<p><strong>ಬೆಳಗಾವಿ</strong>: ಜಿಲ್ಲೆಯ ಐದು ಸ್ಥಳಗಳ ಮೇಲೆ ಶನಿವಾರ ದಾಳಿ ಮಾಡಿದ ಲೋಕಾಯುಕ್ತ ಅಧಿಕಾರಿಗಳು, ಮೂವರು ಅಧಿಕಾರಿಗಳ ಆಸ್ತಿ ಜಾಲಾಡಿದ್ದಾರೆ. ಒಟ್ಟು ₹8.57 ಕೋಟಿಗೂ ಅಧಿಕ ಮೌಲ್ಯದ ಆಸ್ತಿಗಳು ಪತ್ತೆಯಾಗಿವೆ.</p><p>ಇಲ್ಲಿನ ದೇವರಾಜ್ ಅರಸು ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಸಿದ್ಧಲಿಂಗಪ್ಪ ನಿಂಗಪ್ಪ ಬಾನಸಿ ಅವರಿಗೆ ವಿದ್ಯಾನಗರದ ಮನೆ, ಕಚೇರಿ ಹಾಗೂ ರಾಯಬಾಗ ತಾಲ್ಲೂಕಿನ ಬೆಕ್ಕೇರಿ ಗ್ರಾಮದಲ್ಲಿರುವ ಮನೆ ಮೇಲೆ ದಾಳಿ ನಡೆಸಿದ್ದು ಒಟ್ಟು ₹1.45 ಕೋಟಿ ಮೌಲ್ಯದ ಆಸ್ತಿ ವಶಕ್ಕೆ ಪಡೆದಿದ್ದಾರೆ.</p><p>₹37.66 ಲಕ್ಷ ಮೌಲ್ಯದ ಸೈಟುಗಳು, ₹65 ಲಕ್ಷ ಮೌಲ್ಯದ ಮನೆ ಹಾಗೂ ಇತರ ವಸ್ತುಗಳು ಸೇರಿ ₹1.02 ಕೋಟಿ ಮೌಲ್ಯದ ಸ್ಥಿರಾಸ್ತಿ ಪತ್ತೆಯಾಗಿದೆ. ₹18 ಸಾವಿರ ನಗದು, ₹34.64 ಲಕ್ಷ ಮೌಲ್ಯದ ಚಿನ್ನಾಭರಣಗಳು, ₹10.60 ಲಕ್ಷ ಮೌಲ್ಯದ ಕಾರ್ ಸೇರಿ ಒಟ್ಟು ₹45.43 ಲಕ್ಷ ಮೌಲ್ಯದ ಚರಾಸ್ತಿ ಸಿಕ್ಕಿದೆ.</p>.<p>ಧಾರವಾಡದ ಲೋಕೋಪಯೋಗಿ ಇಲಾಖೆ ಮುಖ್ಯ ಎಂಜಿನಿಯರ್ ಎಚ್.ಸಿ. ಸುರೇಶ ಅವರ ಬೆಳಗಾವಿಯ ಹನುಮಾನ್ ನಗರದಲ್ಲಿರುವ ಮನೆ ಮೇಲೆ ದಾಳಿ ನಡೆಸಲಾಗಿದ್ದು, ಒಟ್ಟು ₹3.62 ಕೋಟಿಗೂ ಅಧಿಕ ಆಸ್ತಿ ಪತ್ತೆಯಾಗಿದೆ.</p><p>ಇದರಲ್ಲಿ ₹1.90 ಕೋಟಿ ಮೌಲ್ಯದ ಮನೆ ಹಾಗೂ ಫಾರ್ಮ್ಹೌಸ್, ₹13.44 ಲಕ್ಷ ಮೌಲ್ಯದ ಎರಡು ನಿವೇಶನ, ₹55.50 ಲಕ್ಷ ಮೌಲ್ಯದ ನಾಲ್ಕು ವಾಣಿಜ್ಯ ಮಳಿಗೆ, ₹35.36 ಲಕ್ಷ 11 ಎಕರೆ ಕೃಷಿ ಜಮೀನು, ₹76.60 ಸಾವಿರ ನಗದು, ಬ್ಯಾಂಕಿನಲ್ಲಿಟ್ಟ ₹1.65 ಕೋಟಿಯ ಎಫ್.ಡಿ, ₹21.58 ಲಕ್ಷ ಮೌಲ್ಯದ ಚಿನ್ನಾಭರಣಗಳು, ₹2.40 ಲಕ್ಷ ಬೆಲೆಬಾಳುವ ಬೆಳ್ಳಿ ಸಾಮಗ್ರಿಗಳು, ₹26 ಲಕ್ಷ ಬೆಲೆಬಾಳುವ ಮೂರು ಕಾರುಗಳು, ₹25 ಲಕ್ಷಕ್ಕೂ ಅಧಿಕ ಬೆಲೆಬಾಳುವ ಪೀಠೋಪಕರಣಗಳನ್ನೂ ಲೋಕಾಯುಕ್ತರು ವಶಕ್ಕೆ ಪಡೆದಿದ್ದಾರೆ.</p><p>ಮತ್ತೊಂದೆಡೆ, ಗದಗ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಗಂಗಾಧರ ಶಿರೋಳ ಅವರಿಗೆ ಸೇರಿದ, ಇಲ್ಲಿನ ಮನೆ, ಮಳಿಗೆ ಹಾಗೂ ವಿವಿಧ ಸಂಬಂಧಿಗಳ ಮನೆ ಮೇಲೆ ದಾಳಿ ಮಾಡಲಾಗಿದೆ. ಒಟ್ಟು ₹3.50 ಕೋಟಿ ಮೌಲ್ಯದ ಆಸ್ತಿ ಪತ್ತೆ ಮಾಡಲಾಗಿದೆ.</p><p>₹2.30 ಕೋಟಿ ಮೌಲ್ಯದ ಎರಡು ಬಂಗಲೆ, ₹25.50 ಲಕ್ಷ ಮೌಲ್ಯದ ನಾಲ್ಕು ನಿವೇಶನಗಳು, ₹13 ಲಕ್ಷ ಬೆಲೆಬಾಳುವ ಮೂರು ಎಕರೆ ಜಮೀನು, ₹21.50 ಲಕ್ಷ ನಗದು, ₹23.83 ಲಕ್ಷ ಮೌಲ್ಯದ ಚಿನ್ನಾಭರಣ, ₹3.70 ಲಕ್ಷ ಮೌಲ್ಯದ ಬೆಳ್ಳಿ ಸಲಕರಣೆ, ₹12.30 ಲಕ್ಷ ಬೆಲೆಬಾಳುವ ಕಾರು, ₹5 ಲಕ್ಷದ ಪೀಠೋಪಕರಣಗಳು ಇದರಲ್ಲಿ ಸೇರಿವೆ.</p><p>ಲೋಕಾಯುಕ್ತ ಎಸ್ಪಿ ಹನುಮಂತರಾಯ ಅವರ ನೇತೃತ್ವದಲ್ಲಿ ಅಧಿಕಾರಿಗಳು ಐದು ತಂಡಗಳು ಏಕಕಾಲಕ್ಕೆ ಈ ದಾಳಿಯಲ್ಲಿ ಪಾಲ್ಗೊಂಡವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ</strong>: ಜಿಲ್ಲೆಯ ಐದು ಸ್ಥಳಗಳ ಮೇಲೆ ಶನಿವಾರ ದಾಳಿ ಮಾಡಿದ ಲೋಕಾಯುಕ್ತ ಅಧಿಕಾರಿಗಳು, ಮೂವರು ಅಧಿಕಾರಿಗಳ ಆಸ್ತಿ ಜಾಲಾಡಿದ್ದಾರೆ. ಒಟ್ಟು ₹8.57 ಕೋಟಿಗೂ ಅಧಿಕ ಮೌಲ್ಯದ ಆಸ್ತಿಗಳು ಪತ್ತೆಯಾಗಿವೆ.</p><p>ಇಲ್ಲಿನ ದೇವರಾಜ್ ಅರಸು ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಸಿದ್ಧಲಿಂಗಪ್ಪ ನಿಂಗಪ್ಪ ಬಾನಸಿ ಅವರಿಗೆ ವಿದ್ಯಾನಗರದ ಮನೆ, ಕಚೇರಿ ಹಾಗೂ ರಾಯಬಾಗ ತಾಲ್ಲೂಕಿನ ಬೆಕ್ಕೇರಿ ಗ್ರಾಮದಲ್ಲಿರುವ ಮನೆ ಮೇಲೆ ದಾಳಿ ನಡೆಸಿದ್ದು ಒಟ್ಟು ₹1.45 ಕೋಟಿ ಮೌಲ್ಯದ ಆಸ್ತಿ ವಶಕ್ಕೆ ಪಡೆದಿದ್ದಾರೆ.</p><p>₹37.66 ಲಕ್ಷ ಮೌಲ್ಯದ ಸೈಟುಗಳು, ₹65 ಲಕ್ಷ ಮೌಲ್ಯದ ಮನೆ ಹಾಗೂ ಇತರ ವಸ್ತುಗಳು ಸೇರಿ ₹1.02 ಕೋಟಿ ಮೌಲ್ಯದ ಸ್ಥಿರಾಸ್ತಿ ಪತ್ತೆಯಾಗಿದೆ. ₹18 ಸಾವಿರ ನಗದು, ₹34.64 ಲಕ್ಷ ಮೌಲ್ಯದ ಚಿನ್ನಾಭರಣಗಳು, ₹10.60 ಲಕ್ಷ ಮೌಲ್ಯದ ಕಾರ್ ಸೇರಿ ಒಟ್ಟು ₹45.43 ಲಕ್ಷ ಮೌಲ್ಯದ ಚರಾಸ್ತಿ ಸಿಕ್ಕಿದೆ.