‘ಆರೋಪಿತನಿಂದ ರಿವಾಲ್ವಾರ್ ಹಾಗೂ ಅದರ ಪರವಾನಗಿ ಜಪ್ತಿ ಮಾಡಲಾಗಿದೆ. ಆಯುಧ ಪರವಾನಗಿ ರದ್ದುಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಪರವಾನಗಿ ಪಡೆದು ಆಯುಧಗಳನ್ನು ಹೊಂದಿರುವವರು, ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಆಯಾ ಪೊಲೀಸ್ ಠಾಣೆಯಲ್ಲಿ ಠೇವಣಿ ಇಡಬೇಕು. ಹೊರಗಿನಿಂದ ಬರುವವರು, ಚುನಾವಣೆ ನೀತಿಸಂಹಿತೆ ಜಾರಿಯಲ್ಲಿರುವುದರಿಂದ ಆಯುಧಗಳನ್ನು ಇಟ್ಟುಕೊಂಡು ಸಂಚರಿಸಬಾರದು ಎಂದು ಸೂಚಿಸಿದ್ದಾರೆ.