<p><strong>ಅಥಣಿ:</strong> ರೋಟರಿ ಸಂಸ್ಥೆಯ ರಜತ ಮಹೋತ್ಸವವು ಜ.6 ಮತ್ತು 7ರಂದು ನಡೆಯಲಿದೆ ಎಂದು ಸಂಸ್ಥಾಪಕ ಅಧ್ಯಕ್ಷ ಗಜಾನನ ಮಂಗಸೂಳಿ ಹೇಳಿದರು. </p>.<p>ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ’ಸಂಸ್ಥೆ ಮೂಲಕ ಶಾಲೆಗಳಿಗೆ ಶೌಚಾಲಯ, ಶುದ್ದಕುಡಿಯುವ ನೀರು, ಡೆಸ್ಕ್, ಕಂಪ್ಯೂಟರ್ ಮತ್ತು ಪರಿಕರಗಳನ್ನು ಕೊಡುವ ಕೆಲಸ ಸೇರಿದಂತೆ ಹಲವಾರು ಸಮಾಜಮುಖಿ ಕಾರ್ಯ ಮಾಡಿದ್ದೇವೆ’ ಎಂದರು.</p>.<p>ಈ ಕಾರ್ಯಕ್ರಮ ಸ್ಮರಣೀಯ ಮಾಡುವ ನಿಟ್ಟಿನಲ್ಲಿ ಜ. 6 ಮತ್ತು 7 ರಂದು ಜೆ.ಎ. ಹೈಸ್ಕೂಲ್ ಆವರಣದಲ್ಲಿ ಕಾರ್ಯಕ್ರಮ ಇಟ್ಟುಕೊಳ್ಳಲಾಗಿದೆ ಎಂದರು. </p>.<p>ಶನಿವಾರ ಜನವರಿ 6 ರಂದು ಮೋಟಗಿ ಮಠ ಸ್ವಾಮಿಜಿ ಸಾನಿಧ್ಯದಲ್ಲಿ ಸತೀಶ್ ಜಾರಕಿಹೋಳಿ ಕಾರ್ಯಕ್ರಮ ಉದ್ಘಾಟಿಸುವರು. ಕೆ.ಎ ವನಜೋಳ, ವಾಮನ ಪಾರ್ಥನಳ್ಳಿ ಭಾಗವಹಿಸುವರು.</p>.<p>ಹಾಸ್ಯ ಕಲಾವಿದರಾದ ಪ್ರಾಣೇಶ , ನರಸಿಂಹ ಜೋಶಿ , ಮಹಾಮನೆ ಅವರ ಕಾರ್ಯಕ್ರಮ ನಡೆಸಲಿದ್ದಾರೆ. ಜ.7ರಂದು ಗಚ್ಚಿನ ಮಠದ ಶಿವಬಸವ ಸ್ವಾಮೀಜಿ, ಅಥಣಿ ಶಾಸಕ ಲಕ್ಷ್ಮಣ ಸವದಿ, ಕಾಗವಾಡ ಶಾಸಕ ರಾಜು ಕಾಗೆ ಭಾಗವಹಿಸುವರು.</p>.<p>ಸಾಂಸ್ಕ್ರತಿಕ ಸಂಭ್ರಮ ಕಾರ್ಯಕ್ರಮವೂ ನಡೆಯಲಿದೆ ಎಂದು ತಿಳಿಸಿದರು.</p>.<p>ರೋಟರಿ ಅಧ್ಯಕ್ಷ ಅನೀಲ ದೇಶಪಾಂಡೆ, ಕಾರ್ಯದರ್ಶಿ ಅರುಣ ಸೌದಾಗರ ಹಾಗೂ ಮಾಜಿ ಅಧ್ಯಕ್ಷ ಸಂತೋಷ ಭೊಮ್ಮನ್ನವರ, ಮೇಘರಾಜ ಪರಮಾರ, ಅರುಣ್ ಯಲಗುದ್ರಿ, ಅರುಣ ಸೌದಾಗರ, ಶೇಖರ ಕೋಲಾರ, ಅಮೃತ ಕುಲಕರ್ಣಿ, ಆನಂದ ಗುಂಜಿಗಾಂವಿ, ಸಚೀನ್ ದೇಸಾಯಿ ಇದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಥಣಿ:</strong> ರೋಟರಿ ಸಂಸ್ಥೆಯ ರಜತ ಮಹೋತ್ಸವವು ಜ.6 ಮತ್ತು 7ರಂದು ನಡೆಯಲಿದೆ ಎಂದು ಸಂಸ್ಥಾಪಕ ಅಧ್ಯಕ್ಷ ಗಜಾನನ ಮಂಗಸೂಳಿ ಹೇಳಿದರು. </p>.