<p><strong>ಬೆಳಗಾವಿ</strong>: ‘ಸಂಗೀತದ ಮೂಲಕ ಪರಶಿವನೊಲುಮೆ ಸುಲಭ ಸಾಧ್ಯ’ ಎಂದು ಭಾರತೀಯ ಗಾಯನ ಸಮಾಜದ ಅಧ್ಯಕ್ಷೆ, ವಿದುಷಿ ಡಾ.ರೋಹಿಣಿ ಅಭಿಪ್ರಾಯ ವ್ಯಕ್ತಪಡಿಸಿದರು.</p>.<p>ಇಲ್ಲಿನ ಶಿವಬಸವ ನಗರದ ಭಾರತೀಯ ಗಾಯನ ಸಮಾಜದ ಸಭಾಂಗಣದಲ್ಲಿ ತಮ್ಮ ಶಿಷ್ಯ ವೃಂದವು ಈಚೆಗೆ ಮಹಾಶಿವರಾತ್ರಿ ನಿಮಿತ್ತ ಸಾದರಪಡಿಸಿದ ‘ಶಿವತತ್ವ ಪ್ರಸ್ತುತಿ’ (ನಾದಮಂತ್ರ ಶಿವೋಪಾಸನೆ) ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.</p>.<p>‘ಭಾರತೀಯರಿಗೆ ಶಿವನೇ ಪರಮೋಚ್ಛ ದೈವ. ಎಲ್ಲ ದೇವರುಗಳೂ ಈಶ್ವರನ ಸಗುಣಶಕ್ತಿಗಳಾಗಿವೆ. ಚೈತನ್ಯಾತ್ಮಕನಾದ ಪರಶಿವನ ಸಾತ್ವಿಕ ಗುಣ ಭಾರತೀಯರಲ್ಲಿದೆ. ಓಂಕಾರ ನಾದವು ಇಂದಿನ ಪ್ರಕ್ಷಬ್ದ ವಾತಾವರಣದಲ್ಲಿ ಮನುಷ್ಯರಲ್ಲಿ ಚೈತನ್ಯ ತುಂಬುತ್ತದೆ. ಈ ನಿಟ್ಟಿನಲ್ಲಿ ಇಂದಿನ ಮಕ್ಕಳಿಗೆ ಭಕ್ತಿ ಸಂಗೀತದ ಸಂಸ್ಕಾರ ನೀಡುವ ಅಗತ್ಯವಿದೆ’ ಎಂದರು.</p>.<p>ಮೂರು ವರ್ಷದ ಗಾಯಕಿ ಶ್ರೇಷ್ಠಾ ಕುರೇರ ಉದ್ಘಾಟಿಸಿದರು. ದಾಕ್ಷಾಯಿಣಿ ಹೂಗಾರ ಹಾಗೂ ಸಾವಿತ್ರಿ ಜಡಿಮಠ ಮುಖ್ಯಅತಿಥಿಗಳಾಗಿ ಪಾಲ್ಗೊಂಡಿದ್ದರು. 36 ಮಂದಿ ಕಾರ್ಯಕ್ರಮ ನಡೆಸಿಕೊಟ್ಟರು. ಉಪನಿಷತ್ತು, ಭಾರತೀಯ ಭಾಷೆಗಳ ಶಿವ ಭಜನೆಗಳು ಹಾಗೂ ವಚನಗಳನ್ನು ಪ್ರಸ್ತುತಪಡಿಸಿದರು.</p>.<p>ಸತೀಶ ಗಚ್ಚಿ ತಬಲಾ ಸಾಥ್ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ</strong>: ‘ಸಂಗೀತದ ಮೂಲಕ ಪರಶಿವನೊಲುಮೆ ಸುಲಭ ಸಾಧ್ಯ’ ಎಂದು ಭಾರತೀಯ ಗಾಯನ ಸಮಾಜದ ಅಧ್ಯಕ್ಷೆ, ವಿದುಷಿ ಡಾ.ರೋಹಿಣಿ ಅಭಿಪ್ರಾಯ ವ್ಯಕ್ತಪಡಿಸಿದರು.</p>.<p>ಇಲ್ಲಿನ ಶಿವಬಸವ ನಗರದ ಭಾರತೀಯ ಗಾಯನ ಸಮಾಜದ ಸಭಾಂಗಣದಲ್ಲಿ ತಮ್ಮ ಶಿಷ್ಯ ವೃಂದವು ಈಚೆಗೆ ಮಹಾಶಿವರಾತ್ರಿ ನಿಮಿತ್ತ ಸಾದರಪಡಿಸಿದ ‘ಶಿವತತ್ವ ಪ್ರಸ್ತುತಿ’ (ನಾದಮಂತ್ರ ಶಿವೋಪಾಸನೆ) ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.</p>.<p>‘ಭಾರತೀಯರಿಗೆ ಶಿವನೇ ಪರಮೋಚ್ಛ ದೈವ. ಎಲ್ಲ ದೇವರುಗಳೂ ಈಶ್ವರನ ಸಗುಣಶಕ್ತಿಗಳಾಗಿವೆ. ಚೈತನ್ಯಾತ್ಮಕನಾದ ಪರಶಿವನ ಸಾತ್ವಿಕ ಗುಣ ಭಾರತೀಯರಲ್ಲಿದೆ. ಓಂಕಾರ ನಾದವು ಇಂದಿನ ಪ್ರಕ್ಷಬ್ದ ವಾತಾವರಣದಲ್ಲಿ ಮನುಷ್ಯರಲ್ಲಿ ಚೈತನ್ಯ ತುಂಬುತ್ತದೆ. ಈ ನಿಟ್ಟಿನಲ್ಲಿ ಇಂದಿನ ಮಕ್ಕಳಿಗೆ ಭಕ್ತಿ ಸಂಗೀತದ ಸಂಸ್ಕಾರ ನೀಡುವ ಅಗತ್ಯವಿದೆ’ ಎಂದರು.</p>.<p>ಮೂರು ವರ್ಷದ ಗಾಯಕಿ ಶ್ರೇಷ್ಠಾ ಕುರೇರ ಉದ್ಘಾಟಿಸಿದರು. ದಾಕ್ಷಾಯಿಣಿ ಹೂಗಾರ ಹಾಗೂ ಸಾವಿತ್ರಿ ಜಡಿಮಠ ಮುಖ್ಯಅತಿಥಿಗಳಾಗಿ ಪಾಲ್ಗೊಂಡಿದ್ದರು. 36 ಮಂದಿ ಕಾರ್ಯಕ್ರಮ ನಡೆಸಿಕೊಟ್ಟರು. ಉಪನಿಷತ್ತು, ಭಾರತೀಯ ಭಾಷೆಗಳ ಶಿವ ಭಜನೆಗಳು ಹಾಗೂ ವಚನಗಳನ್ನು ಪ್ರಸ್ತುತಪಡಿಸಿದರು.</p>.<p>ಸತೀಶ ಗಚ್ಚಿ ತಬಲಾ ಸಾಥ್ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>