<p><strong>ಬೆಳಗಾವಿ:</strong> ಕಳಪೆ ದರ್ಜೆಯ ಮಿಶ್ರಣ ರಸಗೊಬ್ಬರ ಮಾರಾಟದ 14 ಪ್ರಕರಣಗಳು ಬೆಳಗಾವಿ ವಿಭಾಗದಲ್ಲಿ ಪತ್ತೆ ಆಗಿದ್ದು, ಪ್ರಕರಣ ದಾಖಲಿಸಲು ಕೃಷಿ ಇಲಾಖೆ ಜಾಗೃತ ಕೋಶ ಮುಂದಾಗಿದೆ.</p>.<p>ಕಳಪೆದರ್ಜೆ ಎಂದು ಸಂಶಯವಿದ್ದ 15 ಮಿಶ್ರಣ ರಸಗೊಬ್ಬರಗಳ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಈ ಪೈಕಿ 14 ಮಾದರಿ ಕಳಪೆ ಎಂಬುದು ದೃಢಪಟ್ಟಿದೆ. </p>.<p><strong>ಅನಧಿಕೃತ ಮಾರಾಟ:</strong> ಪರವಾನಗಿ ಇಲ್ಲದೆ ರಸಗೊಬ್ಬರ ಮಾರುತ್ತಿದ್ದ 9 ಕಡೆ ದಾಳಿ ನಡೆಸಿ, ₹15.75 ಲಕ್ಷ ಮೌಲ್ಯದ 555.12 ಕ್ವಿಂಟಲ್ ರಸಗೊಬ್ಬರವನ್ನು ಜಾಗೃತ ಕೋಶ ಜಪ್ತಿ ಮಾಡಿದೆ.</p>.<p>ಅನಧಿಕೃತವಾಗಿ ಖರೀದಿಸಿದ್ದ ಮತ್ತು ಬಳಕೆ ಅವಧಿ ಮುಗಿದಿದ್ದ ರಸಗೊಬ್ಬರ ಮಾರುವವರು, ಅನಧಿಕೃತವಾಗಿ ರಸಗೊಬ್ಬರ ದಾಸ್ತಾನು ಪ್ರಕರಣಗಳಲ್ಲಿ ಅಧಿಕಾರಿಗಳು ದಾಳಿ ನಡೆಸುತ್ತಿದ್ದಾರೆ. </p>.<p>‘ಬಾಗಲಕೋಟೆ ಜಿಲ್ಲೆಯಲ್ಲಿ 4 ದಾಳಿ ನಡೆಸಿ 196.35 ಕ್ವಿಂಟಲ್, ವಿಜಯಪುರದಲ್ಲಿ 2 ದಾಳಿಗಳಲ್ಲಿ 88.77 ಕ್ವಿಂಟಲ್, ಗದಗ ಜಿಲ್ಲೆಯಲ್ಲಿ 2 ದಾಳಿಗಳಲ್ಲಿ 260 ಕ್ವಿಂಟಲ್, ಬೆಳಗಾವಿಯಲ್ಲಿ ಒಂದು ಕಡೆ ದಾಳಿ ನಡೆಸಿ 10 ಕ್ವಿಂಟಲ್ ರಸಗೊಬ್ಬರ ಜಪ್ತಿ ಮಾಡಲಾಗಿದೆ’ ಎಂದು ಜಾಗೃತ ಕೋಶದ ಬೆಳಗಾವಿ ವಿಭಾಗದ ಸಹಾಯಕ ಕೃಷಿ ನಿರ್ದೇಶಕ ಮಹಾಂತೇಶ ಕಿಣಗಿ ‘ಪ್ರಜಾವಾಣಿ’ಗೆ ತಿಳಿಸಿದರು.</p>.<h2>ಅಭಾವದ ದುರ್ಬಳಕೆ:</h2>.<p>‘ರಾಜ್ಯದಲ್ಲಿ ಸದ್ಯ ಯೂರಿಯಾ ಅಭಾವ ಸೃಷ್ಟಿಯಾಗಿದೆ. ಈ ಸಂದರ್ಭದ ದುರ್ಬಳಕೆ ಮಾಡಿಕೊಂಡ ಕೆಲ ಕಂಪನಿಯವರು, ಮಾರಾಟಗಾರರು ಕಳಪೆ ದರ್ಜೆಯ ರಸಗೊಬ್ಬರ ಮಾರುತ್ತಿದ್ದಾರೆ’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯ ಘಟಕದ ಅಧ್ಯಕ್ಷ ಚೂನಪ್ಪ ಪೂಜೇರಿ ಆರೋಪಿಸಿದರು.</p>.