ಸಿನಿಮೀಯ ಮಾದರಿಯಲ್ಲಿ ಎರಡು ಗುಂಪುಗಳ ನಡುವೆ ಜಗಳ ನಡೆಯಿತು. 30ಕ್ಕೂ ಹೆಚ್ಚು ಮಂದಿಯಿಂದಿಗೆ ವಿದ್ಯಾರ್ಥಿಗಳಲ್ಲದ ಕೆಲ ಯುವಕರು ಅಲ್ಲಿದ್ದರು. ಗಲಾಟೆಗೆ ಕುಮ್ಮಕ್ಕು ಕೊಡುತ್ತಿದ್ದರು. ಗಮನಿಸಿದ ದಾರಿಹೋಕರು ಎಷ್ಟು ಬುದ್ಧಿ ಹೇಳಿದರೂ, ಗದರಿಸಿದರೂ ಕೇಳುವ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ಇರಲಿಲ್ಲ! ವಿದ್ಯಾರ್ಥಿಯೊಬ್ಬನನ್ನು ಗುಂಪೊಂದು ಮನಬಂದಂತೆ ಥಳಿಸಿತು. ಸಮವಸ್ತ್ರ ಧರಿಸಿಲ್ಲ ವ್ಯಕ್ತಿಯೂ ಹಲ್ಲೆ ಮಾಡಿದ. ಅವರಿಂದ ತಪ್ಪಿಸಿಕೊಂಡು ಬಂದ ಆತ, ‘ನನ್ನ ಕಡೆಯವರನ್ನು ಕರೆಸಿ ನಿಮಗೆ ಬುದ್ಧಿ ಕಲಿಸುತ್ತೇನೆ’ ಎಂದು ಹೇಳುತ್ತಿದ್ದ.