‘ಒಡಿಸ್ಸಾದ ಕಂದಮಾಲ ಜಿಲ್ಲೆಯ ತಿಲಬಂಗಿ ಗ್ರಾಮದ ಅನುಕೂಲಚಂದ್ರ ಮಹೇಂದ್ರ ಕಲ್ಹಾರ (22) ಬಂಧಿತರು. ಅವರು ಮಹಾಂತೇಶ ನಗರ ಬಳಿ ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿಸುವಾಗ ಸಿಕ್ಕಿಬಿದ್ದಿದ್ದಾರೆ. ಅವರಿಂದ ₹ 50ಸಾವಿರ ಮೌಲ್ಯದ 2 ಕೆ.ಜಿ. 60 ಗ್ರಾಂ. ಒಣ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ’ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.