ಇಲ್ಲಿನ ಬೆಮುಲ್ನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ರಾಜ್ಯದ ಹೆಮ್ಮೆಯ ನಟರಾಗಿದ್ದ ಅವರಿಗೆ ವೈಯಕ್ತಿಕವಾಗಿ, ಕರ್ನಾಟಕದ ಹಾಲು ಮಹಾಮಂಡಳ ಹಾಗೂ 14 ಜಿಲ್ಲಾ ಸಹಕಾರ ಹಾಲು ಒಕ್ಕೂಟದ ಪರವಾಗಿ ಶ್ರದ್ಧಾಂಜಲಿ ಸಲ್ಲಿಸುತ್ತೇವೆ. ಅವರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲೆಂದು ಪ್ರಾರ್ಥಿಸುತ್ತೇನೆ. ಕೆಎಂಎಫ್ ಬೆಳೆಯಲು ವರನಟ ರಾಜಕುಮಾರ್ ಕುಟುಂಬದ ಪಾತ್ರ ದೊಡ್ಡದಿದೆ’ ಎಂದು ನೆನೆದರು.