ಬೆಳಗಾವಿ: ‘ಜೆಡಿಎಸ್ ತೊರೆದು ಹಲವರು ಕಾಂಗ್ರೆಸ್ ಸೇರುವರೆಂದು 6 ತಿಂಗಳಿನಿಂದ ಹೇಳಲಾಗುತ್ತಿದೆ. ಆದರೆ, ಜೆಡಿಎಸ್ ಗಟ್ಟಿಯಾಗಿದ್ದು ಯಾರೂ ಕೂಡ ಪಕ್ಷ ತೊರೆಯಲ್ಲ. ಕಾಂಗ್ರೆಸ್ಗೆ ಭ್ರಮನಿರಸನವಾಗಲಿದೆ’ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ತಿಳಿಸಿದರು.
‘ಪ್ರಧಾನಿಯಾಗಿ ನರೇಂದ್ರ ಮೋದಿ ಮೂರನೇ ಅವಧಿಗೆ ಮುಂದುವರಿಯಬೇಕು. ಕರ್ನಾಟಕದಲ್ಲಿ ಜೆಡಿಎಸ್ ಇನ್ನಷ್ಟು ಬಲಿಷ್ಠಗೊಂಡು, ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಲೆಂದು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದೇವೆ’ ಎಂದು ಎಂದು ಅವರು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.
‘ಭೀಕರ ಬರದಿಂದ ರಾಜ್ಯದಲ್ಲಿ ಸುಮಾರು ₹4,800 ಕೋಟಿಯಷ್ಟು ಹಾನಿಯಾಗಿದೆ. ಆದರೆ, ಈವರೆಗೆ ರಾಜ್ಯ ಸರ್ಕಾರ ಒಂದು ರೂಪಾಯಿ ಪರಿಹಾರವನ್ನೂ ಬಿಡುಗಡೆಗೊಳಿಸಿಲ್ಲ. ಎಲ್ಲದಕ್ಕೂ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುತ್ತ ಕುಳಿತಿದೆ’ ಎಂದು ಟೀಕಿಸಿದರು.