<p><strong>ಬೆಳಗಾವಿ</strong>: ‘ನಗರದಲ್ಲಿ ರಸ್ತೆಗಳು ಹಾಳಾಗಿದ್ದು ಕೂಡಲೇ ದುರಸ್ತಿ ಮಾಡಿಸಬೇಕು. ವಿಧಾನ ಮಂಡಲ ಅಧಿವೇಶನ ನಡೆಯಲಿರುವ ಕಾರಣ, ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸಬೇಕು’ ಎಂದು ಸಂಸದ ಜಗದೀಶ ಶೆಟ್ಟರ್ ತಿಳಿಸಿದರು.</p>.<p>ಸ್ಮಾರ್ಟ್ಸಿಟಿ ಯೋಜನೆ ಹಾಗೂ ಎಸ್ಎಎಸ್ಸಿಐ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಿದ ಅವರು, ‘₹990 ಕೋಟಿ ಅನುದಾನದಲ್ಲಿ ₹931 ಕೋಟಿಯಲ್ಲಿ 104 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಇನ್ನೂ 4 ಕಾಮಗಾರಿಗಳು ಬಾಕಿ. ಅವುಗಳನ್ನೂ ಆದ್ಯತೆ ಮೇಲೆ ಮುಗಿಸಬೇಕು’ ಎಂದರು.</p>.<p>‘ಟಿಳಕವಾಡಿಯ ಕಲಾಮಂದಿರ ನಿರ್ಮಿಸಿದ್ದು ಮಳಿಗೆಗಳ ಹಂಚಿಕೆ ಆಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದರಿ ಸರಿಯಾದ ಕ್ರಮವಲ್ಲ. ಮಳಿಗೆಗಳು ಖಾಲಿ ಇದ್ದರೆ ಹಾಳಾಗುತ್ತವೆ. ಕೂಡಲೇ ಟೆಂಡರ್ ಕರೆದು ಹಂಚಿ’ ಎಂದು ತಾಕೀತು ಮಾಡಿದರು.</p>.<p>‘ನಗರದ ಕಂಟೋನಮೆಂಟ್ ಬಳಿ ಇರುವ ನಗರದ ಜಮೀನು ಪಾಲಿಕೆ ವ್ಯಾಪ್ತಿಗೆ ಪಡೆಯುವ ಬಗ್ಗೆ ಸಭೆಗಳು ನಡೆದಿವೆ ಅಷ್ಟೇ. ಈ ಪ್ರಕ್ರಿಯೆ ಬೇಗ ಪೂರ್ಣಗೊಳಿಸಬೇಕು. ಕೇಂದ್ರ ಸರ್ಕಾರದ ‘ಅಮೃತ’ ಯೋಜನೆಯಡಿ ಏಳು ಕೆರೆಗಳ ಪುನಶ್ಚೇತನಕ್ಕೆ ಮತ್ತು ಉದ್ಯಾನ ಸುಧಾರಣೆ ಕಾರ್ಯ ₹24 ಕೋಟಿ ವೆಚ್ಚದಲ್ಲಿ ನಡೆಸಲಾಗುತ್ತಿದೆ. ಗುಣಮಟ್ಟದ ಕಾಮಗಾರಿ ನಡೆಸಬೇಕು’ ಎಂದರು.</p>.<p>‘ನಗರದ ಘನತ್ಯಾಜ್ಯ ವಿಲೇವಾರಿ ‘ವಿಶ್ವಾಸ್’ ಯೋಜನೆಯಡಿ ₹135 ಕೋಟಿ ಅನುದಾನ ಕೇಂದ್ರದಿಂದ ಮಂಜೂರಾಗಿದೆ. ಇದು 2023ರಲ್ಲಿ ಮಂಜೂರಾಗಿದ್ದು, ಈ ಕಾಮಗಾರಿ ವಿಳಂಬಕ್ಕೆ ಕಾರಣ ಕೇಳಲಾಗಿ ಆದಷ್ಟು ಬೇಗನೆ ಇದನ್ನು ಪ್ರಾರಂಭಿಸಿ’ ಎಂದು ಅಧಿಕಾರಿಗಳಿಗೆ ಸೂಚಿಸಿದರು.</p>.<p>ಮಹಾನಗರ ಪಾಲಿಕೆ ಆಯ್ತುಕ್ತೆ, ಸ್ಮಾರ್ಟ್ಸಿಟಿ ಮಿಷನ್ ವ್ಯವಸ್ಥಾಪಕ ನಿರ್ದೇಶಕಿ ಬಿ.