ಕರವೇ ಯುವ ಘಟಕದ ಜಿಲ್ಲಾ ಘಟಕದ ಅಧ್ಯಕ್ಷ ದೀಪಕ ಗುಡಗನಟ್ಟಿ ಮಾತನಾಡಿ, ‘ಸರ್ಕಾರವು ಕನ್ನಡದ ನೆಲ, ಜಲ, ಭಾಷೆ, ಸಂಸ್ಕೃತಿ ರಕ್ಷಣೆ ವಿಷಯದಲ್ಲಿ ರಾಜಿಯಾಗದೇ ಕನ್ನಡದ ಹಿತ ಕಾಯಬೇಕು. ಯಾವುದೇ ಮುಲಾಜಿಲ್ಲದೇ ಎಂಇಎಸ್ ವಿರುದ್ಧ ಕ್ರಮ ಕೈಗೊಳ್ಳಬೇಕು. ಕನ್ನಡಿಗರು ಹಬ್ಬ ಆಚರಿಸುವಾಗ, ನಾಡದ್ರೋಹ ಚಟುವಟಿಕೆ ಕೈಗೊಳ್ಳುವವರ ಕರಾಳ ದಿನಾಚರಣೆಗೆ ಅವಕಾಶ ಕೊಡಬಾರದು’ ಎಂದು ಒತ್ತಾಯಿಸಿದರು.