ನೆರಳಿನ ವ್ಯವಸ್ಥೆ ಇಲ್ಲದ್ದರಿಂದ ಚಿಕ್ಕೋಡಿಯ ಗಾಂಧಿ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ಪ್ಲಾಸ್ಟಿಕ್ ಹಾಳೆ ಕಟ್ಟಿಕೊಂಡು ವ್ಯಾಪಾರದಲ್ಲಿ ತೊಡಗಿರುವುದು
ಚಿಕ್ಕೋಡಿಯ ಗಾಂಧಿ ಮಾರುಕಟ್ಟೆಯಲ್ಲಿ ಹಣ್ಣಿನ ವ್ಯಾಪಾರ ಮಾಡುತ್ತಿರುವ ಸ್ಥಳದ ಬಳಿಯೇ ತ್ಯಾಜ್ಯ ಎಸೆದಿರುವುದು
ಚಿಕ್ಕೋಡಿಯ ಗುರುವಾರ ಪೇಟೆ–ಗಾಂಧಿ ಮಾರುಕಟ್ಟೆ ಮಾರ್ಗದ ಸ್ಥಳದಲ್ಲಿ ಗ್ಯಾಸ್ ಪೈಪ್ಲೈನ್ ಅಳವಡಿಕೆಗಾಗಿ ತೋಡಿರುವ ಗುಂಡಿಯನ್ನು ಸಾರ್ವಜನಿಕರು ಹರಸಾಹಸ ಪಟ್ಟು ದಾಟುತ್ತಿರುವುದು

ಚಿಕ್ಕೋಡಿ ಪುರಸಭೆ ಅಧಿಕಾರಿಗಳು ತೆರಿಗೆ ಹೆಸರಿನಲ್ಲಿ ವ್ಯಾಪಾರಿಗಳಿಂದ ಸಾಕಷ್ಟು ಹಣ ಪಡೆಯುತ್ತಾರೆ. ಆದರೆ ಸಂತೆ ನಡೆಯುವ ಸ್ಥಳದಲ್ಲಿ ಸೌಲಭ್ಯ ಕಲ್ಪಿಸಿಲ್ಲ
ಹೌಸಾಬಾಯಿ ದಾನನ್ನವರ ಗ್ರಾಹಕರು ಉಮರಾಣಿ
ಈ ಸಂತೆಗೆ ಸುತ್ತಲಿನ 20 ಗ್ರಾಮಗಳಿಂದ ಜನರು ಬರುತ್ತಾರೆ. ಆದರೆ ಕನಿಷ್ಠ ಮೂಲಸೌಕರ್ಯ ದೊರಕದೆ ತೊಂದರೆ ಅನುಭವಿಸುತ್ತಿದ್ದಾರೆ
ಸುವರ್ಣಾ ಚಿಕ್ಕಲಕಿ ಗ್ರಾಹಕರು ಚಿಕ್ಕೋಡಿ
ಸಂತೆಗೆ ಬರುವವರ ವಾಹನಗಳ ನಿಲುಗಡೆಗಾಗಿ ಸೂಕ್ತ ವ್ಯವಸ್ಥೆ ಮಾಡಬೇಕು
ಮೋಹಿತ ಢಾಕೆ ವ್ಯಾಪಾರಿ ಚಿಕ್ಕೋಡಿ
ಸಂತೆ ನಡೆಯುವ ಸ್ಥಳದಲ್ಲಿ ಸಾಮೂಹಿಕ ಶೌಚಗೃಹ ವ್ಯವಸ್ಥೆ ಇಲ್ಲದ್ದರಿಂದ ಜನರ ಗೋಳು ಹೇಳತೀರದಾಗಿದೆ. ತಕ್ಷಣವೇ ಶೌಚಗೃಹ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು
