ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮದುರ್ಗ: ಶಾಸಕ ಯಾದವಾಡರಿಗೆ ತೀವ್ರ ತರಾಟೆ

ಕಳೆದ ಬಾರಿಯ ನೆರೆ ಪರುಹಾರವೇ ಬಂದಿಲ್ಲವೆಂದು ಆಕ್ರೋಶ
Last Updated 25 ಜುಲೈ 2021, 3:17 IST
ಅಕ್ಷರ ಗಾತ್ರ

ರಾಮದುರ್ಗ: ಪ್ರವಾಹದಿಂದ ರಕ್ಷಣೆ ಪಡೆಯಲು ಎತ್ತರದ ಸ್ಥಳಗಳಿಗೆ ಹೋಗುವಂತೆ ಜಾಗೃತಿ ಮೂಡಿಸಲು ತೆರಳಿದ್ದ ಶಾಸಕ ಮಹಾದೇವಪ್ಪ ಯಾದವಾಡ ಅವರನ್ನು ಕಿಲಬನೂರಿನ ಜನ ಶನಿವಾರ ತೀವ್ರ ತರಾಟೆಗೆ ತೆಗೆದುಕೊಂಡರು.

ನವೀಲು ತೀರ್ಥ ಅಣೆಕಟ್ಟೆಯಿಂದ ಬಿಡುಗಡೆಯಾದ ನೀರಿನಿಂದ ಜಲಾವೃತಗೊಂಡ ಮನೆ, ಜಮೀನು ವೀಕ್ಷಣೆಗೆ ಹೋದಾಗ ಮಹಿಳೆಯರ ತಂಡವೊಂದು ಕಳೆದ ಬಾರಿಯ ನೆರೆ ಪರಿಹಾರ ತಲುಪಿಲ್ಲ ಎಂದು ದೂರಿದರು.

ದಿನಾಲೂ ದುಡಿದು ಬದುಕುವ ನಮಗೆ ಶಾಶ್ವತ ಪರಿಹಾರ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.

‘ಕಳೆದ ಪ್ರವಾಹದಲ್ಲಿ ಮನೆಗಳನ್ನು ಕಳೆದುಕೊಂಡವರಿಗೆ ₹ 5 ಲಕ್ಷ ಮಂಜೂರಾಗಿ ಮನೆಗಳನ್ನು ನಿರ್ಮಿಸಿಕೊಡಲಾಗಿದೆ. ಕೆಲ ಮನೆಗಳ ಸಮೀಕ್ಷೆ ನಡೆಸಿ ಜಿಪಿಎಸ್‌ ಸಹ ಮಾಡಿಸಲಾಗಿದೆ. 6–7 ಎಕರೆ ಜಮೀನು ಸಿಕ್ಕರೆ ಕಿಲಬನೂರು ಪ್ರದೇಶವನ್ನು ಸ್ಥಳಾಂತರಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT