‘ರಾಜಕಾರಣಿಗಳಿಗೆ ಕನ್ನಡ, ಮರಾಠಿ ಸೇರಿದಂತೆ ವಿವಿಧ ಭಾಷಿಕರನ್ನು ಸೆಳೆದುಕೊಳ್ಳುವುದು ಅನಿವಾರ್ಯವಾಗಿರಬಹುದು. ಆದರೆ, ಕರ್ನಾಟಕದಲ್ಲಿ ಇದ್ದಾಗ ಮೊದಲ ಸ್ಥಾನವನ್ನು ಕನ್ನಡದಲ್ಲಿ ನೀಡಬೇಕು. ಬ್ಯಾನರ್ ಇರಲಿ, ಜಾಹೀರಾತು ಫಲಕವಿರಲಿ ಮೊದಲ ಸಾಲಿನಲ್ಲಿ ಕನ್ನಡ ಬರೆಯಬೇಕು’ ಎಂದು ಕರ್ನಾಟಕ ರಕ್ಷಣಾ ವೇದಿಕೆ ಬೆಳಗಾವಿ ಘಟಕದ ಅಧ್ಯಕ್ಷ ಮಹಾದೇವ ತಳವಾರ ಅಸಮಾಧಾನ ವ್ಯಕ್ತಪಡಿಸಿದರು.