15ನೇ ಶತಮಾನದಲ್ಲಿ ಮಹಾರಾಷ್ಟ್ರದ ಟಾಕಳಿಯಲ್ಲಿ ತಪಸ್ವಿಗಳಾದ ಸಹಜಬೋಧ ಸ್ವಾಮೀಜಿ ಆಜ್ಞೆಯಂತೆ ಸಂಚರಿಸುತ್ತ, ಶ್ರೀರಂಗಬೋಧರು ಮೊದಲು ಆಗಮಿಸಿದ್ದು ರೇವಣಸಿದ್ಧರು ನೆಲೆಸಿದ ಗವಿಮಠಕ್ಕೆ. ‘ನೆನೆದಾಗ ಬರುವೆ’ ಎಂದು ಸಹಜಬೋಧರಿಂದ ವರ ಪಡೆದಿದ್ದ ಶ್ರೀರಂಗಬೋಧರಿಗೆ ರೇವಣಸಿದ್ಧರ ರೂಪದಲ್ಲಿ ಸಹಜಬೋಧರು ಕಾಣಿಸಿದರು. ಈಗಿನ ಕೆಳಗಿನ ಮಠದಲ್ಲಿ ನೆಲೆಸುವಂತೆ ಶ್ರೀರಂಗಬೋಧರಿಗೆ ರೇವಣಸಿದ್ಧರು ಆಜ್ಞಾಪಿಸಿದರು. ಹಾಗಾಗಿ ಇಲ್ಲಿನ ಶಿವಬೋಧರಂಗ ಮಠದ ಇತಿಹಾಸ, ಮೂಡಲಗಿಯ ಆಧ್ಯಾತ್ಮಿಕ, ಧಾರ್ಮಿಕ ಪರಂಪರೆಯಲ್ಲಿ ರೇವಣಸಿದ್ಧರು ಪ್ರಮುಖರು ಎನಿಸುತ್ತಾರೆ.