<p><strong>ಬೆಳಗಾವಿ</strong>: ಯುದ್ಧಪೀಡಿತ ಉಕ್ರೇನ್ನಲ್ಲಿ ಸಿಲುಕಿದ್ದ ಭಾರತೀಯರನ್ನು ತಾಯ್ನಾಡಿಗೆ ಕರೆತರುವಲ್ಲಿ ವಿಮಾನಗಳ ಕಾರ್ಯಾಚರಣೆ ನಡೆಸಿದ ಪೈಲಟ್ಗಳ ಪೈಕಿ ದಿಶಾ ಆದಿತ್ಯ ಮಣ್ಣೂರ ಎನ್ನುವವರು ಬೆಳಗಾವಿಯ ಸೊಸೆ ಎನ್ನುವ ಅಂಶ ಹೊರಬಿದ್ದಿದೆ.</p>.<p>ಅವರು ಪೈಲಟ್ ಕೂಡ ಆಗಿರುವ ಬೆಳಗಾವಿ ಮೂಲದ ಆದಿತ್ಯ ಅವರ ಪತ್ನಿಯಾಗಿದ್ದಾರೆ. ಸದ್ಯ ದೆಹಲಿಯಲ್ಲಿ ನೆಲೆಸಿದ್ದಾರೆ. ಏರ್ಇಂಡಿಯಾ ಕಂಪನಿಯ ವಿಮಾನಗಳಲ್ಲಿ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಆದಿತ್ಯ ಇಲ್ಲಿನ ಪದ್ಮಜಾ–ಪ್ರಹ್ಲಾದ ದಂಪತಿಯ ಪುತ್ರ. ಈ ಕುಟುಂಬವೀಗ ಮಂಬೈನಲ್ಲಿ ನೆಲೆಸಿದೆ.</p>.<p>ಸಂಕಷ್ಟದಲ್ಲಿದ್ದ 242 ಭಾರತೀಯರನ್ನು ಕರೆತರುವುದಕ್ಕಾಗಿ ತೆರಳಿದ್ದ ‘ಎಐ–1947’ ವಿಮಾನದ ನಾಲ್ವರು ಪೈಲಟ್ಗಳ ಪೈಕಿ ದಿಶಾ ಒಬ್ಬರಾಗಿದ್ದರು. ಹೋದ ತಿಂಗಳು ಆ ಕಾರ್ಯಾಚರಣೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.</p>.<p>‘ಆತಂಕದ ಪರಿಸ್ಥಿತಿಯ ನಡುವೆಯೂ ಉಕ್ರೇನ್ನ ಕೀವ್ಗೆ ತೆರಳಿ ಭಾರತೀಯರನ್ನು ಸುರಕ್ಷಿತವಾಗಿ ಕರೆದುಕೊಂಡು ಬಂದ ತಂಡದಲ್ಲಿ ಸೊಸೆ ಕೆಲಸ ಮಾಡಿದ್ದಾರೆ ಎನ್ನವುದು ಹೆಮ್ಮೆ ಮೂಡಿಸಿದೆ. ಅಲ್ಲಿಗೆ ತೆರಳುವ ಮುನ್ಬ ಆಕೆಯೇ ನಮಗೆ ಧೈರ್ಯ ತುಂಬಿದ್ದಳು’ ಎಂದು ಅತ್ತೆ ಪದ್ಮಜಾ ಹೇಳಿದ್ದಾರೆ.</p>.<p>ನ್ಯೂಜಿಲೆಂಡ್ನಲ್ಲಿ ಪೈಲಟ್ ತರಬೇತಿ ಪಡೆದಿರುವ ದಿಶಾ, 2017ರಿಂದ ಹಲವು ದೇಶಗಳಿಗೆ ವಿಮಾನ ಹಾರಾಟ ನಡೆಸಿದ ಅನುಭವ ಹೊಂದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸಂಪರ್ಕಕ್ಕೆ ಅವರು ಲಭ್ಯವಾಗಲಿಲ್ಲ.</p>.<p><strong>ಇದನ್ನೂ ಓದಿ-</strong><a href="https://www.prajavani.net/world-news/russia-ukraine-conflict-over-11000-russian-troops-killed-in-war-916807.html" target="_blank"><strong>ರಷ್ಯಾದ 11,000 ಕ್ಕೂ ಅಧಿಕ ಸೈನಿಕರ ಹತ್ಯೆ: ಉಕ್ರೇನ್ ಮಾಹಿತಿ</strong></a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ</strong>: ಯುದ್ಧಪೀಡಿತ ಉಕ್ರೇನ್ನಲ್ಲಿ ಸಿಲುಕಿದ್ದ ಭಾರತೀಯರನ್ನು ತಾಯ್ನಾಡಿಗೆ ಕರೆತರುವಲ್ಲಿ ವಿಮಾನಗಳ ಕಾರ್ಯಾಚರಣೆ ನಡೆಸಿದ ಪೈಲಟ್ಗಳ ಪೈಕಿ ದಿಶಾ ಆದಿತ್ಯ ಮಣ್ಣೂರ ಎನ್ನುವವರು ಬೆಳಗಾವಿಯ ಸೊಸೆ ಎನ್ನುವ ಅಂಶ ಹೊರಬಿದ್ದಿದೆ.