<p>‘ಪ್ರಕರಣ ದಾಖಲಿಸಿ, ರಸಗೊಬ್ಬರ ಜಪ್ತಿ ಮಾಡಿದರಷ್ಟೇ ಸಾಲದು. ಅವರಿಗೆ ಶಿಕ್ಷೆ ನೀಡಬೇಕು. ಕಳಪೆ ರಸಗೊಬ್ಬರ ಬಳಸಿ ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ಕೊಡಬೇಕು’ ಎಂದು ಆಗ್ರಹಪಡಿಸಿದರು. </p>.<p>125 ಕೆ.ಜಿ ಕೀಟನಾಶಕ ಜಪ್ತಿ: ಬೆಳಗಾವಿ, ಬಾಗಲಕೋಟೆ, ಧಾರವಾಡ, ಹಾವೇರಿ, ವಿಜಯಪುರ ಜಿಲ್ಲೆಗಳಲ್ಲಿ ಏಪ್ರಿಲ್ 1ರಿಂದ ಜುಲೈ 31ರ ಅವಧಿಯಲ್ಲಿ ನಿಯಮ ಉಲ್ಲಂಘಿಸಿ ಮಾರುತ್ತಿದ್ದ ಪ್ರಕರಣಗಳಲ್ಲಿ 125 ಕೆ.ಜಿ ಕೀಟನಾಶಕವನ್ನೂ ಜಾಗೃತ ಕೋಶವು ಜಪ್ತಿ ಮಾಡಿದೆ. </p>.<div><blockquote>ರಸಗೊಬ್ಬರ ಕೀಟನಾಶಕವನ್ನು ಅಧಿಕೃತ ಮಾರಾಟಗಾರರಿಂದಲೇ ರೈತರು ಖರೀದಿಸಬೇಕು. ವಂಚನೆ ಕುರಿತು ಶಂಕೆ ಇದ್ದರೆ ತಕ್ಷಣವೇ ಮಾಹಿತಿ ನೀಡಬೇಕು </blockquote><span class="attribution">ರಾಜಶೇಖರ ಬಿಜಾಪುರ ಜಂಟಿ ಕೃಷಿ ನಿರ್ದೇಶಕ ಜಾಗೃತ ಕೋಶ ಬೆಳಗಾವಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ:</strong> ಕಳಪೆ ದರ್ಜೆಯ ಮಿಶ್ರಣ ರಸಗೊಬ್ಬರ ಮಾರಾಟದ 14 ಪ್ರಕರಣಗಳು ಬೆಳಗಾವಿ ವಿಭಾಗದಲ್ಲಿ ಪತ್ತೆ ಆಗಿದ್ದು, ಪ್ರಕರಣ ದಾಖಲಿಸಲು ಕೃಷಿ ಇಲಾಖೆ ಜಾಗೃತ ಕೋಶ ಮುಂದಾಗಿದೆ.</p>.<p>ಕಳಪೆದರ್ಜೆ ಎಂದು ಸಂಶಯವಿದ್ದ 15 ಮಿಶ್ರಣ ರಸಗೊಬ್ಬರಗಳ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಈ ಪೈಕಿ 14 ಮಾದರಿ ಕಳಪೆ ಎಂಬುದು ದೃಢಪಟ್ಟಿದೆ. </p>.<p><strong>ಅನಧಿಕೃತ ಮಾರಾಟ:</strong> ಪರವಾನಗಿ ಇಲ್ಲದೆ ರಸಗೊಬ್ಬರ ಮಾರುತ್ತಿದ್ದ 9 ಕಡೆ ದಾಳಿ ನಡೆಸಿ, ₹15.75 ಲಕ್ಷ ಮೌಲ್ಯದ 555.12 ಕ್ವಿಂಟಲ್ ರಸಗೊಬ್ಬರವನ್ನು ಜಾಗೃತ ಕೋಶ ಜಪ್ತಿ ಮಾಡಿದೆ.</p>.<p>ಅನಧಿಕೃತವಾಗಿ ಖರೀದಿಸಿದ್ದ ಮತ್ತು ಬಳಕೆ ಅವಧಿ ಮುಗಿದಿದ್ದ ರಸಗೊಬ್ಬರ ಮಾರುವವರು, ಅನಧಿಕೃತವಾಗಿ ರಸಗೊಬ್ಬರ ದಾಸ್ತಾನು ಪ್ರಕರಣಗಳಲ್ಲಿ ಅಧಿಕಾರಿಗಳು ದಾಳಿ ನಡೆಸುತ್ತಿದ್ದಾರೆ. </p>.