<p><strong>ಬೈಲಹೊಂಗಲ:</strong> ತಾಲ್ಲೂಕಿನ ನೇಗಿನಹಾಳದಲ್ಲಿ ನೇಣಿಗೆ ಶರಣಾದ ಗುರು ಮಡಿವಾಳೇಶ್ವರ ಶಿವಯೋಗಿ ಮಠದ ಪೀಠಾಧಿಪತಿ ಬಸವಸಿದ್ಧಲಿಂಗ ಸ್ವಾಮೀಜಿ ಅವರ ಅಂತ್ಯಕ್ರಿಯೆಗೆ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ. ಬಸವ ತತ್ವದ ಅಡಿಯಲ್ಲಿ ಮಠದ ಆವರಣದಲ್ಲೇ ಸಕಲ ವಿಧಿ, ವಿಧಾನಗಳಿಂದ ಪೂಜ್ಯರ ಅಂತ್ಯಕ್ರಿಯೆ ನೆರವೇರಲಿದೆ.</p>.<p>ಮರಣೋತ್ತರ ಪರೀಕ್ಷೆ ಬಳಿಕ ಸ್ವಾಮೀಜಿ ಅವರ ಕಳೇಬರವನ್ನು ಸೋಮವಾರ ರಾತ್ರಿ ಮಠಕ್ಕೆ ತರಲಾಯಿತು.</p>.<p>ರಾತ್ರಿಯಿಂದ ಮಂಗಳವಾರ ಬೆಳಗಿನ ಜಾವದ ವರೆಗೆ ಅಪಾರ ಸಂಖ್ಯೆಯ ಜನ ದರ್ಶನ ಪಡೆದರು. ವಿವಿಧ ಮಠಗಳ ಪೀಠಾಧೀಶರು, ಗಣ್ಯರು, ಜನಪ್ರತಿನಿಧಿಗಳು, ವಿವಿಧ ಕನ್ನಡಪರ ಹೋರಾಟದ ಸಂಘಟನೆ, ಬಸವ ಸಂಘಟನೆಗಳ ಮುಖಂಡರು ಅಂತಿಮ ದರ್ಶನಕ್ಕೆ ಸರದಿಯಲ್ಲಿ ನಿಂತರು.</p>.<p><strong>ಊರು ತಬ್ಬಲಿ ಮಾಡಿದ್ಯಾ ಯಪ್ಪಾ:</strong><br />ಬೈಲಹೊಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಶ್ರೀಗಳ ಮರಣೋತ್ತರ ಪರೀಕ್ಷೆ ನಡೆಸಿ ಶರೀರ ಹೊತ್ತು ತಂದಿದ್ದ ಆಂಬುಲೆನ್ಸ್ ವಾಹನ ಮಠವನ್ನು ಪ್ರವೇಶಿಸುತ್ತಿದ್ದಂತೆ ಭಕ್ತರ ಆಕ್ರಂದನ ಮುಗಿಲು ಮುಟ್ಟಿತು. ಕಣ್ಣೀರು ಕವಲೊಡೆದು ದುಃಖ ಇಮ್ಮಡಿಯಾಯಿತು.</p>.<p>ಮಠದ ಹಿರಿಯರು, ಯುವ ಸಮೂಹ ಅಂತಿಮ ದರ್ಶನಕ್ಕೆ ಎಲ್ಲ ತಯಾರಿ ಮಾಡಿಕೊಂಡು ಸಿದ್ಧತೆ ಮಾಡಿದ್ದರು. ಕಿಕ್ಕಿರಿದ ಜನಸಮೂಹ ಕಣ್ಣೀರಾಯಿತು.</p>.<p>"ಅಜ್ಜಾರ ನೀವು ಜೀವ ಕೊಡುವಷ್ಟು ನೋವು ಅನುಭವಿಸುತ್ತಿದ್ದರೂ ನಮಗೆ ಅರ್ಥವಾಗಲಿಲ್ಲ. ನಿಮ್ಮನ್ನ ಕಸಗೊಂಡ ಹೋದವರ ಹಾಳಾಗಲಿ. ನಿಮ್ಮ ಬಗ್ಗೆ ಸುತ್ತ ಆರೋಪ ಮಾಡಿದ ಆ ಹೆಂಗಸೂರನ್ನ ದೇವರ ನೋಡ್ಕೊಳ್ಳಿ" ಎಂದು ಮಹಿಳೆಯರು ಶವದ ಮುಂದೆ ಗೋಗರೆದರು.</p>.<p>"ಊರು ತಬ್ಬಲಿ ಮಾಡಿದ್ಯಾ ಯಪ್ಪಾ..." ಎಂದು ಮತ್ತೆ ಕೆಲವರು ನೋವು ತೋಡಿಕೊಂಡರು.</p>.<p>ಮಾತು ಸಾಧ್ಯವಾಗದೇ ಅವರ ಶಿಷ್ಯ ಬಳಗ ಮೌನಕ್ಕೆ ಶರಣಾಯಿತು.<br /><br /><strong>ಮೆರವಣಿಗೆ ಓಣಿಗೆ ತರಲು ಮನವಿ:</strong><br />ಪೂಜ್ಯರ ಪ್ರಾರ್ಥಿವ ಶರೀರವನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ನೆರವೇರಿಸಲು ನಿರ್ಧರಿಸಲಾಗಿದೆ. ಇದು ಶ್ರೀಗಳ ಕೊನೆಯ ಯಾತ್ರೆ, ಹಾಗಾಗಿ, ತಮ್ಮ ಓಣಿಗೂ ಕರೆತರಬೇಕು ಎಂದು ಊರಿನ ಎಲ್ಲ ಜನ ಕೈಮುಗಿದು ಪ್ರಾರ್ಥಿಸುತ್ತಿರುವುದು ಸಾಮಾನ್ಯವಾಗಿದೆ.</p>.<p>ಭಕ್ತರ ಸಂಘಟನೆಗಳು ರಾತ್ರಿಯಿಂದಲೇ ಭಜನೆಯಲ್ಲಿ ತೊಡಗಿವೆ. ಬಸವೇಶ್ವರ ಮಹಾರಾಜ್ ಕಿ ಜೈ, ಬಸವಸಿದ್ಧಲಿಂಗ ಮಹಾರಾಜ್ ಕಿ ಜೈ ಘೋಷಣೆ ಮೊಳಗುತ್ತಿವೆ.</p>.<p>ಗದಗ ಡಂಬಳದ ಡಾ.ಸಿದ್ಧರಾಮ ಸ್ವಾಮೀಜಿ, ಬೈಲೂರಿನ ನಿಜಗುಣಾನಂದ ಸ್ವಾಮೀಜಿ, ಉಳವಿ ಬಸವಪೀಠದ ಬಸವಪ್ರಕಾಶ ಸ್ವಾಮೀಜಿ, ದಾವಣಗೆರೆ ಸ್ವಾಮೀಜಿ, ಹೊಸೂರು ಗಂಗಾಧರ ಸ್ವಾಮೀಜಿ ಸೇರಿದಂತೆ ಸುತ್ತಮುತ್ತಲಿನ ಹಲವಾರು ಪೂಜ್ಯರು, ಶಾಸಕ ಮಹಾಂತೇಶ ದೊಡ್ಡಗೌಡರ, ಮಾಜಿ ಶಾಸಕ ಡಿ.ಬಿ.ಇನಾಮದಾರ ಅಂತಿಮ ದರ್ಶನ ಪಡೆದುಕೊಂಡರು.</p>.<p>ಮುಖಂಡರಾದ ಬಾಬಾಸಾಹೇಬ ಪಾಟೀಲ, ರೋಹಿಣಿ ಪಾಟೀಲ, ಲಿಂಗಾಯತ ಬಸವ ಸೇನೆ ಅಧ್ಯಕ್ಷ ಶಂಕರ ಗುಡಸ, ವಿಕ್ರಂ ಇನಾಮದಾರ, ಅಡಿಷನಲ್ ಎಸ್ಪಿ ನಂದಗಾವಿ, ಡಿವೈಎಸ್ಪಿ ಶಿವಾನಂದ ಕಟಗಿ, ರಾಮನಗೌಡ ಹಟ್ಟಿ ಅವರು ಮಠದ ಆವರಣದಲ್ಲೇ ಬೀಡು ಬಿಟ್ಟಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೈಲಹೊಂಗಲ:</strong> ತಾಲ್ಲೂಕಿನ ನೇಗಿನಹಾಳದಲ್ಲಿ ನೇಣಿಗೆ ಶರಣಾದ ಗುರು ಮಡಿವಾಳೇಶ್ವರ ಶಿವಯೋಗಿ ಮಠದ ಪೀಠಾಧಿಪತಿ ಬಸವಸಿದ್ಧಲಿಂಗ ಸ್ವಾಮೀಜಿ ಅವರ ಅಂತ್ಯಕ್ರಿಯೆಗೆ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ. ಬಸವ ತತ್ವದ ಅಡಿಯಲ್ಲಿ ಮಠದ ಆವರಣದಲ್ಲೇ ಸಕಲ ವಿಧಿ, ವಿಧಾನಗಳಿಂದ ಪೂಜ್ಯರ ಅಂತ್ಯಕ್ರಿಯೆ ನೆರವೇರಲಿದೆ.</p>.<p>ಮರಣೋತ್ತರ ಪರೀಕ್ಷೆ ಬಳಿಕ ಸ್ವಾಮೀಜಿ ಅವರ ಕಳೇಬರವನ್ನು ಸೋಮವಾರ ರಾತ್ರಿ ಮಠಕ್ಕೆ ತರಲಾಯಿತು.</p>.<p>ರಾತ್ರಿಯಿಂದ ಮಂಗಳವಾರ ಬೆಳಗಿನ ಜಾವದ ವರೆಗೆ ಅಪಾರ ಸಂಖ್ಯೆಯ ಜನ ದರ್ಶನ ಪಡೆದರು. ವಿವಿಧ ಮಠಗಳ ಪೀಠಾಧೀಶರು, ಗಣ್ಯರು, ಜನಪ್ರತಿನಿಧಿಗಳು, ವಿವಿಧ ಕನ್ನಡಪರ ಹೋರಾಟದ ಸಂಘಟನೆ, ಬಸವ ಸಂಘಟನೆಗಳ ಮುಖಂಡರು ಅಂತಿಮ ದರ್ಶನಕ್ಕೆ ಸರದಿಯಲ್ಲಿ ನಿಂತರು.</p>.<p><strong>ಊರು ತಬ್ಬಲಿ ಮಾಡಿದ್ಯಾ ಯಪ್ಪಾ:</strong><br />ಬೈಲಹೊಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಶ್ರೀಗಳ ಮರಣೋತ್ತರ ಪರೀಕ್ಷೆ ನಡೆಸಿ ಶರೀರ ಹೊತ್ತು ತಂದಿದ್ದ ಆಂಬುಲೆನ್ಸ್ ವಾಹನ ಮಠವನ್ನು ಪ್ರವೇಶಿಸುತ್ತಿದ್ದಂತೆ ಭಕ್ತರ ಆಕ್ರಂದನ ಮುಗಿಲು ಮುಟ್ಟಿತು. ಕಣ್ಣೀರು ಕವಲೊಡೆದು ದುಃಖ ಇಮ್ಮಡಿಯಾಯಿತು.</p>.<p>ಮಠದ ಹಿರಿಯರು, ಯುವ ಸಮೂಹ ಅಂತಿಮ ದರ್ಶನಕ್ಕೆ ಎಲ್ಲ ತಯಾರಿ ಮಾಡಿಕೊಂಡು ಸಿದ್ಧತೆ ಮಾಡಿದ್ದರು. ಕಿಕ್ಕಿರಿದ ಜನಸಮೂಹ ಕಣ್ಣೀರಾಯಿತು.</p>.<p>"ಅಜ್ಜಾರ ನೀವು ಜೀವ ಕೊಡುವಷ್ಟು ನೋವು ಅನುಭವಿಸುತ್ತಿದ್ದರೂ ನಮಗೆ ಅರ್ಥವಾಗಲಿಲ್ಲ. ನಿಮ್ಮನ್ನ ಕಸಗೊಂಡ ಹೋದವರ ಹಾಳಾಗಲಿ. ನಿಮ್ಮ ಬಗ್ಗೆ ಸುತ್ತ ಆರೋಪ ಮಾಡಿದ ಆ ಹೆಂಗಸೂರನ್ನ ದೇವರ ನೋಡ್ಕೊಳ್ಳಿ" ಎಂದು ಮಹಿಳೆಯರು ಶವದ ಮುಂದೆ ಗೋಗರೆದರು.