<p><strong>ಮುನವಳ್ಳಿ</strong>: ‘ಹೆಸರಿಗಾಗಿ, ಐಶ್ವರ್ಯಗಾಗಿ ನಾವು ಬಡಿದಾಡಬಾರದು, ಸುಮ್ಮನೆ ಕಾಯಕ ಮಾಡುತ್ತ ಸಾಗಬೇಕು. ಮಹಾತ್ಮರಾದವರು ಎಂದಿಗೂ ಹೆಸರಿಗಾಗಿ ಬಡಿದಾಡಲಿಲ್ಲ. ನಾನು, ನನ್ನದು ಎನ್ನುವ ಭಾವ ತೊರೆದರೆ ಆತ್ಮೋನ್ನತಿಯಾಗುತ್ತದೆ. ಅದಕ್ಕೆಂದೇ ಬಸವಣ್ಣನವರು ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ ಎಂದಿದ್ದಾರೆ’ ಎಂದು ಅರಳಿಕಟ್ಟಿಯ ತೋಂಟದಾರ್ಯಮಠದ ಶಿವಮೂರ್ತಿ ಶ್ರೀ ಹೇಳಿದರು.</p>.<p>ಪಟ್ಟಣದ ಸೋಮಶೇಖರ ಮಠದಲ್ಲಿ ಶುಕ್ರವಾರ ಜರುಗಿದ ಲಿಂ. ಬಸವಲಿಂಗ ಸ್ವಾಮೀಜಿ ಅವರ ಪುಣ್ಯ ಸ್ಮರಣೋತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದರು.</p>.<p>ಹೊಸಳ್ಳಿಯ ಬೂದೀಶ್ವರ ಶ್ರೀ, ನರಗುಂದದ ಸಿದ್ದವೀರ ಶಿವಯೋಗಿ ಶಿವಾಚಾರ್ಯ ಶ್ರೀ, ಗೊರವನಕೊಳ್ಳದ ಶಿವಾನಂದ ಶ್ರೀ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ರೇಣುಕ ಶಿವಯೋಗಿ ಶಿವಾಚಾರ್ಯ ಶ್ರೀ ಅಧ್ಯಕ್ಷತೆ ವಹಿಸಿದ್ದರು.</p>.<p>ಕಡಬಿ ಶಿವಾಪೂರದ ಜಡಿತಲೆ ಮರುಳಸಿದ್ದ ಶಿವಾಚಾರ್ಯ ಶ್ರೀ, ಚಂದ್ರಶೇಖರ ಶಿವಾಚಾರ್ಯ ಶ್ರೀಗಳು, ಬಂಗಾರಜ್ಜನ ಮಠದ ವಿರೂಪಾಕ್ಷಯ್ಯ ಶ್ರೀಗಳು, ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ದಂಡಾಧಿಕಾರಿ ಮಲ್ಲಿಕಾಜರ್ುನ ಹೆಗ್ಗಣ್ಣವರ, ಅಸಿಸ್ಟಂಟ್ ಕಮೀಷನರ್ ಯಲ್ಲರಾಜ ಶಿಂಗಣ್ಣವರ, ಬಿ.ಇ.ಒ ಎ.ಎ.ಖಾಜಿ, ವೀರಣ್ಣ ಕಮ್ಮಾರ, ಡಾ. ಎಂ.ಬಿ.ಅಷ್ಟಗಿಮಠ ಅವರನ್ನು ಶ್ರೀಗಳು ಸತ್ಕರಿಸಿದರು.</p>.<p>ಅಂಬರೀಷ ಯಲಿಗಾರ, ಶ್ರೀಶೈಲ ಗೋಪಶೆಟ್ಟಿ, ದಾನಪ್ಪ ಗದಗಿನ, ಈರಣ್ಣ ಸಂಕಣ್ಣವರ, ಶಂಕರ ಜೋಗೋಜಿ, ಶೇಖರ ಮುಪ್ಪಿನವರಮಠ, ವಿಠ್ಠಲ ನಲಗೆ, ಶಿಕ್ಷಕ ಬಿ.ಬಿ.ಹುಲಿಗೊಪ್ಪ, ಗಂಗಾದರ ಗೊರಾಬಳ, ಜಂಗಮಾಭಿವೃದ್ದಿ ಸೇವಾ ಸಮಿತಿಯವರು ಇದ್ದರು.</p>.<div><blockquote>ವ್ಯಕ್ತಿತ್ವ ವಿಕಸನದಲ್ಲಿ ವಚನಗಳ ಪಾತ್ರ ಮಹತ್ವದ್ದಾಗಿವೆ. ನಿತ್ಯ ವಚನಗಳನ್ನು ಪಠಿಸಿದರೆ ಜೀವನದಲ್ಲಿ ಬದಲಾವಣೆ ಸಾಧ್ಯ</blockquote><span class="attribution"> ಶಿವಮೂರ್ತಿ ಶ್ರೀ ಅರಳಿಕಟ್ಟಿಯ ತೋಂಟದಾರ್ಯ ಮಠ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುನವಳ್ಳಿ</strong>: ‘ಹೆಸರಿಗಾಗಿ, ಐಶ್ವರ್ಯಗಾಗಿ ನಾವು ಬಡಿದಾಡಬಾರದು, ಸುಮ್ಮನೆ ಕಾಯಕ ಮಾಡುತ್ತ ಸಾಗಬೇಕು. ಮಹಾತ್ಮರಾದವರು ಎಂದಿಗೂ ಹೆಸರಿಗಾಗಿ ಬಡಿದಾಡಲಿಲ್ಲ. ನಾನು, ನನ್ನದು ಎನ್ನುವ ಭಾವ ತೊರೆದರೆ ಆತ್ಮೋನ್ನತಿಯಾಗುತ್ತದೆ. ಅದಕ್ಕೆಂದೇ ಬಸವಣ್ಣನವರು ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ ಎಂದಿದ್ದಾರೆ’ ಎಂದು ಅರಳಿಕಟ್ಟಿಯ ತೋಂಟದಾರ್ಯಮಠದ ಶಿವಮೂರ್ತಿ ಶ್ರೀ ಹೇಳಿದರು.</p>.<p>ಪಟ್ಟಣದ ಸೋಮಶೇಖರ ಮಠದಲ್ಲಿ ಶುಕ್ರವಾರ ಜರುಗಿದ ಲಿಂ. ಬಸವಲಿಂಗ ಸ್ವಾಮೀಜಿ ಅವರ ಪುಣ್ಯ ಸ್ಮರಣೋತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದರು.</p>.<p>ಹೊಸಳ್ಳಿಯ ಬೂದೀಶ್ವರ ಶ್ರೀ, ನರಗುಂದದ ಸಿದ್ದವೀರ ಶಿವಯೋಗಿ ಶಿವಾಚಾರ್ಯ ಶ್ರೀ, ಗೊರವನಕೊಳ್ಳದ ಶಿವಾನಂದ ಶ್ರೀ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ರೇಣುಕ ಶಿವಯೋಗಿ ಶಿವಾಚಾರ್ಯ ಶ್ರೀ ಅಧ್ಯಕ್ಷತೆ ವಹಿಸಿದ್ದರು.</p>.<p>ಕಡಬಿ ಶಿವಾಪೂರದ ಜಡಿತಲೆ ಮರುಳಸಿದ್ದ ಶಿವಾಚಾರ್ಯ ಶ್ರೀ, ಚಂದ್ರಶೇಖರ ಶಿವಾಚಾರ್ಯ ಶ್ರೀಗಳು, ಬಂಗಾರಜ್ಜನ ಮಠದ ವಿರೂಪಾಕ್ಷಯ್ಯ ಶ್ರೀಗಳು, ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ದಂಡಾಧಿಕಾರಿ ಮಲ್ಲಿಕಾಜರ್ುನ ಹೆಗ್ಗಣ್ಣವರ, ಅಸಿಸ್ಟಂಟ್ ಕಮೀಷನರ್ ಯಲ್ಲರಾಜ ಶಿಂಗಣ್ಣವರ, ಬಿ.ಇ.ಒ ಎ.ಎ.ಖಾಜಿ, ವೀರಣ್ಣ ಕಮ್ಮಾರ, ಡಾ. ಎಂ.ಬಿ.ಅಷ್ಟಗಿಮಠ ಅವರನ್ನು ಶ್ರೀಗಳು ಸತ್ಕರಿಸಿದರು.</p>.<p>ಅಂಬರೀಷ ಯಲಿಗಾರ, ಶ್ರೀಶೈಲ ಗೋಪಶೆಟ್ಟಿ, ದಾನಪ್ಪ ಗದಗಿನ, ಈರಣ್ಣ ಸಂಕಣ್ಣವರ, ಶಂಕರ ಜೋಗೋಜಿ, ಶೇಖರ ಮುಪ್ಪಿನವರಮಠ, ವಿಠ್ಠಲ ನಲಗೆ, ಶಿಕ್ಷಕ ಬಿ.ಬಿ.ಹುಲಿಗೊಪ್ಪ, ಗಂಗಾದರ ಗೊರಾಬಳ, ಜಂಗಮಾಭಿವೃದ್ದಿ ಸೇವಾ ಸಮಿತಿಯವರು ಇದ್ದರು.</p>.<div><blockquote>ವ್ಯಕ್ತಿತ್ವ ವಿಕಸನದಲ್ಲಿ ವಚನಗಳ ಪಾತ್ರ ಮಹತ್ವದ್ದಾಗಿವೆ. ನಿತ್ಯ ವಚನಗಳನ್ನು ಪಠಿಸಿದರೆ ಜೀವನದಲ್ಲಿ ಬದಲಾವಣೆ ಸಾಧ್ಯ</blockquote><span class="attribution"> ಶಿವಮೂರ್ತಿ ಶ್ರೀ ಅರಳಿಕಟ್ಟಿಯ ತೋಂಟದಾರ್ಯ ಮಠ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>