೇಶದಲ್ಲಿ ಹನಿ ನೀರಾವರಿ ಮೂಲಕ 30 ಟನ್ ಕಲ್ಲಂಗಡಿ ಬೆಳೆದು ಖರ್ಚು ತೆಗೆದು ₹3 ಲಕ್ಷಕ್ಕೂ ಹೆಚ್ಚು ಆದಾಯ ಪಡೆದುಕೊಂಡಿದ್ದಾರೆ. ಬರಕ್ಕೆ ಸೆಡ್ಡು ಹೊಡೆದು ಬಾವಿಯಿಂದ ಹನಿ ನೀರಾವರಿ ಮೂಲಕ ಮೂರುವರೆ ತಿಂಗಳಲ್ಲಿ ಕಲ್ಲಂಗಡಿ ಬೆಳೆದು ಸಾಧನೆ ತೋರಿದ್ದಾರೆ.</p>.<p>10 ಎಕರೆ ಜಮೀನು ಹೊಂದಿದ್ದರೂ ಬರದ ಹಿನ್ನೆಲೆಯಲ್ಲಿ ಬಾವಿ ಹಾಗೂ ಕೊಳವೆ ಬಾವಿಯ ಅಂತರ್ಜಲಮಟ್ಟ ತೀವ್ರ ಕುಸಿದಿದೆ. ಹೀಗಾಗಿ ಕೇವಲ 3 ಎಕರೆ ಪ್ರದೇಶದಲ್ಲಿ ಬೇಸಿಗೆ ಬೆಳೆಯನ್ನಾಗಿ ಅಪ್ಪಾಸಾಹೇಬ ಅವರು ಕಲ್ಲಂಗಡಿ ಬೆಳೆದಿದ್ದಾರೆ. ಇನ್ನುಳಿದ 7 ಎಕರೆ ಪ್ರದೇಶದಲ್ಲಿ ಮುಂಗಾರು ಹಂಗಾಮಿನಲ್ಲಿ ತರಕಾರಿ, ಜೋಳ, ಕಬ್ಬು, ಮೆಕ್ಕೆಜೋಳ, ಗೋಧಿ ಪಡೆದುಕೊಂಡಿದ್ದಾರೆ. ಇದೀಗ 3 ಎಕರೆ ಪ್ರದೇಶವನ್ನೇ ಪ್ರಯೋಗ ಶಾಲೆ ಮಾಡಿದ್ದಾರೆ.</p>.<p>ನವೆಂಬರ್ನಲ್ಲಿ ಕಲ್ಲಂಗಡಿ ನಾಟಿ ಮಾಡಿ ಕಸ ಬೆಳೆಯದಂತೆ 3 ಎಕರೆ ಹೊಲಕ್ಕೆ ಪ್ಲಾಸ್ಟಿಕ್ ಹೊದಿಕೆ ಹಾಕಿ ಬಾವಿಯ ನೀರನ್ನು ಡ್ರಿಪ್ ಮೂಲಕ ಕೊಟ್ಟಿದ್ದು, ಒಂದೆರಡು ಸಲ ರಾಸಾಯನಿಕ ಸಿಂಪಡಣೆ ಮಾಡಿದ್ದಾರೆ. ಹೀಗಾಗಿ ಕಲ್ಲಂಗಡಿ ಬೆಳೆಯಲು ಪ್ರತಿ ಎಕರೆಗೆ ₹ 35 ಸಾವಿರ ವೆಚ್ಚ ಮಾಡಿದ್ದಾರೆ. ಮೊದಲನೇ ಕೊಯ್ಲಿನಲ್ಲಿ 20 ಟನ್ ಇಳುವರಿ ಬಂದಿದ್ದು, ಪ್ರತಿ ಟನ್ ಗೆ ₹14,500ರಂತೆ ಮಾರಾಟ ಮಾಡಿದ್ದಾರೆ.</p>.