ಸಾನ್ನಿಧ್ಯ ವಹಿಸಿದ್ದ ಕೂಡಲಸಂಗಮ ಬಸವಧರ್ಮ ಪೀಠಾಧ್ಯಕ್ಷೆ ಗಂಗಾದೇವಿ ತಾಯಿ ಮಾತನಾಡಿ, ‘ಶರಣರ ಆಶಯದಂತೆ ಪ್ರತಿ ವರ್ಷ ಜ. 11ರಿಂದ 14ರವರೆಗೆ ಕೂಡಲಸಂಗಮದಲ್ಲಿ ನಡೆಯುವ ಶರಣಮೇಳ ಬಸವಾಭಿಮಾನಿಗಳು, ಬಸವಭಕ್ತರು ಹಾಗೂ ಲಿಂಗಾಯತ ಧರ್ಮೀಯರ ಜಾಗತಿಕ ಸಮಾವೇಶವಾಗಿದೆ. ವರ್ಷದಿಂದ ವರ್ಷಕ್ಕೆ ಹೆಚ್ಚು ಜನರನ್ನು ಆಕರ್ಷಿಸುತ್ತಿದೆ. 1988ರಲ್ಲಿ ಶರಣರಿಂದ ಶರಣರಿಗಾಗಿಯೇ ಶರಣರೇ ಹಮ್ಮಿಕೊಂಡ ಮೇಳ ಜಾತಿ, ಮತ, ಪಂಥ, ಪ್ರಾಂತ್ಯದ ತಾರತಮ್ಯವಿಲ್ಲದೇ ಸಮಾನತೆ ಮತ್ತು ಸಹೋದರತೆ ಧ್ಯೇಯವನ್ನು ಸಾರುತ್ತಿದೆ. ದೇವರೊಬ್ಬರೆ ತಂದೆ, ಮನುಜರೆಲ್ಲರೂ ಒಂದೇ ಎಂಬ ತತ್ವವನ್ನು ಸಾರುತ್ತಾ ಬರುತ್ತಿದೆ’ ಎಂದು ತಿಳಿಸಿದರು.