ಅಥಣಿ: ‘ಶಾಲಾ ದಿನಗಳಲ್ಲಿ ಬಂಡೆದ್ದ ಹುಡುಗ ಮುಂದೆ ಪ್ರತಿ ಅಸ್ಪೃಶ್ಯ, ಶೂದ್ರ, ಬಡವ ಮತ್ತು ಎಲ್ಲ ಹೆಣ್ಣು ಮಕ್ಕಳು ಕೂಡ ವಿದ್ಯೆಗೆ ಅರ್ಹರು. ಅದು ಅವರ ಹಕ್ಕು ಎಂದು ಹೋರಾಡಿದ ಹಾಗೂ ಜ್ಞಾನ ಸಂಪಾದಿಸಿದರೆ ಯಾರಿಗೂ ತಲೆಬಾಗಬೇಕಿಲ್ಲ ಎಂದು ತೋರಿಸಿಕೊಟ್ಟ ಮಹಾನ್ ವ್ಯಕ್ತಿ ಜ್ಯೋತಿಬಾ ಫುಲೆ’ ಎಂದು ಶಿಕ್ಷಕ ಸಂತೋಷ ಬಡಕಂಬಿ ಸ್ಮರಿಸಿದರು.
ಫುಲೆ ಬ್ರಿಗೇಡ್ ವತಿಯಿಂದ ರಾಮಲಿಂಗೇಶ್ವರ ಗಜಾನನ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಮಹಾತ್ಮ ಜ್ಯೋತಿಬಾ ಫುಲೆ ಅವರ 130ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಿಕ್ಷಕ ಮಲ್ಲಿಕಾರ್ಜುನ ಪ್ಯಾಟಿ, ‘ಬ್ರಿಟಿಷರು ವಿದ್ಯೆಗೆ ಕೊಡುತ್ತಿದ್ದ ಪ್ರಾಮುಖ್ಯತೆಯಿಂದ ಪ್ರೇರಿತರಾಗಿ ಎಲ್ಲರಿಗೂ ವಿದ್ಯಾಭ್ಯಾಸ ಕೊಡಿಸುವ ಪಣ ತೊಟ್ಟ ಧೀಮಂತ ಜ್ಯೋತಿಬಾ ಫುಲೆ’ ಎಂದರು.