<p>ಕಲ್ಲಂಗಡಿ ಬೆಳೆಯುವುದಕ್ಕೂ ಮೊದಲು ಈ ಜಮೀನಿನಲ್ಲಿ ಕಬ್ಬು ನಾಟಿ ಮಾಡಿದ್ದರು. ಪ್ರತಿ ಎಕರೆಗೆ 70 ಟನ್ ನಷ್ಟು ಕಬ್ಬು ಬೆಳೆದು, ಪ್ರತಿ ಟನ್ಗೆ ₹ 3 ಸಾವಿರದಂತೆ ₹ 6.30 ಲಕ್ಷ ಆದಾಯ ಪಡೆದಿದ್ದಾರೆ. ಕಬ್ಬನ್ನು ಸಕ್ಕರೆ ಕಾರ್ಖಾನೆಗೆ ಸಾಗಾಟ ಮಾಡಿದ ಬಳಿಕವೇ ಭೂಮಿ ಹದ ಮಾಡಿ ಕಲ್ಲಂಗಡಿ ಬೆಳೆದರು.</p>.<p>ಹೀಗೆ ಕಬ್ಬಿನಿಂದ ₹6.90 ಲಕ್ಷ, ಕಲ್ಲಂಗಡಿಯಿಂದ ₹3 ಲಕ್ಷ , ಮೆಣಸಿನ ಕಾಯಿಯಿಂದ ₹2 ಲಕ್ಷ ಸೇರಿದಂತೆ ವರ್ಷಕ್ಕೆ ₹11.90 ಲಕ್ಷ ಲಾಭ ಪಡೆದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕೋಡಿ</strong>: ತಾಲ್ಲೂಕಿನ ಸದಲಗಾ ಪಟ್ಟಣದ ಹೊರ ವಲಯದಲ್ಲಿ ರೈತ ಅಪ್ಪಾಸಾಹೇಬ ಕುರಬೆಟ್ಟೆ 3 ಎಕರೆಯಲ್ಲಿ ವಿಭಿನ್ನ ಪ್ರಯೋಗ ಮಾಡಿ ವಾರ್ಷಿಕ ₹12 ಲಕ್ಷ ಆದಾಯ ಪಡೆದುಕೊಂಡಿದ್ದಾರೆ. ಈ ಭಾಗದಲ್ಲಿ ಮಾದರಿ ರೈತ ಎಣಿಸಿಕೊಂಡಿದ್ದಾರೆ.</p>.<p>ಕೇವಲ 6ನೇ ತರಗತಿವರೆಗೆ ಓದಿರುವ ಅಪ್ಪಾಸಾಹೇಬ ಅವರು ಕಬ್ಬು, ಕಲ್ಲಂಗಡಿ, ಮೆಣಸಿನಕಾಯಿ ಸೇರಿದಂತೆ ವಿವಿಧ ಬೆಳೆ ಬೆಳೆಯುವ ಅವರ ಪ್ರಯೋಗ ಬರಗಾಲದಲ್ಲಿಯೂ ಕೈ ಹಿಡಿದಿದೆ.</p>.<p>ಭೀಕರ ಬರಗಾಲದ ಹಿನ್ನೆಲೆಯಲ್ಲಿ ನೀರಿನ ಕೊರತೆಯ ನಡುವೆ 3 ಎಕರೆ ಪ್ರದೇಶದಲ್ಲಿ ಹನಿ ನೀರಾವರಿ ಮೂಲಕ 30 ಟನ್ ಕಲ್ಲಂಗಡಿ ಬೆಳೆದು ಖರ್ಚು ತೆಗೆದು ₹3 ಲಕ್ಷಕ್ಕೂ ಹೆಚ್ಚು ಆದಾಯ ಪಡೆದುಕೊಂಡಿದ್ದಾರೆ. ಬರಕ್ಕೆ ಸೆಡ್ಡು ಹೊಡೆದು ಬಾವಿಯಿಂದ ಹನಿ ನೀರಾವರಿ ಮೂಲಕ ಮೂರುವರೆ ತಿಂಗಳಲ್ಲಿ ಕಲ್ಲಂಗಡಿ ಬೆಳೆದು ಸಾಧನೆ ತೋರಿದ್ದಾರೆ.</p>.