</p>.<p>"ಊರು ತಬ್ಬಲಿ ಮಾಡಿದ್ಯಾ ಯಪ್ಪಾ..." ಎಂದು ಮತ್ತೆ ಕೆಲವರು ನೋವು ತೋಡಿಕೊಂಡರು.</p>.<p>ಮಾತು ಸಾಧ್ಯವಾಗದೇ ಅವರ ಶಿಷ್ಯ ಬಳಗ ಮೌನಕ್ಕೆ ಶರಣಾಯಿತು.<br /><br /><strong>ಮೆರವಣಿಗೆ ಓಣಿಗೆ ತರಲು ಮನವಿ:</strong><br />ಪೂಜ್ಯರ ಪ್ರಾರ್ಥಿವ ಶರೀರವನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ನೆರವೇರಿಸಲು ನಿರ್ಧರಿಸಲಾಗಿದೆ. ಇದು ಶ್ರೀಗಳ ಕೊನೆಯ ಯಾತ್ರೆ, ಹಾಗಾಗಿ, ತಮ್ಮ ಓಣಿಗೂ ಕರೆತರಬೇಕು ಎಂದು ಊರಿನ ಎಲ್ಲ ಜನ ಕೈಮುಗಿದು ಪ್ರಾರ್ಥಿಸುತ್ತಿರುವುದು ಸಾಮಾನ್ಯವಾಗಿದೆ.</p>.<p>ಭಕ್ತರ ಸಂಘಟನೆಗಳು ರಾತ್ರಿಯಿಂದಲೇ ಭಜನೆಯಲ್ಲಿ ತೊಡಗಿವೆ. ಬಸವೇಶ್ವರ ಮಹಾರಾಜ್ ಕಿ ಜೈ, ಬಸವಸಿದ್ಧಲಿಂಗ ಮಹಾರಾಜ್ ಕಿ ಜೈ ಘೋಷಣೆ ಮೊಳಗುತ್ತಿವೆ.</p>.<p>ಗದಗ ಡಂಬಳದ ಡಾ.ಸಿದ್ಧರಾಮ ಸ್ವಾಮೀಜಿ, ಬೈಲೂರಿನ ನಿಜಗುಣಾನಂದ ಸ್ವಾಮೀಜಿ, ಉಳವಿ ಬಸವಪೀಠದ ಬಸವಪ್ರಕಾಶ ಸ್ವಾಮೀಜಿ, ದಾವಣಗೆರೆ ಸ್ವಾಮೀಜಿ, ಹೊಸೂರು ಗಂಗಾಧರ ಸ್ವಾಮೀಜಿ ಸೇರಿದಂತೆ ಸುತ್ತಮುತ್ತಲಿನ ಹಲವಾರು ಪೂಜ್ಯರು, ಶಾಸಕ ಮಹಾಂತೇಶ ದೊಡ್ಡಗೌಡರ, ಮಾಜಿ ಶಾಸಕ ಡಿ.ಬಿ.ಇನಾಮದಾರ ಅಂತಿಮ ದರ್ಶನ ಪಡೆದುಕೊಂಡರು.</p>.<p>ಮುಖಂಡರಾದ ಬಾಬಾಸಾಹೇಬ ಪಾಟೀಲ, ರೋಹಿಣಿ ಪಾಟೀಲ, ಲಿಂಗಾಯತ ಬಸವ ಸೇನೆ ಅಧ್ಯಕ್ಷ ಶಂಕರ ಗುಡಸ, ವಿಕ್ರಂ ಇನಾಮದಾರ, ಅಡಿಷನಲ್ ಎಸ್ಪಿ ನಂದಗಾವಿ, ಡಿವೈಎಸ್ಪಿ ಶಿವಾನಂದ ಕಟಗಿ, ರಾಮನಗೌಡ ಹಟ್ಟಿ ಅವರು ಮಠದ ಆವರಣದಲ್ಲೇ ಬೀಡು ಬಿಟ್ಟಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>