</p>.<p>ಧಾರವಾಡದ ಲೋಕೋಪಯೋಗಿ ಇಲಾಖೆ ಮುಖ್ಯ ಎಂಜಿನಿಯರ್ ಎಚ್.ಸಿ. ಸುರೇಶ ಅವರ ಬೆಳಗಾವಿಯ ಹನುಮಾನ್ ನಗರದಲ್ಲಿರುವ ಮನೆ ಮೇಲೆ ದಾಳಿ ನಡೆಸಲಾಗಿದ್ದು, ಒಟ್ಟು ₹3.62 ಕೋಟಿಗೂ ಅಧಿಕ ಆಸ್ತಿ ಪತ್ತೆಯಾಗಿದೆ.</p><p>ಇದರಲ್ಲಿ ₹1.90 ಕೋಟಿ ಮೌಲ್ಯದ ಮನೆ ಹಾಗೂ ಫಾರ್ಮ್ಹೌಸ್, ₹13.44 ಲಕ್ಷ ಮೌಲ್ಯದ ಎರಡು ನಿವೇಶನ, ₹55.50 ಲಕ್ಷ ಮೌಲ್ಯದ ನಾಲ್ಕು ವಾಣಿಜ್ಯ ಮಳಿಗೆ, ₹35.36 ಲಕ್ಷ 11 ಎಕರೆ ಕೃಷಿ ಜಮೀನು, ₹76.60 ಸಾವಿರ ನಗದು, ಬ್ಯಾಂಕಿನಲ್ಲಿಟ್ಟ ₹1.65 ಕೋಟಿಯ ಎಫ್.ಡಿ, ₹21.58 ಲಕ್ಷ ಮೌಲ್ಯದ ಚಿನ್ನಾಭರಣಗಳು, ₹2.40 ಲಕ್ಷ ಬೆಲೆಬಾಳುವ ಬೆಳ್ಳಿ ಸಾಮಗ್ರಿಗಳು, ₹26 ಲಕ್ಷ ಬೆಲೆಬಾಳುವ ಮೂರು ಕಾರುಗಳು, ₹25 ಲಕ್ಷಕ್ಕೂ ಅಧಿಕ ಬೆಲೆಬಾಳುವ ಪೀಠೋಪಕರಣಗಳನ್ನೂ ಲೋಕಾಯುಕ್ತರು ವಶಕ್ಕೆ ಪಡೆದಿದ್ದಾರೆ.</p><p>ಮತ್ತೊಂದೆಡೆ, ಗದಗ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಗಂಗಾಧರ ಶಿರೋಳ ಅವರಿಗೆ ಸೇರಿದ, ಇಲ್ಲಿನ ಮನೆ, ಮಳಿಗೆ ಹಾಗೂ ವಿವಿಧ ಸಂಬಂಧಿಗಳ ಮನೆ ಮೇಲೆ ದಾಳಿ ಮಾಡಲಾಗಿದೆ. ಒಟ್ಟು ₹3.50 ಕೋಟಿ ಮೌಲ್ಯದ ಆಸ್ತಿ ಪತ್ತೆ ಮಾಡಲಾಗಿದೆ.</p><p>₹2.30 ಕೋಟಿ ಮೌಲ್ಯದ ಎರಡು ಬಂಗಲೆ, ₹25.50 ಲಕ್ಷ ಮೌಲ್ಯದ ನಾಲ್ಕು ನಿವೇಶನಗಳು, ₹13 ಲಕ್ಷ ಬೆಲೆಬಾಳುವ ಮೂರು ಎಕರೆ ಜಮೀನು, ₹21.50 ಲಕ್ಷ ನಗದು, ₹23.83 ಲಕ್ಷ ಮೌಲ್ಯದ ಚಿನ್ನಾಭರಣ, ₹3.70 ಲಕ್ಷ ಮೌಲ್ಯದ ಬೆಳ್ಳಿ ಸಲಕರಣೆ, ₹12.30 ಲಕ್ಷ ಬೆಲೆಬಾಳುವ ಕಾರು, ₹5 ಲಕ್ಷದ ಪೀಠೋಪಕರಣಗಳು ಇದರಲ್ಲಿ ಸೇರಿವೆ.</p><p>ಲೋಕಾಯುಕ್ತ ಎಸ್ಪಿ ಹನುಮಂತರಾಯ ಅವರ ನೇತೃತ್ವದಲ್ಲಿ ಅಧಿಕಾರಿಗಳು ಐದು ತಂಡಗಳು ಏಕಕಾಲಕ್ಕೆ ಈ ದಾಳಿಯಲ್ಲಿ ಪಾಲ್ಗೊಂಡವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>