‘ಬೆಳಗಾವಿ ಕ್ಷೇತ್ರದಲ್ಲಿ 5 ಲಕ್ಷಕ್ಕೂ ಹೆಚ್ಚು ಲಿಂಗಾಯತ ಮತದಾರರು ಇದ್ದಾರೆ. ಅವರು ನಮ್ಮ ಮಾತು ಕೇಳುವರೇ? ಅವರು ಮನಸ್ಸು ಮಾಡಿದ್ದರೆ ಮೃಣಾಲ್ ಗೆಲ್ಲಿಸಬಹುದಿತ್ತು. ಸಮುದಾಯದ ಮತದಾರರ ಒಲವು ತಿಳಿಯಲು ನಾಯಕರಿಗೆ ಸಾಧ್ಯವಾಗಲಿಲ್ಲ. ಚುನಾವಣೆಯಲ್ಲಿ ತಂತ್ರ ರೂಪಿಸುವ ಮುನ್ನ, ಮತದಾರರ ಒಲವು ಯಾವ ಕಡೆ ಇದೆ ಎಂದು ಅರಿಯಬೇಕು. ಗುಪ್ತಚರ ಮಾಹಿತಿ ಸಂಗ್ರಹಿಸಬೇಕು. ನಾವು ಮಾಡುತ್ತಿರುವ ತಪ್ಪು ಸರಿಪಡಿಸಿಕೊಂಡು, ಅದಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸಬೇಕು. ಸಾರ್ವಜನಿಕ ಜೀವನದಲ್ಲಿ ಬಹಳ ಸೂಕ್ಷ್ಮವಾಗಿ ಇರಬೇಕು’ ಎಂದರು.