<p><strong>ಮೂಡಲಗಿ: </strong>‘ಉತ್ತರ ಕರ್ನಾಟಕದ ಭಾಷೆ ಬಲು ಚಂದ ಐತ್ರೀ’ ಎಂದು ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಖುಷಿ ಹಂಚಿಕೊಂಡಿದ್ದ ಪ್ರಸಂಗವನ್ನು ತಾಲ್ಲೂಕಿನ ಮುನ್ಯಾಳ ಗ್ರಾಮದ ಗಾಯಕ ಬಸವರಾಜ ಮುಗಳಖೋಡ ನೆನೆದರು.</p>.<p>‘2016ರಲ್ಲಿ ಈ ಟಿವಿಯಲ್ಲಿ ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮದಲ್ಲಿ ಆಮಂತ್ರಿತನಾಗಿ ಅವರೊಂದಿಗೆ 2 ಗಂಟೆ ಇರುವ ಅವಕಾಶ ದೊರಕಿತ್ತು. ಅವರು ಶ್ರೇಷ್ಠ ಗಾಯಕ ಎನ್ನುವುದಕ್ಕಿಂತ ಮಾನವೀಯ ಸಂಬಂಧಗಳ ಸೂಕ್ಷ್ಮತೆಗಳನ್ನು ಗಮನಿಸುವಂತಹ ಭಾವಜೀವಿಯಾಗಿದ್ದರು’ ಎಂದರು.</p>.<p>‘ನಾನು ಇವನಾರವ ಇವನಾರವ ಎಂದಿನಿಸದಿರಯ್ಯ, ಇವ ನಮ್ಮವ ನಮ್ಮವ’ ಎಂಬ ಬಸವಣ್ಣವರ ವಚನವನ್ನು ಹಾಡಿದ್ದೆ. ಕೂಡಲೇ ಅವರು ‘ನೀವೂ ನಮ್ಮವ’ ಎಂದು ಅಪ್ಪಿಕೊಂಡಿದ್ದರು. ಆ ಕ್ಷಣ ಮೆರೆಯಲಾಗದು’ ಎಂದು ಭಾವುಕರಾಗಿ ಹೇಳಿದರು.</p>.<p>ಇಲ್ಲಿನ ಜಾನಪದ ಗಾಯಕ ಶಬ್ಬೀರ ಡಾಂ ಸಹ ಬಾಲಸುಬ್ರಹ್ಮಣ್ಯಂ ಅವರೊಂದಿಗೆ ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮದಲ್ಲಿ 2013ರಲ್ಲಿ ಪಾಲ್ಗೊಂಡಿದ್ದನ್ನು ಮೆಲುಕು ಹಾಕಿದರು.</p>.<p>‘ಎದ್ದು ನಿಂತು ಹೂ ನೀಡಿ ನನ್ನನ್ನು ಸ್ವಾಗತಿಸಿದ್ದರು. ಸಣ್ಣವರು, ದೊಡ್ಡವರು ಎನ್ನುವುದನ್ನು ಅವರು ಪರಿಗಣಿಸುತ್ತಿರಲಿಲ್ಲ. ಗಾಯನದಲ್ಲಿ ಬರುವ ಅವಕಾಶಗಳನ್ನು ತಪ್ಪಿಸಿಕೊಳ್ಳಬಾರದು’ ಎಂದು ಕವಿಮಾತು ಹೇಳಿದ್ದರು ಎಂದು ಹಂಚಿಕೊಂಡರು.</p>.