ಇಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ನಾನು ರಮೇಶ ಜೊತೆ ಮುಂಬೈಗೆ ಹೋಗಿಲ್ಲ. ಬೆಂಗಳೂರಲ್ಲಿದ್ದೆ. ಬೆಳಿಗ್ಗೆ ಇಲ್ಲಿಗೆ ಬಂದಿದ್ದೇನೆ. ರಾಜೀನಾಮೆ ಕೊಡುವುದಾಗಿ ಅವರು ನನ್ನೊಂದಿಗೆ ಅಥವಾ ಮಾಧ್ಯಮದ ಮುಂದೆಯೂ ಹೇಳಿಲ್ಲ. ಊಹಾಪೋಹಗಳು ಹರಿದಾಡುತ್ತಿರುವುದನ್ನು ನಾನೂ ಮಾಧ್ಯಮದಲ್ಲಿ ಗಮನಿಸಿದೆ’ ಎಂದು ಪ್ರತಿಕ್ರಿಯಿಸಿದರು.