<p><strong>ಹುಕ್ಕೇರಿ</strong>: ಜಲಾನಯನ ಪ್ರದೇಶದಲ್ಲಿ ಮಳೆ ಹೆಚ್ಚಾದ ಕಾರಣ ತಾಲ್ಲೂಕಿನಲ್ಲಿ ಹರಿಯುವ ಘಟಪ್ರಭಾ, ಹಿರಣ್ಯಕೇಶಿ ಮತ್ತು ಮಾರ್ಕಂಡೇಯ ನದಿಗಳ ಹರಿವು ಗುರುವಾರ ಹೆಚ್ಚಾಗಿದೆ.</p>.<p><strong>ಶಿರೂರ್ ಡ್ಯಾಂ:</strong> ಮಾರ್ಕಂಡೇಯ ನದಿಗೆ ತಾಲ್ಲೂಕಿನ ಶಿರೂರ್ ಬಳಿ ನಿರ್ಮಿಸಿರುವ ಡ್ಯಾಂ ಗುರುವಾರ 2308.98 ಅಡಿ (2309.71ಅಡಿ ಗರಿಷ್ಟ) ಇತ್ತು. ಮುಂಜಾನೆ ಹನ್ನೊಂದರ ಸಮಯಕ್ಕೆ ಒಳಹರಿವು 2441 ಕ್ಯೂಸೆಕ್ ಇತ್ತು.</p>.<p><strong>ಶೇ98.10ರಷ್ಟು ಭರ್ತಿ?:</strong> ಜಲಾಶಯವು ಗುರುವಾರ ಶೇ 98.10ರಷ್ಟು ಭರ್ತಿಯಾಗಿದ್ದು, ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಕ್ರಸ್ಟ್ ಗೇಟ್ ಮೂಲಕ 2,500 ಕ್ಯೂಸೆಕ್ ನೀರು ನದಿಗೆ ಹರಿಸಲಾಗಿದೆ ಎಂದು ಇಇ ಅರವಿಂದ ದೇಶಪಾಂಡೆ ಮತ್ತು ಎಇಇ ಪ್ರವೀಣ ಅರಳಿಕಟ್ಟಿ ತಿಳಿಸಿದರು.</p>.<p>ಜಲಾಶಯ ಒಳಹರಿವು ಹೆಚ್ಚಾದಂತೆ ಮತ್ತೆ 5,000 ಕ್ಯೂಸೆಕ್ ವರೆಗೆ ನೀರು ನದಿಪಾತ್ರಕ್ಕೆ ಹರಿಸಲಾಗುವುದು.</p>.<p><strong>ಎಚ್ಚರಿಕೆ:</strong> ಮಾರ್ಕಂಡೇಯ ನದಿ ದಡದಲ್ಲಿ ಬರುವ ಎಲ್ಲ ಗ್ರಾಮಗಳ ಗ್ರಾಮಸ್ಥರು ಮತ್ತು ತಮ್ಮ ಜಾನವಾರು ಸಮೇತ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಎಂಜನಿಯರ್ಗಳು ಎಚ್ಚರಿಕೆ ನೀಡಿದ್ದಾರೆ.</p>.<p><strong>ಹಿಡಕಲ್ ಡ್ಯಾಂ:</strong> ಘಟಪ್ರಭಾ ನದಿಗೆ ಅಡ್ಡಲಾಗಿ ಹಿಡಕಲ್ ಬಳಿ ನಿರ್ಮಿಸಿರುವ ರಾಜಾ ಲಖಮಗೌಡ ಜಲಾಶಯದ ನೀರಿನ ಮಟ್ಟ ಗುರುವಾರ 2169.933 ಅಡಿ ( 2175 ಅಡಿ ಗರಿಷ್ಟ) ಇತ್ತು. ಅಂದರೆ 51 ಟಿಎಂಸಿ ಪೈಕಿ ಗುರುವಾರ 47.036 ಟಿಎಂಸಿ ಇತ್ತು.<br /> ನದಿಯ ಒಳಹರಿವು ಗುರುವಾರ 15,782 ಕ್ಯೂಸೆಕ್ ಇದ್ದು, ಜಿ.ಆರ್.ಬಿ.ಸಿ. 2200 ಕ್ಯೂಸೆಕ್, ಸಿಬಿಸಿ 400 ಕ್ಯೂಸೆಕ್, ಕೆಪಿಸಿ 2950 ಕ್ಯೂಸೆಕ್, ಇತರೆ ಉದ್ಧೇಶಕ್ಕೆ ಸೇರಿ ಒಟ್ಟು ಹೊರಹರಿವು 9991 ಕ್ಯೂಸೆಕ್ ನೀರು ಬಿಡಲಾಗುತ್ತಿದೆ ಎಂದು ಎಇಇ ಜಗದೀಶ್ ಬಿ.ಕೆ.ತಿಳಿಸಿದರು.</p>.<p>ಒಳಹರಿವು ಹೆಚ್ಚಾದಂತೆ ನದಿ ಪಾತ್ರಕ್ಕೆ ಹೆಚ್ಚು ನೀರು ಹರಿಸುವದರಿಂದ ಘಟಪ್ರಭಾ ಮತ್ತು ಹಿರಣ್ಯಕೇಶಿ ನದಿ ತಟದ ಜನರು ಜಾನವಾರು ಸಮೇತ ಸುರಕ್ಷಿತ ಸ್ಥಳಕ್ಕೆ ಹೋಗುವಂತೆ ವಿನಂತಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಕ್ಕೇರಿ</strong>: ಜಲಾನಯನ ಪ್ರದೇಶದಲ್ಲಿ ಮಳೆ ಹೆಚ್ಚಾದ ಕಾರಣ ತಾಲ್ಲೂಕಿನಲ್ಲಿ ಹರಿಯುವ ಘಟಪ್ರಭಾ, ಹಿರಣ್ಯಕೇಶಿ ಮತ್ತು ಮಾರ್ಕಂಡೇಯ ನದಿಗಳ ಹರಿವು ಗುರುವಾರ ಹೆಚ್ಚಾಗಿದೆ.