‘ಎಲ್ಲ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಚುನಾವಣೆ ಎದುರಿಸುವೆ’ ಎಂದು ಶೆಟ್ಟರ್ ಭರವಸೆ ನೀಡಿದರು. ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಅನಿಲ ಬೆನಕೆ, ಸುಭಾಷ ಪಾಟೀಲ, ಡಾ.ಕೆ.ವಿ.ಪಾಟೀಲ, ರಾಜೇಶ ಬೀಳಗಿ, ಶಂಕರ ಮಾಡಲಗಿ, ಶಿವಣ್ಣ ಅಂಗಡಿ ಇದ್ದರು.
ಆಕ್ಷೇಪ: ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಅವರ ನಿವಾಸಕ್ಕೆ ತೆರಳಿದ ನಂತರ, ಬಿಜೆಪಿ ಕಚೇರಿಗೆ ಶೆಟ್ಟರ್ ಹೋದರು. ಆಗ, ಬಿಜೆಪಿ ಮುಖಂಡ ಚಿಕ್ಕರೇವಣ್ಣ ಅವರ ಬೆಂಬಲಿಗರು ಗದ್ದಲ ಸೃಷ್ಟಿಸಿದರು. ‘ಈ ವಿಧಾನಸಭೆಯಲ್ಲಿ ಪರಾಭವಗೊಂಡ ಚಿಕ್ಕರೇವಣ್ಣ ಅವರ ಭೇಟಿಗೆ ಮುನ್ನ, ಬಿಜೆಪಿ ಸೋಲಿಗೆ ಕಾರಣರಾದ ಮಹಾದೇವಪ್ಪ ಯಾದವಾಡ ಅವರ ಮನೆಗೆ ಭೇಟಿ ನೀಡಿರುವುದು ಸರಿಯಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದರು. ನಂತರ ಶೆಟ್ಟರ್ ಎಲ್ಲರನ್ನೂ ಸಮಾಧಾನಪಡಿಸಿದರು.