<p><strong>ರಾಯಬಾಗ (ಬೆಳಗಾವಿ ಜಿಲ್ಲೆ):</strong> ‘ಹನುಮ ಮಾಲಾಧಾರಣೆ ಮಾಡಿ ಯುವಜನರನ್ನು ದುಶ್ಚಟಗಳಿಂದ ದೂರ ಇರುವಂತೆ ಮಾಡುತ್ತೇವೆ. ಈ ಸಂಪ್ರದಾಯ ಸಹಿಸದ ಕೆಲ ಬಸವ ತಾಲಿಬಾನಿಗಳು, ಕಮ್ಯುನಿಸ್ಟರು ಟೀಕಿಸುತ್ತಾರೆ’ ಎಂದು ಮಹಾರಾಷ್ಟ್ರದ ಕೊಲ್ಹಾಪುರದ ಕನೇರಿ ಮಠಾಧೀಶ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಹೇಳಿದರು.</p>.<p>ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ರಾಯಬಾಗ ತಾಲ್ಲೂಕು ಘಟಕ ಪಟ್ಟಣದಲ್ಲಿ ಈಚೆಗೆ ಆಯೋಜಿಸಿದ್ದ ಹನುಮ ಮಾಲಾ ದೀಕ್ಷಾ ಕಾರ್ಯಕ್ರಮದಲ್ಲಿ ಈ ಮಾತು ಹೇಳಿದ್ದಾರೆ.</p>.<p>‘ಕೆಲ ಸ್ವಾಮೀಜಿಗಳು ನಮ್ಮ ಪದ್ಧತಿ ಸಹಿಸುವುದಿಲ್ಲ. ಆರ್ಎಸ್ಎಸ್ನವರು ಬಡಿಗೆ ಹಿಡಿದು ಏಕೆ ಅಡ್ಡಾಡುತ್ತೀರಿ ಎಂದು ಪ್ರಶ್ನಿಸುತ್ತಾರೆ. ನಮ್ಮ ಹೆಣ್ಣುಮಕ್ಕಳನ್ನು ಎತ್ತಿಕೊಂಡು ಹೋಗುವವರ ವಿರುದ್ಧ ಬಡಿಗೆ ಹಿಡಿಯದೇ, ಆರತಿ ಎತ್ತಿ ಕರೆಯಬೇಕೆ?’ ಎಂದು ಪ್ರಶ್ನಿಸಿದರು.</p>.<p>‘ಇಂಥವರಿಗೆ ಯಾವ ಭಾಷೆಯಲ್ಲಿ ಹೇಳಿದರೆ ತಿಳಿಯುತ್ತದೆಯೋ ಅಂಥದ್ದೇ ಭಾಷೆಯನ್ನು ಈಚೆಗೆ ಬಳಸಿದ್ದೇನೆ. ಅಲ್ಲಿಯವರೆಗೂ ಅವರಿಗೆ ತಿಳಿದಿರಲಿಲ್ಲ. ನಾನು ಬಳಸಿದ ‘ಆ ಭಾಷೆ’ ಬೇಗ ತಿಳಿಯಿತು. ಜನರೇ ಈಗ ಅವರನ್ನು ಚೀ– ಥೂ ಎಂದು ಉಗಿಯುತ್ತಿದ್ದಾರೆ’ ಎಂದರು.</p>.<p>‘ಕಮ್ಯುನಿಸ್ಟರು ಎಂದರೆ ದೇಶದ ಮೇಲೆ ಕಮ್ಮಿ–ನಿಷ್ಠೆ ಇರುವವರು. ಬರೀ ಚೀನಾ, ರಷ್ಯಾ ದೇಶಗಳ ಉದಾಹರಣೆ ಕೊಟ್ಟು ನಮ್ಮ ದೇಶದ ಯುವಜನರನ್ನು ಹಾಳು ಮಾಡುತ್ತಿದ್ದರು. ಈಗ ಅವರ ಉಪಟಳ ಕಡಿಮೆ ಆಗಿದೆ. ಕೆಲ ಕಾವಿಧಾರಿಗಳು ಶುರು ಮಾಡಿದ್ದಾರೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಬಾಗ (ಬೆಳಗಾವಿ ಜಿಲ್ಲೆ):</strong> ‘ಹನುಮ ಮಾಲಾಧಾರಣೆ ಮಾಡಿ ಯುವಜನರನ್ನು ದುಶ್ಚಟಗಳಿಂದ ದೂರ ಇರುವಂತೆ ಮಾಡುತ್ತೇವೆ. ಈ ಸಂಪ್ರದಾಯ ಸಹಿಸದ ಕೆಲ ಬಸವ ತಾಲಿಬಾನಿಗಳು, ಕಮ್ಯುನಿಸ್ಟರು ಟೀಕಿಸುತ್ತಾರೆ’ ಎಂದು ಮಹಾರಾಷ್ಟ್ರದ ಕೊಲ್ಹಾಪುರದ ಕನೇರಿ ಮಠಾಧೀಶ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಹೇಳಿದರು.</p>.<p>ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ರಾಯಬಾಗ ತಾಲ್ಲೂಕು ಘಟಕ ಪಟ್ಟಣದಲ್ಲಿ ಈಚೆಗೆ ಆಯೋಜಿಸಿದ್ದ ಹನುಮ ಮಾಲಾ ದೀಕ್ಷಾ ಕಾರ್ಯಕ್ರಮದಲ್ಲಿ ಈ ಮಾತು ಹೇಳಿದ್ದಾರೆ.</p>.<p>‘ಕೆಲ ಸ್ವಾಮೀಜಿಗಳು ನಮ್ಮ ಪದ್ಧತಿ ಸಹಿಸುವುದಿಲ್ಲ. ಆರ್ಎಸ್ಎಸ್ನವರು ಬಡಿಗೆ ಹಿಡಿದು ಏಕೆ ಅಡ್ಡಾಡುತ್ತೀರಿ ಎಂದು ಪ್ರಶ್ನಿಸುತ್ತಾರೆ. ನಮ್ಮ ಹೆಣ್ಣುಮಕ್ಕಳನ್ನು ಎತ್ತಿಕೊಂಡು ಹೋಗುವವರ ವಿರುದ್ಧ ಬಡಿಗೆ ಹಿಡಿಯದೇ, ಆರತಿ ಎತ್ತಿ ಕರೆಯಬೇಕೆ?’ ಎಂದು ಪ್ರಶ್ನಿಸಿದರು.</p>.<p>‘ಇಂಥವರಿಗೆ ಯಾವ ಭಾಷೆಯಲ್ಲಿ ಹೇಳಿದರೆ ತಿಳಿಯುತ್ತದೆಯೋ ಅಂಥದ್ದೇ ಭಾಷೆಯನ್ನು ಈಚೆಗೆ ಬಳಸಿದ್ದೇನೆ. ಅಲ್ಲಿಯವರೆಗೂ ಅವರಿಗೆ ತಿಳಿದಿರಲಿಲ್ಲ. ನಾನು ಬಳಸಿದ ‘ಆ ಭಾಷೆ’ ಬೇಗ ತಿಳಿಯಿತು. ಜನರೇ ಈಗ ಅವರನ್ನು ಚೀ– ಥೂ ಎಂದು ಉಗಿಯುತ್ತಿದ್ದಾರೆ’ ಎಂದರು.</p>.<p>‘ಕಮ್ಯುನಿಸ್ಟರು ಎಂದರೆ ದೇಶದ ಮೇಲೆ ಕಮ್ಮಿ–ನಿಷ್ಠೆ ಇರುವವರು. ಬರೀ ಚೀನಾ, ರಷ್ಯಾ ದೇಶಗಳ ಉದಾಹರಣೆ ಕೊಟ್ಟು ನಮ್ಮ ದೇಶದ ಯುವಜನರನ್ನು ಹಾಳು ಮಾಡುತ್ತಿದ್ದರು. ಈಗ ಅವರ ಉಪಟಳ ಕಡಿಮೆ ಆಗಿದೆ. ಕೆಲ ಕಾವಿಧಾರಿಗಳು ಶುರು ಮಾಡಿದ್ದಾರೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>