</p>.<p><strong>ಶಿರೂರ್ ಡ್ಯಾಂ:</strong> ಮಾರ್ಕಂಡೇಯ ನದಿಗೆ ತಾಲ್ಲೂಕಿನ ಶಿರೂರ್ ಬಳಿ ನಿರ್ಮಿಸಿರುವ ಡ್ಯಾಂ ಗುರುವಾರ 2308.98 ಅಡಿ (2309.71ಅಡಿ ಗರಿಷ್ಟ) ಇತ್ತು. ಮುಂಜಾನೆ ಹನ್ನೊಂದರ ಸಮಯಕ್ಕೆ ಒಳಹರಿವು 2441 ಕ್ಯೂಸೆಕ್ ಇತ್ತು.</p>.<p><strong>ಶೇ98.10ರಷ್ಟು ಭರ್ತಿ?:</strong> ಜಲಾಶಯವು ಗುರುವಾರ ಶೇ 98.10ರಷ್ಟು ಭರ್ತಿಯಾಗಿದ್ದು, ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಕ್ರಸ್ಟ್ ಗೇಟ್ ಮೂಲಕ 2,500 ಕ್ಯೂಸೆಕ್ ನೀರು ನದಿಗೆ ಹರಿಸಲಾಗಿದೆ ಎಂದು ಇಇ ಅರವಿಂದ ದೇಶಪಾಂಡೆ ಮತ್ತು ಎಇಇ ಪ್ರವೀಣ ಅರಳಿಕಟ್ಟಿ ತಿಳಿಸಿದರು.</p>.<p>ಜಲಾಶಯ ಒಳಹರಿವು ಹೆಚ್ಚಾದಂತೆ ಮತ್ತೆ 5,000 ಕ್ಯೂಸೆಕ್ ವರೆಗೆ ನೀರು ನದಿಪಾತ್ರಕ್ಕೆ ಹರಿಸಲಾಗುವುದು.</p>.<p><strong>ಎಚ್ಚರಿಕೆ:</strong> ಮಾರ್ಕಂಡೇಯ ನದಿ ದಡದಲ್ಲಿ ಬರುವ ಎಲ್ಲ ಗ್ರಾಮಗಳ ಗ್ರಾಮಸ್ಥರು ಮತ್ತು ತಮ್ಮ ಜಾನವಾರು ಸಮೇತ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಎಂಜನಿಯರ್ಗಳು ಎಚ್ಚರಿಕೆ ನೀಡಿದ್ದಾರೆ.</p>.<p><strong>ಹಿಡಕಲ್ ಡ್ಯಾಂ:</strong> ಘಟಪ್ರಭಾ ನದಿಗೆ ಅಡ್ಡಲಾಗಿ ಹಿಡಕಲ್ ಬಳಿ ನಿರ್ಮಿಸಿರುವ ರಾಜಾ ಲಖಮಗೌಡ ಜಲಾಶಯದ ನೀರಿನ ಮಟ್ಟ ಗುರುವಾರ 2169.933 ಅಡಿ ( 2175 ಅಡಿ ಗರಿಷ್ಟ) ಇತ್ತು. ಅಂದರೆ 51 ಟಿಎಂಸಿ ಪೈಕಿ ಗುರುವಾರ 47.036 ಟಿಎಂಸಿ ಇತ್ತು.<br /> ನದಿಯ ಒಳಹರಿವು ಗುರುವಾರ 15,782 ಕ್ಯೂಸೆಕ್ ಇದ್ದು, ಜಿ.ಆರ್.ಬಿ.ಸಿ. 2200 ಕ್ಯೂಸೆಕ್, ಸಿಬಿಸಿ 400 ಕ್ಯೂಸೆಕ್, ಕೆಪಿಸಿ 2950 ಕ್ಯೂಸೆಕ್, ಇತರೆ ಉದ್ಧೇಶಕ್ಕೆ ಸೇರಿ ಒಟ್ಟು ಹೊರಹರಿವು 9991 ಕ್ಯೂಸೆಕ್ ನೀರು ಬಿಡಲಾಗುತ್ತಿದೆ ಎಂದು ಎಇಇ ಜಗದೀಶ್ ಬಿ.ಕೆ.ತಿಳಿಸಿದರು.</p>.<p>ಒಳಹರಿವು ಹೆಚ್ಚಾದಂತೆ ನದಿ ಪಾತ್ರಕ್ಕೆ ಹೆಚ್ಚು ನೀರು ಹರಿಸುವದರಿಂದ ಘಟಪ್ರಭಾ ಮತ್ತು ಹಿರಣ್ಯಕೇಶಿ ನದಿ ತಟದ ಜನರು ಜಾನವಾರು ಸಮೇತ ಸುರಕ್ಷಿತ ಸ್ಥಳಕ್ಕೆ ಹೋಗುವಂತೆ ವಿನಂತಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>