ಕಳೆದ ವರ್ಷ ಮೊದಲ ಅಲೆ ಬಂದಿದ್ದರಿಂದ ಹೆಚ್ಚು ದನ ಸತ್ತವು. ಆಗ ಲಸಿಕೆ ನೀಡಿದ್ದರಿಂದ ಈ ಬಾರಿ ಅಲೆ ತೀವ್ರವಾಗಿಲ್ಲ. ಸೋಂಕು ಹರಡುವಿಕೆಯೂ ನಿಯಂತ್ರಣದಲ್ಲಿದೆ
- ಡಾ.ರಾಜೀವ ಕೊಲೇರ ಉಪನಿರ್ದೇಶಕ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆ
ಮಹಾರಾಷ್ಟ್ರದಲ್ಲಿ ಚರ್ಮಗಂಟು ರೋಗ ಹೆಚ್ಚಾಗಿ ಕಾಣಿಸಿಕೊಂಡಿದೆ. ಗಡಿ ಭಾಗದ ಗ್ರಾಮಗಳಲ್ಲಿ ಶೀಘ್ರ ಲಸಿಕೆ ರವಾನೆ ಮಾಡಬೇಕು. ಸತ್ತ ದನಗಳಿಗೆ ಪರಿಹಾರ ಹೆಚ್ಚಿಸಬೇಕು
– ಯಮನಪ್ಪ ತವಗದ, ಕೃಷಿಕ ನಿಡಸೋಸಿ
ಕಳೆದ ಬಾರಿ ಉಂಟಾದ ಹಾನಿಯಿಂದ ಸರ್ಕಾರ ಎಚ್ಚೆತ್ತುಕೊಂಡಿಲ್ಲ. ಈ ಸೋಂಕಿಗೆ ಲಸಿಕೆ ಕಂಡುಹಿಡಿಯುವ ಯತ್ನ ಮಾಡಿಲ್ಲ. ರೈತರ ಕಣ್ಣೊರೆಸುವುದೇ ಸಾಧನೆ ಎಂಬಂತೆ ಹೇಳುತ್ತಿದ್ದಾರೆ
– ವಿಜಯಲಕ್ಷ್ಮಿ ಬಾಳಿಗಿಡದ ಗೃಹಿಣಿ ಬೆಳಗಾವಿ
ಸಾಕುವವರಿಗೆ ಬೇಡ ಭಯ
‘ಕ್ಯಾಪ್ರಿಸಾಕ್ಸ್’ ಎಂಬ ವೈರಾಣುವಿನಿಂದ ಈ ಸೋಂಕು ಬರುತ್ತದೆ. ಸದ್ಯ ಪ್ರಾಣಿಗಳಲ್ಲಿ ಹರಡಿದ ಸೋಂಕಿನ ವೈರಾಣು ಮನುಷ್ಯರಿಗೆ ಯಾವುದೇ ರೀತಿಯ ತೊಂದರೆ ಮಾಡುವುದಿಲ್ಲ. ಹಾಗಾಗಿ ದನಗಳನ್ನು ಉಪಚರಿಸುವವರು ಭಯಪಡಬೇಕಾಗಿಲ್ಲ. ಆದರೆ ಕೈಗಳಿಗೆ ಗ್ಲೌಸುಗಳನ್ನು ಹಾಕಿಕೊಂಡು ಗಾಯ ಉಪಚರಿಸಬೇಕು. ಉಪಚಾರದ ನಂತರ ಸ್ವಚ್ಛವಾಗಿ ಕೈ ತೊಳೆದುಕೊಳ್ಳಬೇಕು ಎಂಬುದು ವೈದ್ಯರ ಸಲಹೆ.