ಬೆಳಗಾವಿ: ಇಲ್ಲಿನ ಧಾಮನೆ ರಸ್ತೆಯ ನಿಜಾಮಿಯಾ ನಗರದ ಟಿಪ್ಪು ಸುಲ್ತಾನ್ ಕಾಲೊನಿಯ ಮನೆಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ‘ಅನ್ನಭಾಗ್ಯ’ ಯೋಜನೆಯ 13 ಕ್ವಿಂಟಲ್ ಅಕ್ಕಿ ಹಾಗೂ ‘ಕ್ಷೀರಭಾಗ್ಯ’ ಯೋಜನೆಯ 85 ಕೆ.ಜಿ. ಹಾಲಿನ ಪುಡಿಯ ಪಾಕೆಟ್ಗಳನ್ನು ಪೊಲೀಸರು ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಗಳು ಶನಿವಾರ ತಡರಾತ್ರಿ ವಶಕ್ಕೆ ಪಡೆದಿದ್ದಾರೆ.