</p>.<p>ಅವರು ಪೈಲಟ್ ಕೂಡ ಆಗಿರುವ ಬೆಳಗಾವಿ ಮೂಲದ ಆದಿತ್ಯ ಅವರ ಪತ್ನಿಯಾಗಿದ್ದಾರೆ. ಸದ್ಯ ದೆಹಲಿಯಲ್ಲಿ ನೆಲೆಸಿದ್ದಾರೆ. ಏರ್ಇಂಡಿಯಾ ಕಂಪನಿಯ ವಿಮಾನಗಳಲ್ಲಿ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಆದಿತ್ಯ ಇಲ್ಲಿನ ಪದ್ಮಜಾ–ಪ್ರಹ್ಲಾದ ದಂಪತಿಯ ಪುತ್ರ. ಈ ಕುಟುಂಬವೀಗ ಮಂಬೈನಲ್ಲಿ ನೆಲೆಸಿದೆ.</p>.<p>ಸಂಕಷ್ಟದಲ್ಲಿದ್ದ 242 ಭಾರತೀಯರನ್ನು ಕರೆತರುವುದಕ್ಕಾಗಿ ತೆರಳಿದ್ದ ‘ಎಐ–1947’ ವಿಮಾನದ ನಾಲ್ವರು ಪೈಲಟ್ಗಳ ಪೈಕಿ ದಿಶಾ ಒಬ್ಬರಾಗಿದ್ದರು. ಹೋದ ತಿಂಗಳು ಆ ಕಾರ್ಯಾಚರಣೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.</p>.<p>‘ಆತಂಕದ ಪರಿಸ್ಥಿತಿಯ ನಡುವೆಯೂ ಉಕ್ರೇನ್ನ ಕೀವ್ಗೆ ತೆರಳಿ ಭಾರತೀಯರನ್ನು ಸುರಕ್ಷಿತವಾಗಿ ಕರೆದುಕೊಂಡು ಬಂದ ತಂಡದಲ್ಲಿ ಸೊಸೆ ಕೆಲಸ ಮಾಡಿದ್ದಾರೆ ಎನ್ನವುದು ಹೆಮ್ಮೆ ಮೂಡಿಸಿದೆ. ಅಲ್ಲಿಗೆ ತೆರಳುವ ಮುನ್ಬ ಆಕೆಯೇ ನಮಗೆ ಧೈರ್ಯ ತುಂಬಿದ್ದಳು’ ಎಂದು ಅತ್ತೆ ಪದ್ಮಜಾ ಹೇಳಿದ್ದಾರೆ.</p>.<p>ನ್ಯೂಜಿಲೆಂಡ್ನಲ್ಲಿ ಪೈಲಟ್ ತರಬೇತಿ ಪಡೆದಿರುವ ದಿಶಾ, 2017ರಿಂದ ಹಲವು ದೇಶಗಳಿಗೆ ವಿಮಾನ ಹಾರಾಟ ನಡೆಸಿದ ಅನುಭವ ಹೊಂದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸಂಪರ್ಕಕ್ಕೆ ಅವರು ಲಭ್ಯವಾಗಲಿಲ್ಲ.</p>.<p><strong>ಇದನ್ನೂ ಓದಿ-</strong><a href="https://www.prajavani.net/world-news/russia-ukraine-conflict-over-11000-russian-troops-killed-in-war-916807.html" target="_blank"><strong>ರಷ್ಯಾದ 11,000 ಕ್ಕೂ ಅಧಿಕ ಸೈನಿಕರ ಹತ್ಯೆ: ಉಕ್ರೇನ್ ಮಾಹಿತಿ</strong></a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>