ಬೆಳಗಾವಿ: ‘ಸಾಹಿತಿ ಡಾ.ಎಸ್.ಎಲ್. ಕುಲಕರ್ಣಿ ಅವರು ಸಾಂಸ್ಕೃತಿಕ ಲೋಕದ ಶಕ್ತಿ ಇದ್ದಂತೆ’ ಎಂದು ವಕೀಲ ಎಸ್.ಎಂ. ಕುಲಕರ್ಣಿ ಹೇಳಿದರು.
ನಗರದ ಸ್ವಾಮಿನಾಥ ಕಾಲೊನಿಯಲ್ಲಿ ಶುಕ್ರವಾರ ನಡೆದ ಎಸ್.ಎಲ್. ಕುಲಕರ್ಣಿ ಅವರ ಅಭಿನಂದನಾ ಗ್ರಂಥ ‘ಶ್ರೀನಿಧಿ’ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಸಾಹಿತ್ಯವಷ್ಟೇ ಅಲ್ಲದೆ ಶಂಕರ ಜಯಂತಿ, ಅಗಡಿ ಸ್ವಾಮೀಜಿ ಉತ್ಸವ, ಬ್ರಾಹ್ಮಣ ಸಮ್ಮೇಳನ ಹೀಗೆ ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಸಮಾಜಕ್ಕೆ ಅವರ ಸೇವೆ ಅನುಪಮವಾದುದು’ ಎಂದರು.
ಕೃತಿ ಪರಿಚಯಿಸಿದ ಲೇಖಕ ಶಿರೀಷ ಜೋಶಿ, ‘ಕೃತಿಯು ಸಾಹಿತ್ಯ ನಿಧಿ ಹಾಗೂ ವ್ಯಕ್ತಿತ್ವದ ನಿಧಿಯಿಂದ ಕೂಡಿದೆ’ ಎಂದು ತಿಳಿಸಿದರು.
ಗ್ರಂಥದ ಪ್ರಧಾನ ಸಂಪಾದಕ ಡಾ.ಎಸ್.ಬಿ. ಉತ್ನಾಳ ಮಾತನಾಡಿದರು.
ಡಾ.ಎಂ.ಎಲ್. ತುಕ್ಕಾರ, ಕನ್ನಡ ಹೋರಾಟಗಾರ ಅಶೋಕ ಚಂದರಗಿ, ಉಷಾ ಶ್ರೀನಿವಾಸ ಕುಲಕರ್ಣಿ, ಅನಂತ ಗೋನಬಾಳ, ಪ್ರೊ.ಶ್ರೀಧರ ಹುಕ್ಕೇರಿ, ಪ್ರೊ.ಟಿ. ವೆಂಕಟೇಶ, ಎನ್.ಡಿ. ದೇಶಪಾಂಡೆ, ರಂಜನಾ ನಾಯಕ, ಜಯಂತ ಜೋಶಿ, ಪ್ರೊ.ಐ.ಎಸ್. ಕುಂಬಾರ, ಜಯಪ್ರಕಾಶ ಜೋಶಿ ಇದ್ದರು.