ಇಲ್ಲಿನ ದೊಡ್ಡ ಬಸದಿ ಹಾಗೂ ಚಿಕ್ಕ ಬಸದಿಗಳಲ್ಲಿ ಸಮುದಾಯದ ಮುಖಂಡರು ಪೂಜೆ ಸಲ್ಲಿಸಿದರು. ನಂತರ ಚಿಕ್ಕಬಸದಿಯಿಂದ ಆರಂಭವಾದ ಮೆರವಣಿಗೆ ರವಿವಾರ ಪೇಡೆ, ಬಸವನಗಲ್ಲಿ, ರಾಮಲಿಂಗ ಖಿಂಡ ಗಲ್ಲಿ, ಕುಲಕರ್ಣಿ ಗಲ್ಲಿ, ಶೇರಿ ಗಲ್ಲಿ ಮಾರ್ಗದಲ್ಲಿ ಸಂಚರಿಸಿ ಮತ್ತೆ ಚಿಕ್ಕ ಬಸದಿಗೆ ಬಂದು ಸಮಾಪನಗೊಂಡಿತು. ಇದರೊಂದಿಗೆ ತೀರ್ಥಂಕರರ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಇಟ್ಟು ಮೆರವಣಿಗೆ ಮಾಡಲಾಯಿತು.