<p><strong>ಬೆಳಗಾವಿ:</strong> ಇಲ್ಲಿನ ವಿಪ್ರ ಸಹಾಯ ವೇದಿಕೆಯವರು ಜಿಲ್ಲಾ ಬ್ರಾಹ್ಮಣ ಸಮಾಜದ ಆಶ್ರಯದಲ್ಲಿ ಬಡ ಬ್ರಾಹ್ಮಣ ಕುಟುಂಬಗಳಿಗೆ ದಿನಸಿ ವಿತರಿಸಿದರು.</p>.<p>ಚಿದಂಬರ ನಗರ ದೇವಸ್ಥಾನದಲ್ಲಿ ಕಾರ್ಯಕ್ರಮಕ್ಕೆ ವಕೀಲ ಎಸ್.ಎಂ. ಕುಲಕರ್ಣಿ ಚಾಲನೆ ನೀಡಿದರು.</p>.<p>ಮುಖಂಡ ಅನಿಲ ಪೋತದಾರ ಮಾತನಾಡಿ, ‘ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಕುಟುಂಬಗಳಿಗೆ ಅನ್ನದಾನಕ್ಕೆ ಸಹಾಯ ಮಾಡುವ ಜೊತೆಗೆ ಅವರ ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ನೆರವಾಗುವುದು ನಮ್ಮ ಸಂಸ್ಥೆಯ ಮುಖ್ಯ ಉದ್ದೇಶ’ ಎಂದು ತಿಳಿಸಿದರು.</p>.<p>‘ನೂರು ದಿನಸಿ ಕಿಟ್ಗಳನ್ನು ಭಾಗ್ಯನಗರ, ಅನಗೋಳ, ಶಹಾಪುರ ಮತ್ತು ವಡಗಾವಿ ಭಾಗದ ಕುಟುಂಬಗಳಿಗೆ ವಿತರಿಸಲಾಗಿದೆ. ಈ ಸೇವೆಗಾಗಿ ದಾನಿಗಳು ₹ 2.25 ಲಕ್ಷ ನೀಡಿದ್ದಾರೆ. ₹ 1,500 ಮೊತ್ತದಲ್ಲಿ ಕಿಟ್ ಸಿದ್ಧಪಡಿಸಲಾಗಿದೆ’ ಎಂದು ಸಂಚಾಲಕ ಜಯತೀರ್ಥ ಸವದತ್ತಿ ಹೇಳಿದರು.</p>.<p>ಸದಸ್ಯರಾದ ನರಸಿಂಹ ಸವದತ್ತಿ, ಆನಂದ ಗಲಗಲಿ, ಸುನೀಲ ದೇಶಪಾಂಡೆ, ಪವನ ದೇಶಪಾಂಡೆ, ಭೀಮಸೇನ ಮಿರ್ಜಿ, ಅಚ್ಚುತ ಪ್ರಯಾಗ, ಸುನೀಲ ಯಾರ್ದಿ, ರಾಜು ಜೋಶಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ:</strong> ಇಲ್ಲಿನ ವಿಪ್ರ ಸಹಾಯ ವೇದಿಕೆಯವರು ಜಿಲ್ಲಾ ಬ್ರಾಹ್ಮಣ ಸಮಾಜದ ಆಶ್ರಯದಲ್ಲಿ ಬಡ ಬ್ರಾಹ್ಮಣ ಕುಟುಂಬಗಳಿಗೆ ದಿನಸಿ ವಿತರಿಸಿದರು.</p>.<p>ಚಿದಂಬರ ನಗರ ದೇವಸ್ಥಾನದಲ್ಲಿ ಕಾರ್ಯಕ್ರಮಕ್ಕೆ ವಕೀಲ ಎಸ್.ಎಂ. ಕುಲಕರ್ಣಿ ಚಾಲನೆ ನೀಡಿದರು.</p>.<p>ಮುಖಂಡ ಅನಿಲ ಪೋತದಾರ ಮಾತನಾಡಿ, ‘ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಕುಟುಂಬಗಳಿಗೆ ಅನ್ನದಾನಕ್ಕೆ ಸಹಾಯ ಮಾಡುವ ಜೊತೆಗೆ ಅವರ ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ನೆರವಾಗುವುದು ನಮ್ಮ ಸಂಸ್ಥೆಯ ಮುಖ್ಯ ಉದ್ದೇಶ’ ಎಂದು ತಿಳಿಸಿದರು.</p>.<p>‘ನೂರು ದಿನಸಿ ಕಿಟ್ಗಳನ್ನು ಭಾಗ್ಯನಗರ, ಅನಗೋಳ, ಶಹಾಪುರ ಮತ್ತು ವಡಗಾವಿ ಭಾಗದ ಕುಟುಂಬಗಳಿಗೆ ವಿತರಿಸಲಾಗಿದೆ. ಈ ಸೇವೆಗಾಗಿ ದಾನಿಗಳು ₹ 2.25 ಲಕ್ಷ ನೀಡಿದ್ದಾರೆ. ₹ 1,500 ಮೊತ್ತದಲ್ಲಿ ಕಿಟ್ ಸಿದ್ಧಪಡಿಸಲಾಗಿದೆ’ ಎಂದು ಸಂಚಾಲಕ ಜಯತೀರ್ಥ ಸವದತ್ತಿ ಹೇಳಿದರು.</p>.<p>ಸದಸ್ಯರಾದ ನರಸಿಂಹ ಸವದತ್ತಿ, ಆನಂದ ಗಲಗಲಿ, ಸುನೀಲ ದೇಶಪಾಂಡೆ, ಪವನ ದೇಶಪಾಂಡೆ, ಭೀಮಸೇನ ಮಿರ್ಜಿ, ಅಚ್ಚುತ ಪ್ರಯಾಗ, ಸುನೀಲ ಯಾರ್ದಿ, ರಾಜು ಜೋಶಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>