<p><strong>ಬೈಲಹೊಂಗಲ</strong>: ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ವೀರರಾಣಿ ಚನ್ನಮ್ಮನ ಬಲಗೈ ಬಂಟ ರಾಯಣ್ಣನ ಹುಟ್ಟೂರು ಸಂಗೊಳ್ಳಿಯಲ್ಲಿ ಸೋಮವಾರ ನಡೆದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವ–2026 ಜಾನಪದ ಕಲಾಮೇಳ ವೈಭವದಿಂದ ನೆರವೇರಿತು.</p>.<p>ಶಾಸಕರಾದ ಮಹಾಂತೇಶ ಕೌಜಲಗಿ, ಬಾಬಾಸಾಹೇಬ ಪಾಟೀಲ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪಾ ಚಚಡಿ, ಉಪಾಧ್ಯಕ್ಷ ಫಕೀರಪ್ಪ ಕುರಿ, ಉಪವಿಭಾಗಾಧಿಕಾರಿ ಪ್ರವೀಣ ಜೈನ್, ತಾಲ್ಲೂಕು ಪಂಚಾಯಿತಿ ಇಒ ಸಂಜೀವ ಜುನ್ನೂರ, ತಹಶೀಲ್ದಾರ ಹನುಮಂತ ಶಿರಹಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಡೊಳ್ಳು ಬಾರಿಸುವ ಮೂಲಕ ಜಾನಪದ ಕಲಾ ಮೇಳದ ಭವ್ಯ ಮೆರವಣಿಗೆಗೆ ಚಾಲನೆ ನೀಡಿದರು.</p>.<p>ಬ್ರಿಟಿಷರ ವಿರುದ್ಧ ವೀರ ಪರಾಕ್ರಮ ಮೆರೆದ ರಾಯಣ್ಣನ ತ್ಯಾಗ– ಬಲಿದಾನಗಳನ್ನು ಕಲಾಮೇಳ ನೆನಪಿಸುವಂತೆ ಮಾಡಿತು. ಉತ್ಸವದ ಢಮರುಗಗಳು ಕಿತ್ತೂರು ಇತಿಹಾಸದ ರಣಕಹಳೆಯ ಸಂಕೇತವಾಗಿ ಭಾಸವಾದವು. ಡೊಳ್ಳುಗಳು ಕ್ರಾಂತಿಯ ಧ್ವನಿಯನ್ನು ಹೊರ ಹಾಕಿದವು. ಶೌರ್ಯದ ನೀನಾದ ಎಲ್ಲೆಡೆ ಪಸರಿಸಿತು.</p>.<p>ಉತ್ಸವದ ಅಂಗವಾಗಿ ರಾಯಣ್ಣ ಪ್ರತಿಮೆಗೆ, ಹುತಾತ್ಮ ವೀರಯೋಧ ರಾಜು ಮಲಬನ್ನವರ ಪ್ರತಿಮೆಗೆ ಗಣ್ಯರು ಪುಷ್ಪ ನಮನ ಸಲ್ಲಿಸಿದರು.</p>.<p class="Subhead">ಕಣ್ಮನ ಸೆಳೆದ ಕಲಾತಂಡಗಳು: ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಕಲಾವಿದರಿಗೆ ಗ್ರಾಮಸ್ಥರು ಬಣ್ಣಬಣ್ಣದ ರಂಗೋಲಿ ಚಿತ್ತಾರ ಬಿಡಿಸಿ ಬರಮಾಡಿಕೊಂಡರು. ಗ್ರಾಮದ ಪ್ರತಿಯೊಂದು ಬೀದಿಗಳು ತಳಿರು ತೋರಣಗಳಿಂದ ಶೃಂಗರಿಸಲಾಗಿತ್ತು. ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಡಿಜೆ ಸೌಂಡಿಗೆ ಯುವ ಪಡೆ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿತು.</p>.<p>ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಅರ್ಚಕ ಬಸವರಾಜ ಡೊಳ್ಳಿನ ಪೂಜೆ ಹಾಗೂ ಕಿತ್ತೂರು ಸಂಸ್ಥಾನ ಧ್ವಜಾರೋಹಣ ನೆರವೇರಿಸಿದರು. ಜಾನಪದ ಕಲಾ ಮೇಳ ಮೆರವಣಿಗೆಯಲ್ಲಿ ಜಿಲ್ಲೆ, ಹೊರ ಜಿಲ್ಲೆಯ ಕಲಾವಿದರು ತಮ್ಮ ಕಲಾ ಪ್ರದರ್ಶನದ ಮೂಲಕ ಜನ ಮನ ಗೆದ್ದರು.</p>.<p>ವಿಜಯನಗರ ಗೂಳಪ್ಪ ತಂಡದ ಪುರವಂತಿಕೆ, ಶಿವನಪ್ಪ ಚಂದರಗಿ ಹಾಗೂ ಸುರೇಶ ವಾಗಮೋಡೆ ಡೊಳ್ಳು ಕುಣಿತ, ಶಂಕ್ರವ್ವ ಮುಗಳಿ ಮಹಿಳಾ ಡೊಳ್ಳು ಕುಣಿತ, ರಾಮಚಂದ್ರ ಕಾಂಬಳೆ ನಾಸಿಕ್ ಡೋಲ್, ಭರತ್ ಕಲಾಚಂದ್ರ ಜಾಂಜ್ ಪಥಕ, ಮಹಾಂತೇಶ ಹೂಗಾರ ಸಂಬಳ ವಾದನ, ಶಿವಪ್ಪ ಕುಂಬಾರ ಕರಡಿ ಮಜಲು, ಮಿಲಿಂದ ಸಂಗಣ್ಣವರ ಹಲಗೆ ವಾದನ, ಬಾಲಪ್ಪ ಭಜಂತ್ರಿ ಅವರ ತಾಸೆ ವಾದನ, ಶಾಂತಿಸಾಗರ ಜಾಂಜ್ ಪಥಕ್, ಮಲ್ಲಿಕಾರ್ಜುನ ನಿಚ್ಚಣ್ಣಿ ಕರಡಿ ಮಜಲು, ಗಂಗಾಧರಯ್ಯ ಅಗೋರಿ, ಯೋಗೇಶ ವೀರಗಾಸೆ, ಲೋಹಿತ್ ಆಂಜನೇಯ ವೇಷ, ರಂಗಸ್ವಾಮಿ ಗೊಂಬೆ, ಲಕ್ಷ್ಮಣ ಡೊಳ್ಳು ಕುಣಿತ, ಸಣ್ಣಸ್ವಾಮಿ ಕಂಸಾಳೆ, ರವಿ ಮತ್ತು ತಂಡ ಕೊಂಬು ಕಹಳೆ, ರಾಜಮ್ಮ ಮತ್ತು ತಂಡ ಪಟಾತ ಕುಣಿತ, ಮಹಾಂತೇಶ ವಾಲಿ ಡೊಳ್ಳು ಕುಣಿತ, ಚಂದ್ರು ಸಾರವಾಡಗೊಂಬೆ ಕುಣಿತ, ಸದಾಶಿವ ಮಾಟೊಳ್ಳಿ ಕರಡಿ ಮಜಲು, ವಸಂತ ಆಚಾರ್ಯ ವೀರಗಾಸೆ, ಹಾಗೂ ವಿವಿಧ ನೃತ್ಯಗಳು ನೋಡುಗರ ಗಮನ ಸೆಳೆದವು.</p>.<p>ಆರೋಗ್ಯ ಅಧಿಕಾರಿ ಡಾ.ಎಸ್.ಎಸ್.ಸಿದ್ದನ್ನವರ, ಬಿಇಒ ಎ.ಎನ್.