ಶಾನವಾಜ್ ಬಾಗವಾನ್ ಅಧ್ಯಕ್ಷ ಬೀದಿಬದಿ ವ್ಯಾಪಾರಸ್ಥರ ಸಂಘ ಚಿಕ್ಕೋಡಿ
ಸಂತೆಯ ಸ್ಥಳದಲ್ಲಿನ ಸಮಸ್ಯೆಗಳನ್ನು ನಿವಾರಿಸಿ ಸಾರ್ವಜನಿಕರು ಮತ್ತು ವ್ಯಾಪಾರಿಗಳಿಗೆ ಸೌಲಭ್ಯ ಕಲ್ಪಿಸುವಂತೆ ಪುರಸಭೆ ಅಧಿಕಾರಿಗಳಿಗೆ ಸೂಚಿಸಲಾಗುವುದು
ಚಿದಂಬರ ಕುಲಕರ್ಣಿ ತಹಶೀಲ್ದಾರ್ ಚಿಕ್ಕೋಡಿ‘ಬೇರೆಡೆ ಸಂತೆ ಸ್ಥಳಾಂತರವಾಗಲಿ’
ಚಿಕ್ಕೋಡಿ ಪುರಸಭೆ ಅಧಿಕಾರಿಗಳು ವ್ಯಾಪಾರಿಗಳಿಂದ ಲಕ್ಷಾಂತರ ರೂಪಾಯಿ ಕರ ವಸೂಲಿ ಮಾಡುತ್ತಾರೆ. ಆದರೆ ಕನಿಷ್ಠ ಮೂಲಸೌಲಭ್ಯ ಕಲ್ಪಿಸದೆ ಜಾಣಮೌನ ವಹಿಸಿದ್ದಾರೆ. ಹಾಗಾಗಿ ಈ ಸಂತೆಯನ್ನೇ ಸುಸಜ್ಜಿತ ಹಾಗೂ ವಿಶಾಲವಾದ ಸ್ಥಳಕ್ಕೆ ಸ್ಥಳಾಂತರಿಸಬೇಕು ಎಂಬ ಕೂಗು ಸಾರ್ವಜನಿಕರದ್ದು.
ಸಾಮೂಹಿಕ ಶೌಚಗೃಹವೇ ಇಲ್ಲ
ಪ್ರತಿವಾರ ಇಲ್ಲಿ ನಡೆಯುವ ಸಂತೆಗೆ 5 ಸಾವಿರದಿಂದ 10 ಸಾವಿರ ಗ್ರಾಹಕರು ಆಗಮಿಸುತ್ತಾರೆ. 500ಕ್ಕೂ ಅಧಿಕ ವ್ಯಾಪಾರಿಗಳು ಸೇರುತ್ತಾರೆ. ಆದರೆ ಇಲ್ಲಿ ಸಾಮೂಹಿಕ ಶೌಚಗೃಹ ವ್ಯವಸ್ಥೆ ಇಲ್ಲದ್ದರಿಂದ ಪ್ರತಿಯೊಬ್ಬರೂ ಪರದಾಡುವಂತಾಗಿದೆ. ನೈಸರ್ಗಿಕ ಕರೆ ಬಂದರೆ ಎಲ್ಲರ ಎದೆಯಲ್ಲಿ ನಡುಕ ಶುರುವಾಗುತ್ತದೆ. ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ಇದೆ. ಇಕ್ಕಟ್ಟಿನಿಂದ ಕೂಡಿದ ಮಾರುಕಟ್ಟೆಯಲ್ಲೇ ಸರ್ಕಾರಿ ಪ್ರಾಥಮಿಕ ಶಾಲೆ ಇದೆ. ಅಲ್ಲಿಗೆ ಹೋಗಿ ಬರಲು ಮಕ್ಕಳಿಗೂ ತೊಂದರೆಯಾಗುತ್ತಿದೆ. ಸಂತೆಗೆ ಬರುವವರು ತಮ್ಮ ವಾಹನಗಳ ನಿಲುಗಡೆಗೆ ಸ್ಥಳ ಹುಡುಕುವುದರಲ್ಲೇ ಹೈರಾಣಾಗುತ್ತಿದ್ದಾರೆ.