<p>ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ’ಸಂಸ್ಥೆ ಮೂಲಕ ಶಾಲೆಗಳಿಗೆ ಶೌಚಾಲಯ, ಶುದ್ದಕುಡಿಯುವ ನೀರು, ಡೆಸ್ಕ್, ಕಂಪ್ಯೂಟರ್ ಮತ್ತು ಪರಿಕರಗಳನ್ನು ಕೊಡುವ ಕೆಲಸ ಸೇರಿದಂತೆ ಹಲವಾರು ಸಮಾಜಮುಖಿ ಕಾರ್ಯ ಮಾಡಿದ್ದೇವೆ’ ಎಂದರು.</p>.<p>ಈ ಕಾರ್ಯಕ್ರಮ ಸ್ಮರಣೀಯ ಮಾಡುವ ನಿಟ್ಟಿನಲ್ಲಿ ಜ. 6 ಮತ್ತು 7 ರಂದು ಜೆ.ಎ. ಹೈಸ್ಕೂಲ್ ಆವರಣದಲ್ಲಿ ಕಾರ್ಯಕ್ರಮ ಇಟ್ಟುಕೊಳ್ಳಲಾಗಿದೆ ಎಂದರು. </p>.<p>ಶನಿವಾರ ಜನವರಿ 6 ರಂದು ಮೋಟಗಿ ಮಠ ಸ್ವಾಮಿಜಿ ಸಾನಿಧ್ಯದಲ್ಲಿ ಸತೀಶ್ ಜಾರಕಿಹೋಳಿ ಕಾರ್ಯಕ್ರಮ ಉದ್ಘಾಟಿಸುವರು. ಕೆ.ಎ ವನಜೋಳ, ವಾಮನ ಪಾರ್ಥನಳ್ಳಿ ಭಾಗವಹಿಸುವರು.</p>.<p>ಹಾಸ್ಯ ಕಲಾವಿದರಾದ ಪ್ರಾಣೇಶ , ನರಸಿಂಹ ಜೋಶಿ , ಮಹಾಮನೆ ಅವರ ಕಾರ್ಯಕ್ರಮ ನಡೆಸಲಿದ್ದಾರೆ. ಜ.7ರಂದು ಗಚ್ಚಿನ ಮಠದ ಶಿವಬಸವ ಸ್ವಾಮೀಜಿ, ಅಥಣಿ ಶಾಸಕ ಲಕ್ಷ್ಮಣ ಸವದಿ, ಕಾಗವಾಡ ಶಾಸಕ ರಾಜು ಕಾಗೆ ಭಾಗವಹಿಸುವರು.</p>.<p>ಸಾಂಸ್ಕ್ರತಿಕ ಸಂಭ್ರಮ ಕಾರ್ಯಕ್ರಮವೂ ನಡೆಯಲಿದೆ ಎಂದು ತಿಳಿಸಿದರು.</p>.<p>ರೋಟರಿ ಅಧ್ಯಕ್ಷ ಅನೀಲ ದೇಶಪಾಂಡೆ, ಕಾರ್ಯದರ್ಶಿ ಅರುಣ ಸೌದಾಗರ ಹಾಗೂ ಮಾಜಿ ಅಧ್ಯಕ್ಷ ಸಂತೋಷ ಭೊಮ್ಮನ್ನವರ, ಮೇಘರಾಜ ಪರಮಾರ, ಅರುಣ್ ಯಲಗುದ್ರಿ, ಅರುಣ ಸೌದಾಗರ, ಶೇಖರ ಕೋಲಾರ, ಅಮೃತ ಕುಲಕರ್ಣಿ, ಆನಂದ ಗುಂಜಿಗಾಂವಿ, ಸಚೀನ್ ದೇಸಾಯಿ ಇದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>