10 ಎಕರೆ ಜಮೀನು ಹೊಂದಿದ್ದರೂ ಬರದ ಹಿನ್ನೆಲೆಯಲ್ಲಿ ಬಾವಿ ಹಾಗೂ ಕೊಳವೆ ಬಾವಿಯ ಅಂತರ್ಜಲಮಟ್ಟ ತೀವ್ರ ಕುಸಿದಿದೆ. ಹೀಗಾಗಿ ಕೇವಲ 3 ಎಕರೆ ಪ್ರದೇಶದಲ್ಲಿ ಬೇಸಿಗೆ ಬೆಳೆಯನ್ನಾಗಿ ಅಪ್ಪಾಸಾಹೇಬ ಅವರು ಕಲ್ಲಂಗಡಿ ಬೆಳೆದಿದ್ದಾರೆ. ಇನ್ನುಳಿದ 7 ಎಕರೆ ಪ್ರದೇಶದಲ್ಲಿ ಮುಂಗಾರು ಹಂಗಾಮಿನಲ್ಲಿ ತರಕಾರಿ, ಜೋಳ, ಕಬ್ಬು, ಮೆಕ್ಕೆಜೋಳ, ಗೋಧಿ ಪಡೆದುಕೊಂಡಿದ್ದಾರೆ. ಇದೀಗ 3 ಎಕರೆ ಪ್ರದೇಶವನ್ನೇ ಪ್ರಯೋಗ ಶಾಲೆ ಮಾಡಿದ್ದಾರೆ.