ಎಂ.ಕೆ.ಹುಬ್ಬಳ್ಳಿ: ಇಲ್ಲಿನ ಮಲಪ್ರಭಾ ನದಿಯಲ್ಲಿ ಮೀನು ಹಿಡಿಯುವ ವೇಳೆ ಕಾಲಿಗೆ ಮೀನಿನ ಬಲೆ ಸಿಲುಕಿ ಆಯತಪ್ಪಿ ನದಿಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಶುಕ್ರವಾರ ನಡೆದಿದೆ. ಮಲಪ್ರಭಾ ನದಿಯ ರಾ.ಹೆ-4ರ ಸೇತುವೆ ಕೆಳಗೆ ಈ ಘಟನೆ ನಡೆದಿದ್ದು, ದಾಸ್ತಿಕೊಪ್ಪ ಗ್ರಾಮದ ಶೌಕತ ಅಲಿ ಇಮಾಮಸಾಬ ಮುಲ್ಲಾ (55) ಮೃತಪಟ್ಟಿದ್ದಾರೆ.