‘ನಾಯಿಂದ ಕ್ಷೌರಿಕ, ಹಡಪದ, ನಾವಲಿಗ, ನಾಯಿದ, ಕೆಲಸಿಗ, ಕೆಲಸಿ, ಮಹಲೇ, ಬಂಡಾರಿ, ಕಾಯಕದ, ನಾಪಿತ ಹೀಗೆ ಹಲವು ಹೆಸರುಗಳಿಂದ ಕರೆಯಲಾಗುವ ನಾವು ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಹಿಂದುಳಿದಿದ್ದೇವೆ. ಜಾತಿ ಕಾಲಂನಲ್ಲಿ ನಮ್ಮ ಪೂರ್ವಿಕರಿಗೆ ಮೇಲ್ಜಾತಿಯವರು ತಪ್ಪು ತಿಳಿವಳಿಕೆ ನೀಡಿ ಹಿಂದೂ ಲಿಂಗಾಯತ, ಹಿಂದೂ ವೀರಶೈವ ಎಂದು ನಮೂದಿಸಿದ್ದಾರೆ. ಆದರೆ, ಯಾವ ಲಿಂಗಾಯತರು ಹಾಗೂ ವೀರಶೈವರು ನಮ್ಮೊಂದಿಗೆ ವಿವಾಹ ಸಂಬಂಧಗಳನ್ನು ಮಾಡುವುದಿಲ್ಲ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಹಿಂದೂ ಹಡಪದ, ಹಿಂದೂ ಕ್ಷೌರಿಕ ಎಂದು ಪ್ರಮಾಣಪತ್ರ ನೀಡುವಂತೆ ತಹಶೀಲ್ದಾರರಿಗೆ ಕಟ್ಟುನಿಟ್ಟಿನ ಆದೇಶ ಮಾಡಬೇಕು’ ಎಂದು ಆಗ್ರಹಿಸಿದರು.