ಶುಭಾ, ಇತರ ಅಧಿಕಾರಿಗಳು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ</strong>: ‘ನಗರದಲ್ಲಿ ರಸ್ತೆಗಳು ಹಾಳಾಗಿದ್ದು ಕೂಡಲೇ ದುರಸ್ತಿ ಮಾಡಿಸಬೇಕು. ವಿಧಾನ ಮಂಡಲ ಅಧಿವೇಶನ ನಡೆಯಲಿರುವ ಕಾರಣ, ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸಬೇಕು’ ಎಂದು ಸಂಸದ ಜಗದೀಶ ಶೆಟ್ಟರ್ ತಿಳಿಸಿದರು.</p>.<p>ಸ್ಮಾರ್ಟ್ಸಿಟಿ ಯೋಜನೆ ಹಾಗೂ ಎಸ್ಎಎಸ್ಸಿಐ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಿದ ಅವರು, ‘₹990 ಕೋಟಿ ಅನುದಾನದಲ್ಲಿ ₹931 ಕೋಟಿಯಲ್ಲಿ 104 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಇನ್ನೂ 4 ಕಾಮಗಾರಿಗಳು ಬಾಕಿ. ಅವುಗಳನ್ನೂ ಆದ್ಯತೆ ಮೇಲೆ ಮುಗಿಸಬೇಕು’ ಎಂದರು.</p>.<p>‘ಟಿಳಕವಾಡಿಯ ಕಲಾಮಂದಿರ ನಿರ್ಮಿಸಿದ್ದು ಮಳಿಗೆಗಳ ಹಂಚಿಕೆ ಆಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದರಿ ಸರಿಯಾದ ಕ್ರಮವಲ್ಲ. ಮಳಿಗೆಗಳು ಖಾಲಿ ಇದ್ದರೆ ಹಾಳಾಗುತ್ತವೆ. ಕೂಡಲೇ ಟೆಂಡರ್ ಕರೆದು ಹಂಚಿ’ ಎಂದು ತಾಕೀತು ಮಾಡಿದರು.</p>.<p>‘ನಗರದ ಕಂಟೋನಮೆಂಟ್ ಬಳಿ ಇರುವ ನಗರದ ಜಮೀನು ಪಾಲಿಕೆ ವ್ಯಾಪ್ತಿಗೆ ಪಡೆಯುವ ಬಗ್ಗೆ ಸಭೆಗಳು ನಡೆದಿವೆ ಅಷ್ಟೇ. ಈ ಪ್ರಕ್ರಿಯೆ ಬೇಗ ಪೂರ್ಣಗೊಳಿಸಬೇಕು. ಕೇಂದ್ರ ಸರ್ಕಾರದ ‘ಅಮೃತ’ ಯೋಜನೆಯಡಿ ಏಳು ಕೆರೆಗಳ ಪುನಶ್ಚೇತನಕ್ಕೆ ಮತ್ತು ಉದ್ಯಾನ ಸುಧಾರಣೆ ಕಾರ್ಯ ₹24 ಕೋಟಿ ವೆಚ್ಚದಲ್ಲಿ ನಡೆಸಲಾಗುತ್ತಿದೆ. ಗುಣಮಟ್ಟದ ಕಾಮಗಾರಿ ನಡೆಸಬೇಕು’ ಎಂದರು.</p>.<p>‘ನಗರದ ಘನತ್ಯಾಜ್ಯ ವಿಲೇವಾರಿ ‘ವಿಶ್ವಾಸ್’ ಯೋಜನೆಯಡಿ ₹135 ಕೋಟಿ ಅನುದಾನ ಕೇಂದ್ರದಿಂದ ಮಂಜೂರಾಗಿದೆ. ಇದು 2023ರಲ್ಲಿ ಮಂಜೂರಾಗಿದ್ದು, ಈ ಕಾಮಗಾರಿ ವಿಳಂಬಕ್ಕೆ ಕಾರಣ ಕೇಳಲಾಗಿ ಆದಷ್ಟು ಬೇಗನೆ ಇದನ್ನು ಪ್ರಾರಂಭಿಸಿ’ ಎಂದು ಅಧಿಕಾರಿಗಳಿಗೆ ಸೂಚಿಸಿದರು.</p>.<p>ಮಹಾನಗರ ಪಾಲಿಕೆ ಆಯ್ತುಕ್ತೆ, ಸ್ಮಾರ್ಟ್ಸಿಟಿ ಮಿಷನ್ ವ್ಯವಸ್ಥಾಪಕ ನಿರ್ದೇಶಕಿ ಬಿ.ಶುಭಾ, ಇತರ ಅಧಿಕಾರಿಗಳು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>