‘ಸತತ ಮಳೆಯಿಂದ ಮುಳುಗಡೆ ಆಗಿದ್ದ ಸೇತುವೆ ಮೇಲೆ ವಾಹನಗಳ ಸಂಚಾರ ನಿರ್ಬಂಧಿಸಲಾಗಿತ್ತು. ಆದರೂ ಭಾನುವಾರ ಬೆಳಿಗ್ಗೆ ಸೇತುವೆ ದಾಟುವಾಗ, ಟ್ರ್ಯಾಕ್ಟರ್ ಮಗುಚಿ ಬಿತ್ತು. 10 ಪೈಕಿ 9 ಮಂದಿ ಈಜಿ ದಡ ಸೇರಿದರು. ಆದರೆ, ಇನ್ನೊಬ್ಬ ಮಾತ್ರ ಪತ್ತೆಯಾಗಲಿಲ್ಲ. ಮಂಗಳವಾರವೂ ಶೋಧ ಕಾರ್ಯ ಮುಂದುವರೆಸುತ್ತೇವೆ’ ಎಂದು ಮೂಡಲಗಿಯ ಪ್ರಭಾರ ತಹಶೀಲ್ದಾರ್ ಮೋಹನ ಭಸ್ಮೆ ‘ಪ್ರಜಾವಾಣಿ’ಗೆ ತಿಳಿಸಿದರು.