ಪ್ಯಾಟಿ, ಸಾಹಿತಿ ಬಸವರಾಜ ಕಮತ, ಗ್ರಾ.ಪಂ.ಸದಸ್ಯರಾದ ಬಸವರಾಜ ಕೊಡ್ಲಿ, ಇಮಾಮಹುಸೇನ ಖುದ್ದುನ್ನವರ, ರತ್ನಾ ಆನೆಮಠ, ಈರಣ್ಣ ಹಳೇಮನಿ, ಶಿವಕುಮಾರ ಪೂಜೇರ, ಬಾಬು ತಳವಾರ, ಸಂಗನಗೌಡ ಪಾಟೀಲ, ದೀಪಾ ಬಡವನ್ನವರ, ಗಂಗವ್ವ ಹೊಳೆಪ್ಪನವರ, ಮಂಜುಳಾ ಕುಡೋಳ್ಳಿ, ಸನಾ ಖುದ್ದುನ್ನವರ, ಮಹಾಂತೇಶ ಬೆನ್ನಿ, ಬಾಬು ಕುಡೊಳ್ಳಿ, ಗಂಗವ್ವ ಪೂಜೇರ, ಗ್ರಾಮದ ಮುಖಂಡರು, ಮಲ್ಲಿಕಾರ್ಜುನ ಕುಡೊಳ್ಳಿ, ಮಹೇಶ ಹಿರೇಮಠ, ಡಾ.ಬಿ.ಪಿ.ಹಿರೇಮಠ, ಅನೀಲ ಮೆಕಲಮರ್ಡಿ ಕಾರ್ಯದರ್ಶಿ ಪ್ರಭು ನರಗಟ್ಟಿ, ಉಪನ್ಯಾಕ ಚನ್ನಪ್ಪ ಹಕ್ಕಿ, ಬಸನಗೌಡ ಅಗಸಿಮನಿ, ಸುನೀಲ ಕುಲಕರ್ಣಿ, ಅರುಣ ಯಲಿಗಾರ, ಉಮೇಶ ಲಾಳ, ಮಹಾಂತೇಶ ಬೆಣ್ಣಿ ಹಾಗೂ ತಾಲೂಕು ಮಟ್ಟದnಅಧಿಕಾರಿಗಳು, ಸಾವಿರಾರು ನಾಗರಿಕರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೈಲಹೊಂಗಲ</strong>: ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ವೀರರಾಣಿ ಚನ್ನಮ್ಮನ ಬಲಗೈ ಬಂಟ ರಾಯಣ್ಣನ ಹುಟ್ಟೂರು ಸಂಗೊಳ್ಳಿಯಲ್ಲಿ ಸೋಮವಾರ ನಡೆದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವ–2026 ಜಾನಪದ ಕಲಾಮೇಳ ವೈಭವದಿಂದ ನೆರವೇರಿತು.</p>.<p>ಶಾಸಕರಾದ ಮಹಾಂತೇಶ ಕೌಜಲಗಿ, ಬಾಬಾಸಾಹೇಬ ಪಾಟೀಲ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪಾ ಚಚಡಿ, ಉಪಾಧ್ಯಕ್ಷ ಫಕೀರಪ್ಪ ಕುರಿ, ಉಪವಿಭಾಗಾಧಿಕಾರಿ ಪ್ರವೀಣ ಜೈನ್, ತಾಲ್ಲೂಕು ಪಂಚಾಯಿತಿ ಇಒ ಸಂಜೀವ ಜುನ್ನೂರ, ತಹಶೀಲ್ದಾರ ಹನುಮಂತ ಶಿರಹಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಡೊಳ್ಳು ಬಾರಿಸುವ ಮೂಲಕ ಜಾನಪದ ಕಲಾ ಮೇಳದ ಭವ್ಯ ಮೆರವಣಿಗೆಗೆ ಚಾಲನೆ ನೀಡಿದರು.