<p>10 ಎಕರೆ ಜಮೀನು ಹೊಂದಿದ್ದರೂ ಬರದ ಹಿನ್ನೆಲೆಯಲ್ಲಿ ಬಾವಿ ಹಾಗೂ ಕೊಳವೆ ಬಾವಿಯ ಅಂತರ್ಜಲಮಟ್ಟ ತೀವ್ರ ಕುಸಿದಿದೆ. ಹೀಗಾಗಿ ಕೇವಲ 3 ಎಕರೆ ಪ್ರದೇಶದಲ್ಲಿ ಬೇಸಿಗೆ ಬೆಳೆಯನ್ನಾಗಿ ಅಪ್ಪಾಸಾಹೇಬ ಅವರು ಕಲ್ಲಂಗಡಿ ಬೆಳೆದಿದ್ದಾರೆ. ಇನ್ನುಳಿದ 7 ಎಕರೆ ಪ್ರದೇಶದಲ್ಲಿ ಮುಂಗಾರು ಹಂಗಾಮಿನಲ್ಲಿ ತರಕಾರಿ, ಜೋಳ, ಕಬ್ಬು, ಮೆಕ್ಕೆಜೋಳ, ಗೋಧಿ ಪಡೆದುಕೊಂಡಿದ್ದಾರೆ. ಇದೀಗ 3 ಎಕರೆ ಪ್ರದೇಶವನ್ನೇ ಪ್ರಯೋಗ ಶಾಲೆ ಮಾಡಿದ್ದಾರೆ.</p>.<p>ನವೆಂಬರ್ನಲ್ಲಿ ಕಲ್ಲಂಗಡಿ ನಾಟಿ ಮಾಡಿ ಕಸ ಬೆಳೆಯದಂತೆ 3 ಎಕರೆ ಹೊಲಕ್ಕೆ ಪ್ಲಾಸ್ಟಿಕ್ ಹೊದಿಕೆ ಹಾಕಿ ಬಾವಿಯ ನೀರನ್ನು ಡ್ರಿಪ್ ಮೂಲಕ ಕೊಟ್ಟಿದ್ದು, ಒಂದೆರಡು ಸಲ ರಾಸಾಯನಿಕ ಸಿಂಪಡಣೆ ಮಾಡಿದ್ದಾರೆ. ಹೀಗಾಗಿ ಕಲ್ಲಂಗಡಿ ಬೆಳೆಯಲು ಪ್ರತಿ ಎಕರೆಗೆ ₹ 35 ಸಾವಿರ ವೆಚ್ಚ ಮಾಡಿದ್ದಾರೆ. ಮೊದಲನೇ ಕೊಯ್ಲಿನಲ್ಲಿ 20 ಟನ್ ಇಳುವರಿ ಬಂದಿದ್ದು, ಪ್ರತಿ ಟನ್ ಗೆ ₹14,500ರಂತೆ ಮಾರಾಟ ಮಾಡಿದ್ದಾರೆ.</p>.<p>ಕಲ್ಲಂಗಡಿ ಬೆಳೆಯುವುದಕ್ಕೂ ಮೊದಲು ಈ ಜಮೀನಿನಲ್ಲಿ ಕಬ್ಬು ನಾಟಿ ಮಾಡಿದ್ದರು. ಪ್ರತಿ ಎಕರೆಗೆ 70 ಟನ್ ನಷ್ಟು ಕಬ್ಬು ಬೆಳೆದು, ಪ್ರತಿ ಟನ್ಗೆ ₹ 3 ಸಾವಿರದಂತೆ ₹ 6.30 ಲಕ್ಷ ಆದಾಯ ಪಡೆದಿದ್ದಾರೆ. ಕಬ್ಬನ್ನು ಸಕ್ಕರೆ ಕಾರ್ಖಾನೆಗೆ ಸಾಗಾಟ ಮಾಡಿದ ಬಳಿಕವೇ ಭೂಮಿ ಹದ ಮಾಡಿ ಕಲ್ಲಂಗಡಿ ಬೆಳೆದರು.</p>.<p>ಹೀಗೆ ಕಬ್ಬಿನಿಂದ ₹6.90 ಲಕ್ಷ, ಕಲ್ಲಂಗಡಿಯಿಂದ ₹3 ಲಕ್ಷ , ಮೆಣಸಿನ ಕಾಯಿಯಿಂದ ₹2 ಲಕ್ಷ ಸೇರಿದಂತೆ ವರ್ಷಕ್ಕೆ ₹11.90 ಲಕ್ಷ ಲಾಭ ಪಡೆದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>