ಹುಕ್ಕೇರಿ: ‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮೂರನೇ ಬಾರಿಗೆ ಎನ್.ಡಿ.ಎ. ಮೈತ್ರಿಕೂಟ ಅಧಿಕಾರಕ್ಕೆ ಬರುವುದು ನಿಶ್ಚಿತ. ಮತಕ್ಷೇತ್ರದಲ್ಲೂ ಜನರಿಗೆ ಬಿಜೆಪಿ ಪರ ಒಲವಿದೆ’ ಎಂದು ಸಂಸದ, ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಅಣ್ಣಾಸಾಹೇಬ್ ಜೊಲ್ಲೆ ಹೇಳಿದರು.
ಅವರು ಸ್ಥಳೀಯ ಹಿರೇಮಠಕ್ಕೆ ಭೇಟಿ ನೀಡಿ ಚಂದ್ರಶೇಖರ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದು, ‘ಜನರು ದೇಶದ ರಕ್ಷಣೆ ಮತ್ತು ಅಭಿವೃದ್ಧಿ ಕಡೆಗೆ ಆದ್ಯತೆ’ ನೀಡುತ್ತಿದ್ದಾರೆ ಎಂದರು.
ಮಠಕ್ಕೆ ದೌಡ್: ಇದಕ್ಕೂ ಮೊದಲು ತಾಲ್ಲೂಕಿನ ಘೋಡಗೇರಿಯ ಶಿವಾನಂದ ಮಠದ ಮಲ್ಲಯ್ಯ ಸ್ವಾಮೀಜಿ, ವಿರಕ್ತಮಠದ ಕಾಶಿನಾಥ ಸ್ವಾಮೀಜಿ ಮತ್ತು ಜಾಂಗಟಿಹಾಳ ಗ್ರಾಮದ ಯಲ್ಲಾಲಿಂಗ ಮಠದ ಚಂದ್ರಶೇಖರ ಸ್ವಾಮೀಜಿ ಭೇಟಿ ಮಾಡಿ ಆಶೀರ್ವಾದ ಪಡೆದರು.