</p>.<p>ಬ್ರಿಟಿಷರ ವಿರುದ್ಧ ವೀರ ಪರಾಕ್ರಮ ಮೆರೆದ ರಾಯಣ್ಣನ ತ್ಯಾಗ– ಬಲಿದಾನಗಳನ್ನು ಕಲಾಮೇಳ ನೆನಪಿಸುವಂತೆ ಮಾಡಿತು. ಉತ್ಸವದ ಢಮರುಗಗಳು ಕಿತ್ತೂರು ಇತಿಹಾಸದ ರಣಕಹಳೆಯ ಸಂಕೇತವಾಗಿ ಭಾಸವಾದವು. ಡೊಳ್ಳುಗಳು ಕ್ರಾಂತಿಯ ಧ್ವನಿಯನ್ನು ಹೊರ ಹಾಕಿದವು. ಶೌರ್ಯದ ನೀನಾದ ಎಲ್ಲೆಡೆ ಪಸರಿಸಿತು.</p>.<p>ಉತ್ಸವದ ಅಂಗವಾಗಿ ರಾಯಣ್ಣ ಪ್ರತಿಮೆಗೆ, ಹುತಾತ್ಮ ವೀರಯೋಧ ರಾಜು ಮಲಬನ್ನವರ ಪ್ರತಿಮೆಗೆ ಗಣ್ಯರು ಪುಷ್ಪ ನಮನ ಸಲ್ಲಿಸಿದರು.</p>.<p class="Subhead">ಕಣ್ಮನ ಸೆಳೆದ ಕಲಾತಂಡಗಳು: ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಕಲಾವಿದರಿಗೆ ಗ್ರಾಮಸ್ಥರು ಬಣ್ಣಬಣ್ಣದ ರಂಗೋಲಿ ಚಿತ್ತಾರ ಬಿಡಿಸಿ ಬರಮಾಡಿಕೊಂಡರು. ಗ್ರಾಮದ ಪ್ರತಿಯೊಂದು ಬೀದಿಗಳು ತಳಿರು ತೋರಣಗಳಿಂದ ಶೃಂಗರಿಸಲಾಗಿತ್ತು. ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಡಿಜೆ ಸೌಂಡಿಗೆ ಯುವ ಪಡೆ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿತು.</p>.<p>ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಅರ್ಚಕ ಬಸವರಾಜ ಡೊಳ್ಳಿನ ಪೂಜೆ ಹಾಗೂ ಕಿತ್ತೂರು ಸಂಸ್ಥಾನ ಧ್ವಜಾರೋಹಣ ನೆರವೇರಿಸಿದರು. ಜಾನಪದ ಕಲಾ ಮೇಳ ಮೆರವಣಿಗೆಯಲ್ಲಿ ಜಿಲ್ಲೆ, ಹೊರ ಜಿಲ್ಲೆಯ ಕಲಾವಿದರು ತಮ್ಮ ಕಲಾ ಪ್ರದರ್ಶನದ ಮೂಲಕ ಜನ ಮನ ಗೆದ್ದರು.</p>.