ಬೆಳಗಾವಿ: ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಹಾಗೂ ದೂರದರ್ಶನ ಕೇಂದ್ರ ‘ಚಂದನ’ ವಾಹಿನಿ ಸಹಯೋಗದಲ್ಲಿ ಜುಲೈ 25ರಂದು ಇಲ್ಲಿನ ಕಾಂಗ್ರೆಸ್ ಬಾವಿ ಆವರಣದ ಗಾಂಧಿ ಸ್ಮಾರಕ ಭವನದಲ್ಲಿ ಆಯೋಜಿಸಿದ್ದ ‘ಗಾಂಧಿ–150– ಕವಿಗೋಷ್ಠಿ’ಯನ್ನು ಕೆಲವು ಕಾರಣಗಳಿಂದಾಗಿ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ ಎಂದು ಜಿಲ್ಲಾ ಘಟಕದ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ತಿಳಿಸಿದ್ದಾರೆ.