<p>‘ನಾನು 300 ಕ್ಯಾಸೆಟ್ಗಳಿಗೆ ಹಾಡಿದ್ದೇನೆ ಎಂದಾಗ ಎಸ್ಪಿಬಿ ಅವರು ನನ್ನ ಬೆನ್ನು ತಟ್ಟಿ ಖುಷಿಪಟ್ಟ ಕ್ಷಣ ಮರೆಯಲಾರೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೂಡಲಗಿ: </strong>‘ಉತ್ತರ ಕರ್ನಾಟಕದ ಭಾಷೆ ಬಲು ಚಂದ ಐತ್ರೀ’ ಎಂದು ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಖುಷಿ ಹಂಚಿಕೊಂಡಿದ್ದ ಪ್ರಸಂಗವನ್ನು ತಾಲ್ಲೂಕಿನ ಮುನ್ಯಾಳ ಗ್ರಾಮದ ಗಾಯಕ ಬಸವರಾಜ ಮುಗಳಖೋಡ ನೆನೆದರು.</p>.<p>‘2016ರಲ್ಲಿ ಈ ಟಿವಿಯಲ್ಲಿ ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮದಲ್ಲಿ ಆಮಂತ್ರಿತನಾಗಿ ಅವರೊಂದಿಗೆ 2 ಗಂಟೆ ಇರುವ ಅವಕಾಶ ದೊರಕಿತ್ತು. ಅವರು ಶ್ರೇಷ್ಠ ಗಾಯಕ ಎನ್ನುವುದಕ್ಕಿಂತ ಮಾನವೀಯ ಸಂಬಂಧಗಳ ಸೂಕ್ಷ್ಮತೆಗಳನ್ನು ಗಮನಿಸುವಂತಹ ಭಾವಜೀವಿಯಾಗಿದ್ದರು’ ಎಂದರು.</p>.<p>‘ನಾನು ಇವನಾರವ ಇವನಾರವ ಎಂದಿನಿಸದಿರಯ್ಯ, ಇವ ನಮ್ಮವ ನಮ್ಮವ’ ಎಂಬ ಬಸವಣ್ಣವರ ವಚನವನ್ನು ಹಾಡಿದ್ದೆ. ಕೂಡಲೇ ಅವರು ‘ನೀವೂ ನಮ್ಮವ’ ಎಂದು ಅಪ್ಪಿಕೊಂಡಿದ್ದರು. ಆ ಕ್ಷಣ ಮೆರೆಯಲಾಗದು’ ಎಂದು ಭಾವುಕರಾಗಿ ಹೇಳಿದರು.</p>.<p>ಇಲ್ಲಿನ ಜಾನಪದ ಗಾಯಕ ಶಬ್ಬೀರ ಡಾಂ ಸಹ ಬಾಲಸುಬ್ರಹ್ಮಣ್ಯಂ ಅವರೊಂದಿಗೆ ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮದಲ್ಲಿ 2013ರಲ್ಲಿ ಪಾಲ್ಗೊಂಡಿದ್ದನ್ನು ಮೆಲುಕು ಹಾಕಿದರು.</p>.<p>‘ಎದ್ದು ನಿಂತು ಹೂ ನೀಡಿ ನನ್ನನ್ನು ಸ್ವಾಗತಿಸಿದ್ದರು. ಸಣ್ಣವರು, ದೊಡ್ಡವರು ಎನ್ನುವುದನ್ನು ಅವರು ಪರಿಗಣಿಸುತ್ತಿರಲಿಲ್ಲ. ಗಾಯನದಲ್ಲಿ ಬರುವ ಅವಕಾಶಗಳನ್ನು ತಪ್ಪಿಸಿಕೊಳ್ಳಬಾರದು’ ಎಂದು ಕವಿಮಾತು ಹೇಳಿದ್ದರು ಎಂದು ಹಂಚಿಕೊಂಡರು.</p>.<p>‘ನಾನು 300 ಕ್ಯಾಸೆಟ್ಗಳಿಗೆ ಹಾಡಿದ್ದೇನೆ ಎಂದಾಗ ಎಸ್ಪಿಬಿ ಅವರು ನನ್ನ ಬೆನ್ನು ತಟ್ಟಿ ಖುಷಿಪಟ್ಟ ಕ್ಷಣ ಮರೆಯಲಾರೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>