ರಾಮದುರ್ಗ: ಪ್ರವಾಹದಿಂದ ರಕ್ಷಣೆ ಪಡೆಯಲು ಎತ್ತರದ ಸ್ಥಳಗಳಿಗೆ ಹೋಗುವಂತೆ ಜಾಗೃತಿ ಮೂಡಿಸಲು ತೆರಳಿದ್ದ ಶಾಸಕ ಮಹಾದೇವಪ್ಪ ಯಾದವಾಡ ಅವರನ್ನು ಕಿಲಬನೂರಿನ ಜನ ಶನಿವಾರ ತೀವ್ರ ತರಾಟೆಗೆ ತೆಗೆದುಕೊಂಡರು.
ನವೀಲು ತೀರ್ಥ ಅಣೆಕಟ್ಟೆಯಿಂದ ಬಿಡುಗಡೆಯಾದ ನೀರಿನಿಂದ ಜಲಾವೃತಗೊಂಡ ಮನೆ, ಜಮೀನು ವೀಕ್ಷಣೆಗೆ ಹೋದಾಗ ಮಹಿಳೆಯರ ತಂಡವೊಂದು ಕಳೆದ ಬಾರಿಯ ನೆರೆ ಪರಿಹಾರ ತಲುಪಿಲ್ಲ ಎಂದು ದೂರಿದರು.
ದಿನಾಲೂ ದುಡಿದು ಬದುಕುವ ನಮಗೆ ಶಾಶ್ವತ ಪರಿಹಾರ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.
‘ಕಳೆದ ಪ್ರವಾಹದಲ್ಲಿ ಮನೆಗಳನ್ನು ಕಳೆದುಕೊಂಡವರಿಗೆ ₹ 5 ಲಕ್ಷ ಮಂಜೂರಾಗಿ ಮನೆಗಳನ್ನು ನಿರ್ಮಿಸಿಕೊಡಲಾಗಿದೆ. ಕೆಲ ಮನೆಗಳ ಸಮೀಕ್ಷೆ ನಡೆಸಿ ಜಿಪಿಎಸ್ ಸಹ ಮಾಡಿಸಲಾಗಿದೆ. 6–7 ಎಕರೆ ಜಮೀನು ಸಿಕ್ಕರೆ ಕಿಲಬನೂರು ಪ್ರದೇಶವನ್ನು ಸ್ಥಳಾಂತರಿಸಲಾಗುವುದು ಎಂದರು.