<p>‘ಬಾಗಲಕೋಟೆ ಜಿಲ್ಲೆಯಲ್ಲಿ 4 ದಾಳಿ ನಡೆಸಿ 196.35 ಕ್ವಿಂಟಲ್, ವಿಜಯಪುರದಲ್ಲಿ 2 ದಾಳಿಗಳಲ್ಲಿ 88.77 ಕ್ವಿಂಟಲ್, ಗದಗ ಜಿಲ್ಲೆಯಲ್ಲಿ 2 ದಾಳಿಗಳಲ್ಲಿ 260 ಕ್ವಿಂಟಲ್, ಬೆಳಗಾವಿಯಲ್ಲಿ ಒಂದು ಕಡೆ ದಾಳಿ ನಡೆಸಿ 10 ಕ್ವಿಂಟಲ್ ರಸಗೊಬ್ಬರ ಜಪ್ತಿ ಮಾಡಲಾಗಿದೆ’ ಎಂದು ಜಾಗೃತ ಕೋಶದ ಬೆಳಗಾವಿ ವಿಭಾಗದ ಸಹಾಯಕ ಕೃಷಿ ನಿರ್ದೇಶಕ ಮಹಾಂತೇಶ ಕಿಣಗಿ ‘ಪ್ರಜಾವಾಣಿ’ಗೆ ತಿಳಿಸಿದರು.</p>.<h2>ಅಭಾವದ ದುರ್ಬಳಕೆ:</h2>.<p>‘ರಾಜ್ಯದಲ್ಲಿ ಸದ್ಯ ಯೂರಿಯಾ ಅಭಾವ ಸೃಷ್ಟಿಯಾಗಿದೆ. ಈ ಸಂದರ್ಭದ ದುರ್ಬಳಕೆ ಮಾಡಿಕೊಂಡ ಕೆಲ ಕಂಪನಿಯವರು, ಮಾರಾಟಗಾರರು ಕಳಪೆ ದರ್ಜೆಯ ರಸಗೊಬ್ಬರ ಮಾರುತ್ತಿದ್ದಾರೆ’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯ ಘಟಕದ ಅಧ್ಯಕ್ಷ ಚೂನಪ್ಪ ಪೂಜೇರಿ ಆರೋಪಿಸಿದರು.</p>.<p>‘ಪ್ರಕರಣ ದಾಖಲಿಸಿ, ರಸಗೊಬ್ಬರ ಜಪ್ತಿ ಮಾಡಿದರಷ್ಟೇ ಸಾಲದು. ಅವರಿಗೆ ಶಿಕ್ಷೆ ನೀಡಬೇಕು. ಕಳಪೆ ರಸಗೊಬ್ಬರ ಬಳಸಿ ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ಕೊಡಬೇಕು’ ಎಂದು ಆಗ್ರಹಪಡಿಸಿದರು. </p>.<p>125 ಕೆ.ಜಿ ಕೀಟನಾಶಕ ಜಪ್ತಿ: ಬೆಳಗಾವಿ, ಬಾಗಲಕೋಟೆ, ಧಾರವಾಡ, ಹಾವೇರಿ, ವಿಜಯಪುರ ಜಿಲ್ಲೆಗಳಲ್ಲಿ ಏಪ್ರಿಲ್ 1ರಿಂದ ಜುಲೈ 31ರ ಅವಧಿಯಲ್ಲಿ ನಿಯಮ ಉಲ್ಲಂಘಿಸಿ ಮಾರುತ್ತಿದ್ದ ಪ್ರಕರಣಗಳಲ್ಲಿ 125 ಕೆ.ಜಿ ಕೀಟನಾಶಕವನ್ನೂ ಜಾಗೃತ ಕೋಶವು ಜಪ್ತಿ ಮಾಡಿದೆ. </p>.<div><blockquote>ರಸಗೊಬ್ಬರ ಕೀಟನಾಶಕವನ್ನು ಅಧಿಕೃತ ಮಾರಾಟಗಾರರಿಂದಲೇ ರೈತರು ಖರೀದಿಸಬೇಕು. ವಂಚನೆ ಕುರಿತು ಶಂಕೆ ಇದ್ದರೆ ತಕ್ಷಣವೇ ಮಾಹಿತಿ ನೀಡಬೇಕು </blockquote><span class="attribution">ರಾಜಶೇಖರ ಬಿಜಾಪುರ ಜಂಟಿ ಕೃಷಿ ನಿರ್ದೇಶಕ ಜಾಗೃತ ಕೋಶ ಬೆಳಗಾವಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>