‘ಹೋದ ವರ್ಷ ಉಂಟಾದ ನೆರೆಯಿಂದ ಸಂಕಷ್ಟಕ್ಕೆ ಒಳಗಾದವರಿಗೆ ಸರಿಯಾಗಿ ಪರಿಹಾರ ಸಿಕ್ಕಿಲ್ಲ. ಮನೆ ಹಾನಿ ಬಗ್ಗೆ ಸಮೀಕ್ಷೆ ಮೇಲೆ ಸಮೀಕ್ಷೆ ನಡೆದಿದೆ. ಆದರೆ, ಬಹಳ ಮಂದಿಗೆ ಹಣ ಬಂದಿಲ್ಲ. ಬೆಳೆ ಹಾನಿ ಪರಿಹಾರದ ಕತೆಯೂ ಹಾಗೆಯೇ ಆಗಿದೆ. ರಸ್ತೆಗಳು ಹಾಳಾಗಿವೆ. ಇದನ್ನು ಕೇಂದ್ರ ತಂಡದ ಎದುರು ಹೇಳಲು ಮುಂದಾದೆವು. ಆದರೆ ಅವರು ಅಳಲು ಆಲಿಸಲು ಸಿದ್ಧವಿರಲಿಲ್ಲ. ಇದು ಖಂಡನೀಯ’ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಗೋವಿಂದ ಕೊಪ್ಪದ ಮಾಧ್ಯಮ ಪ್ರತಿನಿಧಿಗಳ ಎದುರು ಆಕ್ರೋಶ ವ್ಯಕ್ತಪಡಿಸಿದರು.