ಆರೋಪಿ ದಿಲೀಪ್ಗೆ ಸಂತೋಷ ₹ 1,000 ಕೊಡಬೇಕಾಗಿತ್ತು. ಪದೇಪದೇ ಕೇಳಿದರೂ ಹಣ ಕೊಡದ ಕಾರಣ ಶುಕ್ರವಾರ ಇಬ್ಬರ ಮಧ್ಯೆ ಜಗಳ ಶುರುವಾಗಿತ್ತು. ಆಗ ದಿಲೀಪ ತನ್ನ ಬೇಜಿನಲ್ಲಿದ್ದ ಬ್ಲೇಡ್ ತೆಗೆದು ಸಂತೋಷ ಅವರ ಕುತ್ತಿಗೆ ಭಾಗದಲ್ಲಿ ಕೊಯ್ದ. ಸಂತೋಷ ಚೀರಾಟ ಕೇಳಿ ಅವರ ಕಿರಿಯ ಸಹೋದರ ಲಕ್ಷ್ಮಣ ನೆರವಿಗೆ ಓಡಿಬಂದರು. ಆಗ ಆರೋಪಿ ಲಕ್ಷ್ಮಣ ಮೇಲೂ ಬ್ಲೇಡ್ನಿಂದ ಹಲ್ಲೆ ಮಾಡಿದ ಎಂದು ತಿಳಿಸಲಾಗಿದೆ.