<p>ವಿಜಯನಗರ ಗೂಳಪ್ಪ ತಂಡದ ಪುರವಂತಿಕೆ, ಶಿವನಪ್ಪ ಚಂದರಗಿ ಹಾಗೂ ಸುರೇಶ ವಾಗಮೋಡೆ ಡೊಳ್ಳು ಕುಣಿತ, ಶಂಕ್ರವ್ವ ಮುಗಳಿ ಮಹಿಳಾ ಡೊಳ್ಳು ಕುಣಿತ, ರಾಮಚಂದ್ರ ಕಾಂಬಳೆ ನಾಸಿಕ್ ಡೋಲ್, ಭರತ್ ಕಲಾಚಂದ್ರ ಜಾಂಜ್ ಪಥಕ, ಮಹಾಂತೇಶ ಹೂಗಾರ ಸಂಬಳ ವಾದನ, ಶಿವಪ್ಪ ಕುಂಬಾರ ಕರಡಿ ಮಜಲು, ಮಿಲಿಂದ ಸಂಗಣ್ಣವರ ಹಲಗೆ ವಾದನ, ಬಾಲಪ್ಪ ಭಜಂತ್ರಿ ಅವರ ತಾಸೆ ವಾದನ, ಶಾಂತಿಸಾಗರ ಜಾಂಜ್ ಪಥಕ್, ಮಲ್ಲಿಕಾರ್ಜುನ ನಿಚ್ಚಣ್ಣಿ ಕರಡಿ ಮಜಲು, ಗಂಗಾಧರಯ್ಯ ಅಗೋರಿ, ಯೋಗೇಶ ವೀರಗಾಸೆ, ಲೋಹಿತ್ ಆಂಜನೇಯ ವೇಷ, ರಂಗಸ್ವಾಮಿ ಗೊಂಬೆ, ಲಕ್ಷ್ಮಣ ಡೊಳ್ಳು ಕುಣಿತ, ಸಣ್ಣಸ್ವಾಮಿ ಕಂಸಾಳೆ, ರವಿ ಮತ್ತು ತಂಡ ಕೊಂಬು ಕಹಳೆ, ರಾಜಮ್ಮ ಮತ್ತು ತಂಡ ಪಟಾತ ಕುಣಿತ, ಮಹಾಂತೇಶ ವಾಲಿ ಡೊಳ್ಳು ಕುಣಿತ, ಚಂದ್ರು ಸಾರವಾಡಗೊಂಬೆ ಕುಣಿತ, ಸದಾಶಿವ ಮಾಟೊಳ್ಳಿ ಕರಡಿ ಮಜಲು, ವಸಂತ ಆಚಾರ್ಯ ವೀರಗಾಸೆ, ಹಾಗೂ ವಿವಿಧ ನೃತ್ಯಗಳು ನೋಡುಗರ ಗಮನ ಸೆಳೆದವು.</p>.<p>ಆರೋಗ್ಯ ಅಧಿಕಾರಿ ಡಾ.ಎಸ್.ಎಸ್.ಸಿದ್ದನ್ನವರ, ಬಿಇಒ ಎ.ಎನ್.ಪ್ಯಾಟಿ, ಸಾಹಿತಿ ಬಸವರಾಜ ಕಮತ, ಗ್ರಾ.ಪಂ.ಸದಸ್ಯರಾದ ಬಸವರಾಜ ಕೊಡ್ಲಿ, ಇಮಾಮಹುಸೇನ ಖುದ್ದುನ್ನವರ, ರತ್ನಾ ಆನೆಮಠ, ಈರಣ್ಣ ಹಳೇಮನಿ, ಶಿವಕುಮಾರ ಪೂಜೇರ, ಬಾಬು ತಳವಾರ, ಸಂಗನಗೌಡ ಪಾಟೀಲ, ದೀಪಾ ಬಡವನ್ನವರ, ಗಂಗವ್ವ ಹೊಳೆಪ್ಪನವರ, ಮಂಜುಳಾ ಕುಡೋಳ್ಳಿ, ಸನಾ ಖುದ್ದುನ್ನವರ, ಮಹಾಂತೇಶ ಬೆನ್ನಿ, ಬಾಬು ಕುಡೊಳ್ಳಿ, ಗಂಗವ್ವ ಪೂಜೇರ, ಗ್ರಾಮದ ಮುಖಂಡರು, ಮಲ್ಲಿಕಾರ್ಜುನ ಕುಡೊಳ್ಳಿ, ಮಹೇಶ ಹಿರೇಮಠ, ಡಾ.ಬಿ.ಪಿ.ಹಿರೇಮಠ, ಅನೀಲ ಮೆಕಲಮರ್ಡಿ ಕಾರ್ಯದರ್ಶಿ ಪ್ರಭು ನರಗಟ್ಟಿ, ಉಪನ್ಯಾಕ ಚನ್ನಪ್ಪ ಹಕ್ಕಿ, ಬಸನಗೌಡ ಅಗಸಿಮನಿ, ಸುನೀಲ ಕುಲಕರ್ಣಿ, ಅರುಣ ಯಲಿಗಾರ, ಉಮೇಶ ಲಾಳ, ಮಹಾಂತೇಶ ಬೆಣ್ಣಿ ಹಾಗೂ ತಾಲೂಕು ಮಟ್ಟದnಅಧಿಕಾರಿಗಳು, ಸಾವಿರಾರು ನಾಗರಿಕರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>