<p><strong>ಬೆಳಗಾವಿ: </strong>‘ಸಾಹಿತಿ ಡಾ.ಎಸ್.ಎಲ್. ಕುಲಕರ್ಣಿ ಅವರು ಸಾಂಸ್ಕೃತಿಕ ಲೋಕದ ಶಕ್ತಿ ಇದ್ದಂತೆ’ ಎಂದು ವಕೀಲ ಎಸ್.ಎಂ. ಕುಲಕರ್ಣಿ ಹೇಳಿದರು.</p>.<p>ನಗರದ ಸ್ವಾಮಿನಾಥ ಕಾಲೊನಿಯಲ್ಲಿ ಶುಕ್ರವಾರ ನಡೆದ ಎಸ್.ಎಲ್. ಕುಲಕರ್ಣಿ ಅವರ ಅಭಿನಂದನಾ ಗ್ರಂಥ ‘ಶ್ರೀನಿಧಿ’ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.</p>.<p>‘ಸಾಹಿತ್ಯವಷ್ಟೇ ಅಲ್ಲದೆ ಶಂಕರ ಜಯಂತಿ, ಅಗಡಿ ಸ್ವಾಮೀಜಿ ಉತ್ಸವ, ಬ್ರಾಹ್ಮಣ ಸಮ್ಮೇಳನ ಹೀಗೆ ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಸಮಾಜಕ್ಕೆ ಅವರ ಸೇವೆ ಅನುಪಮವಾದುದು’ ಎಂದರು.</p>.<p>ಕೃತಿ ಪರಿಚಯಿಸಿದ ಲೇಖಕ ಶಿರೀಷ ಜೋಶಿ, ‘ಕೃತಿಯು ಸಾಹಿತ್ಯ ನಿಧಿ ಹಾಗೂ ವ್ಯಕ್ತಿತ್ವದ ನಿಧಿಯಿಂದ ಕೂಡಿದೆ’ ಎಂದು ತಿಳಿಸಿದರು.</p>.<p>ಗ್ರಂಥದ ಪ್ರಧಾನ ಸಂಪಾದಕ ಡಾ.ಎಸ್.ಬಿ. ಉತ್ನಾಳ ಮಾತನಾಡಿದರು.</p>.<p>ಡಾ.ಎಂ.ಎಲ್. ತುಕ್ಕಾರ, ಕನ್ನಡ ಹೋರಾಟಗಾರ ಅಶೋಕ ಚಂದರಗಿ, ಉಷಾ ಶ್ರೀನಿವಾಸ ಕುಲಕರ್ಣಿ, ಅನಂತ ಗೋನಬಾಳ, ಪ್ರೊ.ಶ್ರೀಧರ ಹುಕ್ಕೇರಿ, ಪ್ರೊ.ಟಿ. ವೆಂಕಟೇಶ, ಎನ್.ಡಿ. ದೇಶಪಾಂಡೆ, ರಂಜನಾ ನಾಯಕ, ಜಯಂತ ಜೋಶಿ, ಪ್ರೊ.ಐ.ಎಸ್. ಕುಂಬಾರ, ಜಯಪ್ರಕಾಶ ಜೋಶಿ ಇದ್ದರು.</p>.<p>ನಿರ್ಮಲಾ ಪ್ರಕಾಶ ಪ್ರಾರ್ಥಿಸಿದರು. ನಾರಾಯಣ ಗಣಾಚಾರಿ ಸ್ವಾಗತಿಸಿದರು. ನೀರಜಾ ಗಣಾಚಾರಿ ನಿರೂಪಿಸಿದರು. ಪ್ರತಿಮಾ ರವಿರಾಜ ದೀಕ್ಷಿತ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ: </strong>‘ಸಾಹಿತಿ ಡಾ.ಎಸ್.ಎಲ್. ಕುಲಕರ್ಣಿ ಅವರು ಸಾಂಸ್ಕೃತಿಕ ಲೋಕದ ಶಕ್ತಿ ಇದ್ದಂತೆ’ ಎಂದು ವಕೀಲ ಎಸ್.ಎಂ. ಕುಲಕರ್ಣಿ ಹೇಳಿದರು.</p>.<p>ನಗರದ ಸ್ವಾಮಿನಾಥ ಕಾಲೊನಿಯಲ್ಲಿ ಶುಕ್ರವಾರ ನಡೆದ ಎಸ್.ಎಲ್. ಕುಲಕರ್ಣಿ ಅವರ ಅಭಿನಂದನಾ ಗ್ರಂಥ ‘ಶ್ರೀನಿಧಿ’ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.</p>.<p>‘ಸಾಹಿತ್ಯವಷ್ಟೇ ಅಲ್ಲದೆ ಶಂಕರ ಜಯಂತಿ, ಅಗಡಿ ಸ್ವಾಮೀಜಿ ಉತ್ಸವ, ಬ್ರಾಹ್ಮಣ ಸಮ್ಮೇಳನ ಹೀಗೆ ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಸಮಾಜಕ್ಕೆ ಅವರ ಸೇವೆ ಅನುಪಮವಾದುದು’ ಎಂದರು.</p>.<p>ಕೃತಿ ಪರಿಚಯಿಸಿದ ಲೇಖಕ ಶಿರೀಷ ಜೋಶಿ, ‘ಕೃತಿಯು ಸಾಹಿತ್ಯ ನಿಧಿ ಹಾಗೂ ವ್ಯಕ್ತಿತ್ವದ ನಿಧಿಯಿಂದ ಕೂಡಿದೆ’ ಎಂದು ತಿಳಿಸಿದರು.</p>.<p>ಗ್ರಂಥದ ಪ್ರಧಾನ ಸಂಪಾದಕ ಡಾ.ಎಸ್.ಬಿ. ಉತ್ನಾಳ ಮಾತನಾಡಿದರು.</p>.<p>ಡಾ.ಎಂ.ಎಲ್. ತುಕ್ಕಾರ, ಕನ್ನಡ ಹೋರಾಟಗಾರ ಅಶೋಕ ಚಂದರಗಿ, ಉಷಾ ಶ್ರೀನಿವಾಸ ಕುಲಕರ್ಣಿ, ಅನಂತ ಗೋನಬಾಳ, ಪ್ರೊ.ಶ್ರೀಧರ ಹುಕ್ಕೇರಿ, ಪ್ರೊ.ಟಿ. ವೆಂಕಟೇಶ, ಎನ್.ಡಿ. ದೇಶಪಾಂಡೆ, ರಂಜನಾ ನಾಯಕ, ಜಯಂತ ಜೋಶಿ, ಪ್ರೊ.ಐ.ಎಸ್. ಕುಂಬಾರ, ಜಯಪ್ರಕಾಶ ಜೋಶಿ ಇದ್ದರು.</p>.<p>ನಿರ್ಮಲಾ ಪ್ರಕಾಶ ಪ್ರಾರ್ಥಿಸಿದರು. ನಾರಾಯಣ ಗಣಾಚಾರಿ ಸ್ವಾಗತಿಸಿದರು. ನೀರಜಾ ಗಣಾಚಾರಿ ನಿರೂಪಿಸಿದರು. ಪ್ರತಿಮಾ ರವಿರಾಜ ದೀಕ್ಷಿತ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>