ನಂತರ ಮಾತನಾಡಿದ ಅವರು, ‘ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಕುಷ್ಠ ರೋಗಿಗಳ ಸಹಾಯಕ್ಕೆ ಜನರು ನಿಲ್ಲಬೇಕು. 2017ರಲ್ಲಿ 2,78,619 ಜನ ಕುಷ್ಠ ರೋಗದಿಂದ ಬಳಲುತ್ತಿದ್ದರೆ, ಕಳೆದ ಸಾಲಿನಲ್ಲಿ 1.28 ಲಕ್ಷ ಜನರು ಕಂಡುಬಂದಿದ್ದಾರೆ. ಇದನ್ನು ಸಂಪೂರ್ಣವಾಗಿ ತಡೆಗಟ್ಟಬೇಕು. ಆ ಕಾಯಿಲೆಯ ಬಗೆಗಿನ ಮೂಢನಂಬಿಕೆ ತೊಲಗಬೇಕು’ ಎಂದು ಹೇಳಿದರು.